ರಾಯಚೂರು –
ವರ್ಗಾವಣೆ ವಿಚಾರ ಕುರಿತು ಈಗಾಗಲೇ ಇಲಾಖೆ ಯಿಂದ ಪರಿಷ್ಕೃತ ವರ್ಗಾವಣೆಯ ವೇಳಾಪಟ್ಟಿ ಬಿಡುಗಡೆ ಯಾಗಿದ್ದು ಇದರ ಬೆನ್ನಲ್ಲೇ ಸಿಂಧನೂರು BEO ಅವರು ಶಿಕ್ಷಕರಿಗೆ ಮಹತ್ವದ ಸಂದೇಶವೊಂದನ್ನು ಕಳಿಸಿದ್ದಾರೆ ಹೌದು ಈ ಮೂಲಕ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರಿಗೆ ತಿಳಿಸುವುದೇನಂದರೆ 2020-21 ನೇ ಸಾಲಿನ ಪರಿಷ್ಕೃತ ವರ್ಗಾವಣೆ ಕೌನ್ಸಿಲಿಂಗ್ ಮೇಲಿನಂತೆ ಉಪನಿರ್ದೇಶಕರ ಕಾರ್ಯಾಲಯ ರಾಯಚೂರು ನಲ್ಲಿ ನಿಗದಿಪಡಿಸಲಾಗಿದೆ.
ಇನ್ನೂ ವರ್ಗಾವಣೆಯ ಪ್ರಯುಕ್ತ 2020 ರಲ್ಲಿ ಅರ್ಜಿ ಸಲ್ಲಿಸಿದ ಮುಖ್ಯಶಿಕ್ಷಕರು,ಸಹ ಶಿಕ್ಷಕರು,ದೈಹಿಕ ಶಿಕ್ಷಕರು ಮತ್ತು ವಿಶೇಷ ಶಿಕ್ಷಕರು ಮಾತ್ರ ಈ ಕೆಳಕಂಡ ನಿಗದಿತ ದಿನಾಂಕಗಳಂದು ಖುದ್ದಾಗಿ ಹಾಜರಾಗಲು ಸೂಚಿಸಿದೆ ಎಂದು ಸಿಂಧನೂರು ಬಿಇಓ ಸೂಚನೆ ನೀಡಿದ್ದಾರೆ