ನನ್ನ ಅಂತ್ಯಕ್ರಿಯೆಗೆ ಕುಮಾರಸ್ವಾಮಿ ಬರಬೇಕು – ಡೆತ್ ನೋಟ್ ಬರೆದಿಟ್ಟು ಆಟೋ ಚಾಲಕ ಆತ್ಮಹತ್ಯೆ

Suddi Sante Desk

ರಾಮನಗರ –

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನನ್ನ ಅಂತ್ಯ ಕ್ರಿಯೆಗೆ ಬರಬೇಕು ಹೀಗೆ ಡೆತ್ ನೋಟ್ ಬರೆದಿಟ್ಟು ಆಟೋ ಚಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮನಗರದಲ್ಲಿ ನಡೆದಿದೆ.ಜಯರಾಮು ಸಾವನ್ನಪ್ಪಿರುವ ಆಟೋ ಚಾಲಕನಾಗಿದ್ದಾನೆ.

ರಾಮನಗರದ ಟೌನ್ ನಿವಾಸಿಯಾಗಿದ್ದಾರೆ‌. ಜಯರಾಮು ಕಾಲು ಗ್ಯಾಂಗ್ರೀನ್ ನಿಂದ ಮೃತ ಪಟ್ಟಿದ್ದು ಜಯರಾಮ್ ತನ್ನ ಜೋಬಿನಲ್ಲಿ ಬರೆದಿಟ್ಟಿದ್ದ ಡೆತ್ ನೋಟ್ ಪತ್ತೆಯಾಗಿದೆ.ನನಗೆ ಬುದ್ಧಿಮಾಂದ್ಯ ಮಗನಿದ್ದಾನೆ ನನ್ನ ಮಗನಿಗೆ ಕುಮಾರಸ್ವಾಮಿ ಧನ ಸಹಾಯ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾನೆ.

ನಿಮ್ಮ ಋಣವನ್ನ ಮುಂದಿನ ಜನ್ಮದಲ್ಲಿ ತೀರಿಸುತ್ತೇನೆ.ನನ್ನ ಮಗನಿಗೆ ಒಂದು ದಾರಿ ಮಾಡಿಕೊಡಿ ಕುಮಾರಣ್ಣ ಅಂತಾ ತುಂಬಾ ಭಾವನಾತ್ಮಕವಾಗಿ ಡೆತ್ ನೋಟ್ ಬರೆದಿದ್ದಾರೆ‌.ತನ್ನ ಸಾಕು ನಾಯಿ ರಾಮುಗು ವಿದಾಯವನ್ನು ಮೃತ ಜಯರಾಮ್ ಹೇಳಿದ್ದು ಇದೆಲ್ಲದರ ನಡುವೆ ಕುಮಾರಸ್ವಾಮಿ ಅಂತ್ಯಕ್ರಿಯೆಗೆ ಹೋಗತಾರೆನಾ ಬುದ್ಧಿಮಾಂದ್ಯ ಮಗನಿಗೆ ಸಹಾಯ ಮಾಡ್ತಾರ ಕಾದು ನೋಡಬೇಕು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.