ಹುಬ್ಬಳ್ಳಿ –
ಹೃದಯಾಘಾತದಿಂದ ಪೊಲೀಸ್ ಪೇದೆ ಸಾವು – 2002 ರ ಬ್ಯಾಚ್ ನ ಮಂಜುನಾಥ ಮೆನಸಿನ ಕಾಯಿ ಇನ್ನೂ ನೆನಪು ಮಾತ್ರ ಪೊಲೀಸ್ ಪೇದೆ ಯೊಬ್ಬರು ಹೃದಯಾಘಾತದಿಂದ ನಿಧನರಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.ಮಂಜುನಾಥ ಮೆನಸಿನಕಾಯಿ ಮೃತ ಪೊಲೀಸ್ ಪೇದೆಯಾ ಗಿದ್ದು ನಗರದ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದರು
ಇವರು ಇಂದು ಹೃದಯಾಘಾತಕ್ಕೆ ಬಲಿಯಾಗಿದ್ದಾ ರೆ.2002 ರಲ್ಲಿ ಇಲಾಖೆಗೆ ಸೇರಿಕೊಂಡಿದ್ದ ಇವರು ನಗರದ ಪೂರ್ವ ಸಂಚಾರಿ ಠಾಣೆಯಲ್ಲಿ ಕರ್ತವ್ಯ ವನ್ನು ಮಾಡುತ್ತಿದ್ದರು.ಕಳೆದ 15 ದಿನಗಳಿಂದ ಅನಾರೋಗ್ಯದಿಂದ ಕರ್ತವ್ಯಕ್ಕೆ ಗೈರಾಗಿದ್ದ ಇವರು ಮನೆಯಲ್ಲಿ ವಿಶ್ರಾಂತಿಯನ್ನು ಪಡೆದುಕೊಳ್ಳುತ್ತಿ ದ್ದರು.ಮನೆಯಲ್ಲಿದ್ದಾಗ ತೀವ್ರವಾಗಿ ಎದೆನೋವು ಕಾಣಿಸಿಕೊಂಡಿತು
ಇನ್ನೇನು ಆಸ್ಪತ್ರೆಗೆ ತೆರಳಬೇಕು ಎನ್ನುಷ್ಟರಲ್ಲಿ ಮಂಜುನಾಥ ಮೆನಸಿನಕಾಯಿ ದಾರಿ ಮಧ್ಯದ ಲ್ಲಿಯೇ ಸಾವಿಗೀಡಾಗಿದ್ದಾರೆ.ಮೃತರಿಗೆ ಇಬ್ಬರು ಮಕ್ಕಳಿದ್ದಾರೆ ಇನ್ನೂ ನಿಧನರಾದ ಪೊಲೀಸ್ ಪೇದೆಯ ನಿಧನಕ್ಕೆ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಠಾಣೆಯ ಇನಸ್ಪೇಕ್ಟರ್ ಐವಾನ್ ಡಿಸೋಜಾ,ಪಿಎಸ್ ಐ ಪುನೀತ್ ಕುಮಾರ ಸೇರಿದಂತೆ ಸಿಬ್ಬಂದಿಗಳು ಸ್ನೇಹಿತರು ಸೇರಿದಂತೆ ಹಲವರು ಸಂತಾಪವನ್ನು ಸೂಚಿಸಿ ದ್ದಾರೆ.ಮೃತರ ಅಂತ್ಯಕ್ರಿಯೆ ತವರೂರಿನಲ್ಲಿ ಸಂಜೆ ನಡೆಯಲಿದೆ.ಇಲಾಖೆಯಲ್ಲಿ ದಕ್ಷತೆ ಮತ್ತು ಒಳ್ಳೇಯ ಕರ್ತವ್ಯಕ್ಕೆ ಹೆಸರಾಗಿದ್ದರು ಮಂಜುನಾಥ
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..