ಶಾಲಾ ಮಕ್ಕಳಿಗೆ ಸೇರಬೇಕಾಗಿದ್ದ ಕ್ಷೀರ ಭಾಗ್ಯ ದ ಹಾಲಿನ ಪುಡಿ ಹೊರ ರಾಜ್ಯಕ್ಕೆ – ಅಕ್ರಮವಾಗಿ ಸಾಗಾಟ…..

Suddi Sante Desk

ಕಲಬುರಗಿ –

ರಾಜ್ಯದ ಶಾಲಾ ಮಕ್ಕಳಿಗೆ ವಿತರಣೆಯಾಗಬೇಕಾಗಿದ್ದ ಕ್ಷೀರ ಭಾಗ್ಯದ ಹಾಲಿನ ಪುಡಿಗಳನ್ನು ಹೋರ ರಾಜ್ಯಕ್ಕೆ ಅಕ್ರಮ ವಾಗಿ ಸಾಗಾಟ ಮಾಡುತ್ತಿದ್ದ ಜಾಲವೊಂದು ಕಲಬುರಗಿ ಯಲ್ಲಿ ಪತ್ತೆಯಾಗಿದೆ.

ಹೌದು ರಾಜ್ಯದ ಶಾಲಾ ಮಕ್ಕಳಿಗೆ ಸೇರಬೇಕಾಗಿದ್ದ ಕ್ಷೀರಭಾಗ್ಯ ಹಾಲಿನ ಪುಡಿಯನ್ನು ಅಕ್ರಮ ಸಾಗಾಟ ಮಾಡುತ್ತಿದ್ದ ಜಾಲ ಸಿಕ್ಕಿದ್ದು ಜೇರಟಗಿ ಬಳಿ ಪತ್ತೆಯಾಗಿದೆ

ರಾಜ್ಯದ ಶಾಲಾ ಮಕ್ಕಳಿಗೆ ಸೇರಬೇಕಿದ್ದ ಹಾಲಿನ ಪುಡಿ ಯನ್ನು ಇಲ್ಲಿಂದ ಬೇರೆ ರಾಜ್ಯಕ್ಕೆ ರವಾನೆ ಮಾಡಲಾಗುತ್ತಿತ್ತು ಮಹಾರಾಷ್ಟ್ರ ಕಡೆ ಲಾರಿಯಲ್ಲಿ ಸಾಗಿಸಲಾಗುತ್ತಿತ್ತು.ಈ ಒಂದು ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿದರು ಜೇರಟಗಿ ಗ್ರಾಮದ ಬಳಿ ಅಪಾರ ಪ್ರಮಾಣದ ಹಾಲಿನ ಪುಡಿ ಪತ್ತೆಯಾಗಿದೆ

ದಾಳಿ ವೇಳೆ ಲಾರಿಯನ್ನು ಬಿಟ್ಟು ಚಾಲಕ ಮತ್ತು ಕ್ಲೀನರ್ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.ಸಾವಿರಾರು ಕಿಲೋ ಹಾಲಿನ ಪುಡಿಯ ಪಾಕೇಟ್ ಗಳು ಪತ್ತೆಯಾಗಿವೆ.ನೆಲೋಗಿ ಪೊಲೀಸ್ ಠಾಣೆಯಲ್ಲಿ ಈ ಒಂದು ಕುರಿತು ಪ್ರಕರಣ ದಾಖಲಾಗಿದ್ದು ಅಕ್ರಮ ಸಾಗಾಟ ಹಿಂದಿನ ರುವಾರಿ ಬಗ್ಗೆ ದೂರು ದಾಖಲು ಮಾಡಿಕೊಂಡಿರುವ ಪೊಲೀಸರು ಹುಡುಕಾಟದಲ್ಲಿ ತೊಡಗಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.