ಶಿಕ್ಷಕರ ಸಮಸ್ಯೆಗಳ ಕುರಿತಂತೆ DDPI ರನ್ನು ಭೇಟಿಯಾದ KSPSTA ಟೀಮ್ – ಶಿಕ್ಷಕರ ಸಮಸ್ಯೆ ಸೇರಿದಂತೆ ಹಲವಾರು ವಿಚಾರಗಳ ಕುರಿತಂತೆ ಚರ್ಚೆಯನ್ನು ಮಾಡಿದ ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿ ನಿಯೋಗ…..

Suddi Sante Desk
ಶಿಕ್ಷಕರ ಸಮಸ್ಯೆಗಳ ಕುರಿತಂತೆ DDPI ರನ್ನು ಭೇಟಿಯಾದ KSPSTA ಟೀಮ್ – ಶಿಕ್ಷಕರ ಸಮಸ್ಯೆ ಸೇರಿದಂತೆ ಹಲವಾರು ವಿಚಾರಗಳ ಕುರಿತಂತೆ ಚರ್ಚೆಯನ್ನು ಮಾಡಿದ ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿ ನಿಯೋಗ…..

ವಿಜಯಪುರ

ಶಿಕ್ಷಕರ ಸಮಸ್ಯೆಗಳ ಕುರಿತಂತೆ DDPI ರನ್ನು ಭೇಟಿಯಾದ KSPSTA ಟೀಮ್ – ಶಿಕ್ಷಕರ ಸಮಸ್ಯೆ ಸೇರಿದಂತೆ ಹಲವಾರು ವಿಚಾರಗಳ ಕುರಿತಂತೆ ಚರ್ಚೆಯನ್ನು ಮಾಡಿದ ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿ ನಿಯೋಗ ಹೌದು ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಕೆಲ ಬೇಡಿಕೆಗಳ ಕುರಿತಂತೆ ವಿಜಯಪುರ ಡಿಡಿಪಿಐ ಅವರನ್ನು ಭೇಟಿಯಾಗಿ ಚರ್ಚೆಯನ್ನು ಮಾಡಿದರು.

ಹೌದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ವಿಜಯಪುರ ಜಿಲ್ಲಾ ಘಟಕದಿಂದ ಡಿಡಿಪಿಐ ಎನ್ ಎಚ್ ನಾಗೂರ ಅವರನ್ನು ಭೇಟಿ ಮಾಡಲಾಯಿತು.ಉಪನಿರ್ದೇಶಕರ ಕಚೇರಿಯ ಲ್ಲಿ ರಾಜ್ಯ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿ ಭೇಟಿಯಾಗಿ ಜಿಲ್ಲೆಯ ಶಿಕ್ಷಕರ ಕೆಲ ಪ್ರಮುಖ ಬೇಡಿಕೆಗಳ ಕುರಿ ತಂತೆ ಚರ್ಚೆಯನ್ನು ಮಾಡಲಾಯಿತು.

ಪ್ರಮುಖವಾಗಿ ಶಿಕ್ಷಕರ ಬಡ್ತಿ ಪ್ರಕ್ರಿಯೆಯನ್ನು ತಕ್ಷಣ ಆರಂಭ ಮಾಡಬೇಕು.ಮುಖ್ಯ ಗುರುಗಳ ಹುದ್ದೆಗೆ ಬಡ್ತಿ ಕೊಡಲು ಪಟ್ಟಿಯನ್ನು ಸಿದ್ದಮಾ ಡಲು ವಿನಂತಿಯನ್ನು ಮಾಡಲಾಯಿತು.ಇನ್ನೂ ಇದರೊಂದಿಗೆ ಗುರುಭವನ ಕೆಲಸದ ಕುರಿತಂತೆ ಕೂಡಾ ಚರ್ಚೆಯನ್ನು ಮಾಡಲಾಯಿತು.ಹಾಗೆ ಇಂಡಿ ತಾಲ್ಲೂಕಿನಲ್ಲಿ ಶೈಕ್ಷಣಿಕ ಸಮ್ಮೇಳನ ಜೊತೆಗೆ ಶೈಕ್ಷಣಿಕ ಅಭಿವೃದ್ದಿಗೆ ಕೈಗೊಳ್ಳಬೇಕಾದ ಅಂಶಗಳ ಕುರಿತಂತೆಯೂ ಕೂಡಾ ಸಮಗ್ರವಾಗಿ ಚರ್ಚೆಯನ್ನು ಮಾಡಿದರು.

ಈ ಒಂದು ಸಂದರ್ಭದಲ್ಲಿ ಚಂದ್ರಶೇಖರ ನುಗ್ಗಲಿ ಅವರೊಂದಿಗೆ ಜಿಲ್ಲಾ ಸಂಘಟನೆಯ ಕಾರ್ಯ ದರ್ಶಿ ಅರ್ಜುನ ಲಮಾಣಿ,ಹನಮಂತ ಕೊನದಿರ ಅಲ್ಲಾಭಕ್ಷ ವಾಲಿಕಾರ,ಅಶೋಕ ಲಿಮಕಾರ ಸೇರಿ ದಂತೆ ಹಲವರು ಉಫಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ವಿಜಯಪುರ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.