ಕತ್ತು ಸೀಳಿ ವ್ಯಕ್ತಿಯೊಬ್ಬನ ಕೊಲೆ – ಮಂಚಕ್ಕೆ ಎರಡು ಕೈ ಗಳನ್ನು ಕಟ್ಟಿ ಹಾಕಿ ಕೊಲೆ…..

Suddi Sante Desk

ಬಳ್ಳಾರಿ –

ಮಂಚಕ್ಕೆ ಎರಡೂ ಕೈಗಳನ್ನು ಕಟ್ಟಿಹಾಕಿ ಕತ್ತು ಕೊಯ್ದ ಸ್ಥಿತಿಯಲ್ಲಿ ಮೃತ ದೇಹವೊಂದು ಪತ್ತೆಯಾದ ಘಟನೆ ಬಳ್ಳಾರಿಯ ತೋರಣಗಲ್ ನಲ್ಲಿ ನಡೆದಿದೆ‌‌.ಇಲ್ಲಿನ ಮನೆಯೊಂದರಲ್ಲಿ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ತೋರಣಗಲ್ ನಲ್ಲಿ ಇಂಥದೊಂದು ಅಮಾನುಷ ಕೃತ್ಯ ನಡೆದಿದೆ. ಕೊಲೆಯಾದ ಪತ್ನಿಯಿಂದಲೇ ಹತ್ಯೆ ಎನ್ನುವ ಗುಮಾನಿ ಕೇಳಿ ಬರುತ್ತಿದೆ.ಮಂಚಕ್ಕೆ ಎರಡೂ ಕೈಗಳಿಂದ ಕಟ್ಟಿಹಾಕಿ ಕತ್ತು ಕೊಯ್ದ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿದ್ದು ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ತನಿಖೆ ಮಾಡತಾ ಇದ್ದಾರೆ.ಪಶ್ಚಿಮ ಬಂಗಾಳ ನಿವಾಸಿ ಆಶಿಶ್ ಡೇ (30) ಹತ್ಯೆಯಾದ ವ್ಯಕ್ತಿಯಾಗಿದ್ದಾರೆ.ಪಶ್ಚಿಮ ಬಂಗಾಳದ ಮಾಯ ಹತ್ಯೆ ಮಾಡಿದ ಮಹಿಳೆಯಾಗಿದ್ದಾಳೆ ಎಂಬ ಆರೋ ಪ ಕೇಳಿ ಬಂದಿದೆ.ಕೊಲೆಯಾದ ನಾಲ್ಕು ದಿನದಿಂದ ಪತ್ನಿ ನಾಪತ್ತೆಯಾಗಿದ್ದು ಮೃತ ಆಶಿಶ್ ಹೋಟಲ್ ಗಳಲ್ಲಿ ಕೆಲಸ ಮಾಡ್ತಿದ್ದ ಎನ್ನಲಾಗಿದೆ. ಇವರಿಬ್ಬರು ಪಶ್ಚಿಮ ಬಂಗಾಳದ ಮೂಲದವರೆಂದು ಖಾಸಿಂ ಎನ್ನುವರ ಮನೆ ಬಾಡಿಗೆ ಪಡೆದ್ದರು.ಮನೆಗೆ ಬಂದು ನಾಲ್ಕು ದಿನಗಳ ಬಳಿಕ ಮನೆಗೆ ಬೀಗ ಹಾಕಿ ದಂಪತಿ ನಾಪತ್ತೆ.ದುರ್ವಾಸನೆ ಬಂದ ಹಿನ್ನೆಲೆ ಮನೆ ಮಾಲಿಕ ರಿಂದ ಬಾಗಿಲು ತೆರೆದು ಪರಿಶೀಲನೆ.ಕೊಲೆಗೆ ನಿಖರ ವಾದ ಕಾರಣ ತಿಳಿದು ಬಂದಿಲ್ಲ.ತೊರಣಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೃತನ ಸಂಬಂಧಿಗಳೂ ಇನ್ನೂ ಬಾರಾದೇ ಇರೋದ್ರಿಂದ ವಿಮ್ಸ್ ಆಸ್ಪತ್ರೆ ಶವಾಗಾರದಲ್ಲಿ ಶವವನ್ನು ಇಡಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.