This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

State News

ಬೆಳಿಗ್ಗೆ ಯಿಂದ ಸಂಜೆ ಯ ವರೆಗೆ ಸಿಗಲಿದೆ ಹಾಲು ತರಕಾರಿಗಳು ಬದಲಾಯಿತು ಸಮಯ ಇಂದಿ ನಿಂದ ಹೊಸ ರೂಲ್ಸ್ ಜಾರಿಗೆ…..

WhatsApp Group Join Now
Telegram Group Join Now

ಬೆಂಗಳೂರು –

ರಾಜ್ಯದಲ್ಲಿ ವ್ಯಾಪಾರ ವಹಿವಾಟಿಗೆ ಅದರಲ್ಲೂ ಕೆಲ ವೊಂದಿಷ್ಟು ವ್ಯಾಪಾರಕ್ಕೆ ರಾಜ್ಯ ಸರ್ಕಾರ ಹೊಸ ರೂಲ್ಸ್ ಗಳನ್ನು ಇಂದಿನಿಂದ ಅನ್ವಯ ಆಗುವಂತೆ ಜಾರಿಗೆ ತಗೆದುಕೊಂಡು ಬಂದಿದೆ. ಹೌದು ಪ್ರತಿ ದಿನ ಬೆಳಿಗ್ಗೆ 6 ಗಂಟೆ ಯಿಂದ ಬೆಳಿಗ್ಗೆ ಹತ್ತು ಗಂಟೆಗಳ ವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶವನ್ನು ಈ ಮೊದಲು ನೀಡಲಾಗಿತ್ತು ಈಗ ಅದನ್ನು ಹನ್ನೆರಡು ಗಂಟೆಗಳ ವರೆಗೆ ವಿಸ್ತರಣೆ ಮಾಡಲಾಗಿದೆ

ಹೌದು ಮೇ 2 ಅಂದರೆ ಇಂದಿನಿಂದ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಕರೊನಾ ಕರ್ಫ್ಯೂ ನಿಯಮ ಗಳಲ್ಲಿ ಕೆಲವೊಂದಿಷ್ಟು ಮಾರ್ಪಾಡುಗಳನ್ನು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ರಾಜ್ಯದಲ್ಲಿ ಕರೊನಾ ಕರ್ಫ್ಯೂ ಹೇರಿದ ನಂತರವೂ ಅಗತ್ಯ ವಸ್ತು ಖರೀದಿಗೆ ಅವಕಾಶ ಮಾಡಿಕೊಟ್ಟಿರುವ ಬೆಳಗ್ಗೆ 6 ರಿಂದ 10ರ ಅವಧಿಯಲ್ಲಿ ಮಾರುಕಟ್ಟೆ, ಸಂತೆಗಳಲ್ಲಿ ಅಪರಿಮಿತ ಜನದಟ್ಟಣೆ ಆಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮತ್ತಷ್ಟು ಹೊಸ ಕ್ರಮ ಕೈಗೊಳ್ಳುವ ಮೂ ಲಕ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದೆ

ಹೌದು ಎಪಿಎಂಸಿ ಹಾಗೂ ದಿನಸಿ ಅಂಗಡಿಗಳನ್ನು ತೆರೆಯಲು ಇದ್ದ ಕಾಲಾವಕಾಶವನ್ನು ಬೆಳಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ವಿಸ್ತರಿಸಲಾಗಿದೆ. ಈವರೆಗೆ ಬೆಳಗ್ಗೆ 6ರಿಂದ 10 ಗಂಟೆಯವರೆಗಷ್ಟೇ ಅಂಗಡಿಗಳು ಬಾಗಿಲು ತೆರೆಯಬಹುದಾಗಿತ್ತು.ಸಂತೆ, ವಾರದ ಸಂತೆ ಗಳನ್ನು ನಿರ್ಬಂಧಿಸಲಾಗಿದೆ.ಇವುಗಳಿಗೆ ಪರ್ಯಾ ಯವಾಗಿ ಬೆಳಗ್ಗೆ 6ರಿಂದ ಸಂಜೆ 6ವರೆಗೆ ಹಾಪ್‌ ಕಾಮ್ಸ್‌ ಗಳು ಹಾಗೂ ಎಲ್ಲ ರೀತಿಯ ಹಾಲಿನ ಬೂತ್‌ಗಳು,ತಳ್ಳುವ ಗಾಡಿಗಳಲ್ಲಿ ಹಣ್ಣು ತರಕಾರಿ ಮಾರಾಟ ಮಾಡಲು ಅವಕಾಶವನ್ನು ಮಾಡಿಕೊಡ ಲಾಗಿದೆ.

ಇದರೊಂದಿಗೆ ಉಳಿದಂತೆ ಇನ್ನೂ ಯಾವುದೇ ರೀತಿಯ ಬದಲಾವಣೆಗಳನ್ನು ಮಾಡದೇ ಹಾಗೇ ಮುಂದುವರಿಸಲಾಗಿದೆ.ಒಟ್ಟಾರೆ ಎರಡು ಗಂಟೆಗಳ ಕಾಲ ಅದು ದಿನಸಿ ಮತ್ತು ಎಪಿಎಮ್ ಸಿ ವ್ಯಾಪಾರ ಕ್ಕೆ ಅವಕಾಶವನ್ನು ನೀಡಲಾಗಿದೆ


Google News

 

 

WhatsApp Group Join Now
Telegram Group Join Now
Suddi Sante Desk