ಪೊಲೀಸ್ ತರಬೇತಿ ಕೇಂದ್ರದ ಅಧಿಕಾರಿ ಮನೆಯಲ್ಲಿ ಮಂಜು ನಾಥ ಆತ್ಮಹತ್ಯೆ ಪೊಲೀಸ್ ಆಗಲೇಂದು ಕನಸು ಕಂಡಿದ್ದ ಪೋಷಕರು…..

Suddi Sante Desk

ಗುಲಬರ್ಗಾ –

ಓದಲು ಆಗುತ್ತಿಲ್ಲ ಅನ್ನೋ ಕಾರಣಕ್ಕೆ ಯುವಕನೊಬ್ಬ ನೇಣಿಗೆ ಶರಣಾದ ಘಟನೆ ಕಲಬುರಗಿಯಲ್ಲಿ ನಡೆದಿದೆ. ನಗರದ ಪೋಲೀಸ್ ತರಬೇತಿ ಕೇಂದ್ರದಲ್ಲಿ ಈ ಒಂದು ಘಟನೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡವನನ್ನ ಬೆಳಗಾವಿ ಮೂಲದ ಮಂಜುನಾಥ್ ಅಂತ ಗುರುತಿಸಲಾಗಿದೆ.ಪೋಲೀಸ್ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲೆಂದು ಪೋಷಕರು ಕಲಬುರಗಿಯ ನಾಗನಳ್ಳಿಯಲ್ಲಿರುವ ಪೋಲೀಸ್ ತರಬೇತಿ ಕೇಂದ್ರದ ಅಧಿಕಾರಿಯೊಬ್ಬನ ಮನೆಯಲ್ಲಿ ಬಿಟ್ಟಿದ್ದರು‌

ಘಟನೆಗೆ ಮುನ್ನ ಯುವಕ ಡೆತ್ ನೋಟ್ ಬರೆದಿದ್ದು ನನ್ನ ಸಾವಿಗೆ ನಾನೇ ಕಾರಣ ಅಂತ ಉಲ್ಲೇಖಿಸಿದ್ದಾನೆ ವಿವಿ ಠಾಣೆ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.