ಬೆಂಗಳೂರು –
ರಾಜ್ಯದಲ್ಲಿನ ಶಿಕ್ಷಣ ಇಲಾಖೆಯ ಸಿಆರ್ ಪಿ ಮತ್ತು ಬಿಆರ್ ಪಿ ರವರಿಗೆ ಪರೀಕ್ಷೆ ಗಣಕಯಂತ್ರ ಜ್ಞಾನಕ್ಕೆ ಸಂಭಂಧಿಸಿ ದಂತೆ ಪ್ರಮಾಣಪತ್ರಗಳನ್ನು ಯಾವುದಾದರೂ ಸಂಸ್ಥೆ ಗಳಿಂದ ತಗೆದುಕೊಳ್ಳುವಂತೆ ಇಲಾಖೆ ಸೂಚಿಸಿದ ಸಂಸ್ಥೆ ಯಿಂದ ತಗೆದು ಕೊಳ್ಳುವಂತೆ ಸೂಚನೆ ನೀಡಿ ಆದೇಶವನ್ನು ಮಾಡಬೇಕೆಂದು ಒತ್ತಾಯ ಮಾಡಿದ್ದಾರೆ.
ಇದರಿಂದಾಗಿ ಶಿಕ್ಷಕರಿಗೆ ಅನುಕೂಲ ಆಗುತ್ತದೆ ಎಂದು ರಾಜ್ಯದ ಸಿಆರ್ ಪಿ ಮತ್ತು ಬಿಆರ್ ಪಿ ಪರವಾಗಿ ಪ್ರಾಥ ಮಿಕ ಶಾಲಾ ಶಿಕ್ಷಕರ ಸಂಘದ ಸರ್ವ ಸದಸ್ಯರ ಪರವಾಗಿ ಸಂಘದ ರಾಜ್ಯಾಧ್ಯಕ್ಷರಾಗಿರುವ ಶಂಭುಲಿಂಗನ ಗೌಡ ಪಾಟೀಲ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಇಲಾಖೆಯ ಆಯುಕ್ತರಿಗೆ ಪತ್ರವನ್ನು ಬರೆದು ಒತ್ತಾಯ ವನ್ನು ಮಾಡಿದ್ದಾರೆ.