ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ – ಇಬ್ಬರು ಮಕ್ಕಳ ಮೃತದೇಹ ಪತ್ತೆ ವ್ಯಕ್ತಿಯ ಶವಕ್ಕಾಗಿ ಪೊಲೀಸರ ಹುಡುಕಾಟ

Suddi Sante Desk
ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ – ಇಬ್ಬರು ಮಕ್ಕಳ ಮೃತದೇಹ ಪತ್ತೆ ವ್ಯಕ್ತಿಯ ಶವಕ್ಕಾಗಿ ಪೊಲೀಸರ ಹುಡುಕಾಟ

ಕಲಬುರಗಿ

ಜೀವನದಲ್ಲಿ ಜಿಗುಪ್ಸೆಗೊಂಡು ಇಬ್ಬರು ಮಕ್ಕ ಳೊಂದಿಗೆ ವ್ಯಕ್ತಿಯೊರ್ವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿಯಲ್ಲಿ ನಡೆದಿದೆ.ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ಬಸ್ ಡಿಪೋ ಬಳಿ ಈ ಒಂದು ಘಟನೆ ನಡೆದಿದೆ ಸಿದ್ದು ಮಹಾಮಲ್ಲಪ್ಪ(೩೫)ಹಾಗೂ ಮಕ್ಕಳಾದ ಶ್ರೇಯಾ(೧೧)ಮನೀಶ್(೧೨)ಮೃತ ದುರ್ದೈವಿಗ ಳಾಗಿದ್ದಾರೆ.

ಇನ್ನೂ ಈ ಒಂಗು ಸುದ್ದಿಯನ್ನು ತಿಳಿದ ಪೊಲೀಸರು ಅಗ್ನಿಶಾಮಕ ಟೀಮ್ ನೊಂದಿಗೆ ಬಾವಿಯಲ್ಲಿ ಇಬ್ಬರು ಮಕ್ಕಳ ಮೃತದೇಹವನ್ನು ಪತ್ತೆಹಚ್ಚಿದ್ದು ಮೃತ ಮಕ್ಕಳ ತಂದೆಯ ಶವಕ್ಕಾಗಿ ಪೊಲೀಸರು ಬಾವಿಯಲ್ಲಿ ಶೋಧವನ್ನು ಮುಂದು ವರೆಸಿದ್ದಾರೆ.ಮೃತ ದುರ್ದೈವಿಗಳು ಆಳಂದ ಪಟ್ಟಣದ ಶರಣ ನಗರ ನಿವಾಸಿಗಳಾಗಿದ್ದು ಆತ್ಮಹತ್ಯೆಗೆ ಕಾರಣವನ್ನು ಪೊಲೀಸರು ಪತ್ತೆ ಮಾಡುತ್ತಿದ್ದು ಈ ಕುರಿತಂತೆ ಪ್ರಕರಣವನ್ನು ದಾಖಲು ಮಾಡಿಕೊಂಡಿರುವ ಆಳಂದ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂ ಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಕಲಬುರಗಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.