ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದ ಸಚಿವ ಬಿ.ಸಿ ನಾಗೇಶ್ ದಂಪತಿ – ಸಚಿವ ರನ್ನು ಭೇಟಿಯಾಗಲು ಹೊರಟಿದ್ದಾರೆ ಶಿಕ್ಷಕ ಬಂಧುಗಳು…..

Suddi Sante Desk

ರಾಯಚೂರು –

ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದ ಬಿ.ಸಿ.ನಾಗೇಶ್ ದಂಪತಿ.ಹೌದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ವನ್ನು ಪಡೆದುಕೊಂಡರು.

ನಂತರ ಮಂತ್ರಾಲಯ ದಲ್ಲಿ ರುವ ಮಂಚಾಲಮ್ಮ ದೇವಿ ದರ್ಶನವನ್ನು ಸಚಿವರು ಪಡೆದುಕೊಂಡರು.ರಾಘವೇಂದ್ರ ಸ್ವಾಮಿಗಳ ವೃಂದಾವನಕ್ಕೆ ಪೂಜೆ ಸಲ್ಲಿಸಿದ‌ರು.

ರಾಯಚೂರು ಜಿಲ್ಲಾ ಪ್ರವಾಸ ಹಿನ್ನೆಲೆ ಆಗಮಿಸಿದ್ದಾರೆ ಸಚಿವರು.ಇಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾ ಗಲಿರುವ ಬಿ.ಸಿ.ನಾಗೇಶ್.ದೇವದುರ್ಗದಲ್ಲಿ ಆಯೋಜಿಸಿ ರುವ ಮಳೆ ನೀರು ಕೋಯ್ಲು ಯೋಜನೆ ಉದ್ಘಾಟನೆ ಕಾರ್ಯಕ್ರಮ ಮತ್ತು ರಾಯಚೂರು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳಲಿದ್ದು ಈ ಮಧ್ಯೆ ಸಚಿವರನ್ನು ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಶಿಕ್ಷಕರು ಭೇಟಿಯಾಗಿ ಚರ್ಚೆ ಮಾಡಲು ಹೊರಟಿದ್ದಾರೆ‌‌

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.