ಸಾಂಬಾರು ಪಾತ್ರೆಗೆ ಬಿದ್ದು ಅಡುಗೆ ಸಹಾಯಕಿ ಸಾವು – ಅಡುಗೆ ತಯಾರಿಕೆ ಸಮಯದಲ್ಲಿ ಕಾಲು ಜಾರಿ ಬಿದ್ದು ಸಾವು ಶಿಕ್ಷಕ ಬಂಧುಗಳಿಂದ ಸಂತಾಪ…..

Suddi Sante Desk

ಮಂಗಳೂರು

ಅಡುಗೆ ತಯಾರು ಮಾಡುವ ಸಮಯದಲ್ಲಿ ಸಾಂಬಾರ್ ಗೆ ಅಡುಗೆ ತಯಾರಿಕೆ ಕಾರ್ಯಕರ್ತೆಯೊಬ್ಬರು ಬಿದ್ದು ಸಾವಿಗೀಡಾಗಿದ ಘಟನೆ ಮಂಗಳೂರಿನಲ್ಲಿ ನಡೆದಿದೆ ಹೌದು ಬಿಸಿಯೂಟದ ಅಡುಗೆ ಸಹಾಯಕಿ ಸಾಂಬಾರು ಪಾತ್ರೆಗೆ ಬಿದ್ದು ಸಾವಿಗೀಡಾಗಿದ್ದಾರೆ.ಇಂಥದ್ದೊಂದು ಅವಘಡ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಂಭವಿಸಿದೆ.

ಅಗ್ನೇಸ್ ಪ್ರಮೀಳಾ ಡಿಸೋಜಾ (37) ಸಾವಿಗೀಡಾದ ಮಹಿಳೆಯಾಗಿದ್ದಾಳೆ.ಇವರು ಪುತ್ತೂರಿನ ವಿಕ್ಟರ್ಸ್ ಶಾಲೆ ಯಲ್ಲಿ ಅಡುಗೆ ಸಹಾಯಕಿಯಾಗಿದ್ದರು.ಅಡುಗೆ ತಯಾರಿ ಸಂದರ್ಭದ ಆಕಸ್ಮಿಕವಾಗಿ ಕಾಲು ಜಾರಿ ಸಾಂಬಾರು ಪಾತ್ರೆಗೆ ಬಿದ್ದಿದ್ದರು.ಈ ಅವಘಡ ಮೇ 30‌ ರಂದು ನಡೆ ದಿತ್ತು.ಅಂದು ತಕ್ಷಣ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅಂದಿನಿಂದಲೂ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವಿಗೀಡಾಗಿದ್ದಾರೆ.ಈ ಸಂಬಂಧ ಪುತ್ತೂರು ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.