This is the title of the web page
This is the title of the web page

Live Stream

[ytplayer id=’1198′]

August 2025
T F S S M T W
 123456
78910111213
14151617181920
21222324252627
28293031  

| Latest Version 8.0.1 |

State News

ಶಿಕ್ಷಕರ,ಸಂಘಟನೆಯ ನಾಯಕರ ಒತ್ತಡದಿಂದ ರಾಜೀನಾಮೆ ಹಿಂಪಡೆದ ಮಾಲತೇಶ್ ಬಬ್ಬಜ್ಜಿ ಸಂಘಟನಾ ಕಾರ್ಯದರ್ಶಿ ಹುದ್ದೆ ಯಲ್ಲಿ ಮುಂದುವರಿಕೆ…..

WhatsApp Group Join Now
Telegram Group Join Now

ಬೆಂಗಳೂರು –

ಶಿಕ್ಷಕರ ಸಮಸ್ಯೆಗಳ ಕುರಿತಂತೆ ಚರ್ಚೆ ಮಾಡಲು ಇತ್ತೀಚಿಗ ಷ್ಟೇ ರಾಜ್ಯ ಸರ್ಕಾರಿ ನೌಕರರ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಕರೆದ ಸಭೆಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಮಾಲತೇಶ್ ಬಬ್ಬಜ್ಜಿ ಪಾಲ್ಗೊಂಡು ಶಿಕ್ಷಕರ ಸಮಸ್ಯೆ ಸೇರಿದಂತೆ OTS ಕುರಿತು ವೇದಿಕೆಯ ಮೇಲೆ ಧ್ವನಿ ಎತ್ತಿದ್ದರು.ಈ ಒಂದು ಸಭೆಯಲ್ಲಿ ಇವರು ಪಾಲ್ಗೊಂಡಿದ್ದಕ್ಕಾ ಗಿ ಇವರಿಗೆ ಸಂಘಟನೆಯ ನಾಯಕರು ಇದೊಂದು ಮಹಾ ಪರಾಧ ಎಂಬಂತೆ ಮಾಡುತ್ತಿದ್ದಂತೆ ಇದರಿಂದಾಗಿ ಬೇಸತ್ತ ಇವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿ ದ್ದರು‌.ಈ ಒಂದು ವಿಚಾರ ವನ್ನು ಸುದ್ದಿ ಸಂತೆ ಪ್ರಕಟ ಮಾಡಿತ್ತು ಸುದ್ದಿ ಪ್ರಕಟಗೊಂಡ ಬೆನ್ನಲ್ಲೇ ರಾಜೀನಾಮೆ ನೀಡಲು ಮುಂದಾಗಿದ್ದ ಮಾಲತೇಶ್ ಬಬ್ಬಜ್ಜಿ ಅವರಿಗೆ ತಮ್ಮ ನಿರ್ಧಾರವನ್ನು ಹಿಂದೆ ತೆಗೆದುಕೊಳ್ಳುವಂತೆ ಒತ್ತಾಯ ಮಾಡಿದ್ದಾರೆ

ಹೌದು ಈವರೆಗೆ ಸಂಘವನ್ನು ಬೆಳೆಸುತ್ತಾ ಶಿಕ್ಷಕರ ಸಮಸ್ಯೆ ಗಳ ಕುರಿತಂತೆ ಧ್ವನಿ ಎತ್ತಿರುವ ಮಾಲತೇಶ್ ಬಬ್ಬಜ್ಜಿ ಯವರು ಈಗ ತಮ್ಮ ಸ್ಥಾನಕ್ಕಾಗಿ ರಾಜೀನಾಮೆಯನ್ನು ನೀಡುವ ವಿಚಾರ ದಿಂದ ರಾಜ್ಯದ ಮೂಲೆ ಮೂಲೆ ಗಳಿಂದ ಶಿಕ್ಷಕರು ಅವರ ಅಭಿಮಾನಿಗಳು ಆಪ್ತರು ಹಿತೈಷಿಗಳು ದಯಮಾಡಿ ಈ ಒಂದು ನಿರ್ಧಾರವನ್ನು ಹಿಂದೆ ತಗೆದು ಕೊಳ್ಳಿ ಎಂದು ಒತ್ತಾಯ ಮಾಡಿದ್ದಾರೆ

ಹೌದು ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆಯನ್ನು ನೀಡಲು ತಿರ್ಮಾನ ಹಿಂದೆ ಪಡೆಯಿರಿ ಎಂದು ನಾಡಿನ ಮೂಲೆ ಮೂಲೆಗಳಿಂದ ಒತ್ತಾಯ ಒತ್ತಡ ಕೇಳಿ ಬಂದಿದೆ.

ನೀವು ತಗೆದುಕೊಂಡ ನಿರ್ಧಾರವನ್ನು ಈ ಕೂಡಲೇ ಹಿಂದೆ ಪಡೆಯಿರಿ ಎಂದಿದ್ದಾರೆ ನಿಮ್ಮೊಂದಿಗೆ ನಿಮ್ಮ ಹೋರಾಟಕ್ಕೆ ನಾವು ನಿಂತು ಕೊಳ್ಳುತ್ತವೆ ಎಂದಿದ್ದಾರೆ ಜೊತೆಗೆ ಈ ಸಂಘಟನೆಯ ನಾಯಕರು ಕೂಡಾ ಆತ್ಮವಿಶ್ವಾಸದ ಮಾತುಗಳನ್ನು ಹೇಳಿದ್ದಾರೆ ಒಟ್ಟಾರೆ ರಾಜೀನಾಮೆ ಮಾತಿನ ವಿರುದ್ಧ ಮಾಲತೇಶ್ ಬಬ್ಬಜ್ಜಿ ಅವರಿಗೆ ಬೆಂಬಲ ಕಂಡು ಬಂದಿದ್ದು ಇದು ಇವರ ನಾಯಕತ್ವಕ್ಕೆ ಹಿಡಿದ ಕೈ ಕನ್ನಡಿ ಯಾಗಿದೆ.


Google News

 

 

WhatsApp Group Join Now
Telegram Group Join Now
Suddi Sante Desk