ಕಾಂಗ್ರೆಸ್ಸಿನಲ್ಲಿ ಹರಿಪ್ರಸಾದ ಬೂಟಿಗಿಂತ ಕಡೆಯಾಗಿದ್ದಾರೆ ಸಚಿವ ಜೋಶಿ ತಿರುಗೇಟು – BK ಹರಿ ಪ್ರಸಾದ ಹೇಳಿಕೆಗೆ ತಿರುಗೇಟು ನೀಡಿದ ಕೇಂದ್ರ ಸಚಿವರು…..

Suddi Sante Desk
ಕಾಂಗ್ರೆಸ್ಸಿನಲ್ಲಿ ಹರಿಪ್ರಸಾದ ಬೂಟಿಗಿಂತ ಕಡೆಯಾಗಿದ್ದಾರೆ ಸಚಿವ ಜೋಶಿ ತಿರುಗೇಟು – BK ಹರಿ ಪ್ರಸಾದ ಹೇಳಿಕೆಗೆ ತಿರುಗೇಟು ನೀಡಿದ ಕೇಂದ್ರ ಸಚಿವರು…..

ಹುಬ್ಬಳ್ಳಿ

ಕಾಂಗ್ರೆಸ್ಸಿನಲ್ಲಿ ಹರಿಪ್ರಸಾದ ಬೂಟಿಗಿಂತ ಕಡೆಯಾಗಿದ್ದಾರೆ ಸಚಿವ ಜೋಶಿ ತಿರುಗೇಟು – BK ಹರಿ ಪ್ರಸಾದ ಹೇಳಿಕೆಗೆ ತಿರುಗೇಟು ನೀಡಿದ ಕೇಂದ್ರ ಸಚಿವರು ಎಸ್

ಕಾಂಗ್ರೆಸ್ ಪಕ್ಷದಲ್ಲಿ ಬಿ.ಕೆ.ಹರಿಪ್ರಸಾದ್‌ ಬೂಟ್ ಗಿಂತ ಕಡೆಯಾಗಿದ್ದಾರೆ. ಅದಕ್ಕಾಗಿ ಅವರು ಆ ಭಾಷೆ ಬಳಸಿದ್ದಾರೆ ಎಂದು ಬಿ.ಕೆ.ಹರಿಪ್ರಸಾದ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿರು ಗೇಟು ನೀಡಿದ್ದಾರೆ.

ಬಿಜೆಪಿಯವರು ಬ್ರಿಟಿಷರ ಬೂಟ್ ನೆಕ್ಕುವವರು ಎಂದು ಹರಿಪ್ರಸಾದ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ರುವ ಅವರು, ಅವರ ಭಾಷೆ ನಾನು ಬಳಸಲ್ಲ. ಹರಿಪ್ರಸಾದ್‌ ಅವರು ಏನ ಮಾತಾಡಿದ್ರು ಅವರನ್ನು ಮಂತ್ರಿ ಮಾಡಲ್ಲ. ಸುಮ್ಮನೆ ನೀವು ಹಂಗೆ ಮಾತಾಡ್ತಾ ಹೋಗೋದು ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ಪಕ್ಷದಲ್ಲಿ ಹತಾಶೆ ಆಗಿರುವ ಕಾರಣಕ್ಕೆ ಹರಿಪ್ರಸಾದ್‌ ಹಾಗೆ ಮಾತಾಡ್ತೀದಾರೆ. RSS ಬಿಜೆಪಿ ಬೈದ್ರೆ ಸೋನಿಯಾ ಗಾಂಧಿ ಪ್ರಸನ್ನಳಾಗಿ ಮಂತ್ರಿ ಮಾಡಬಹದು ಅಂದುಕೊಂಡಿದ್ದಾರೆ. ಆದ್ರೆ ಸಿದ್ದರಾಮಯ್ಯ ಯಾವತ್ತೂ ಇವರನ್ನು ಮಂತ್ರಿ ಮಾಡಲ್ಲ.

ಈ ಕಡೆ ಡಿಕೆಶಿವಕುಮಾರ್ ಕೂಡಾ ಇವರನ್ನು ಲೈಕ್ ಮಾಡಲ್ಲ. ಇದು ಹರಿಪ್ರಸಾದ್‌ ಅವರ ಕಲ್ಚರ್ ತೋರಿಸುತ್ತೆ ಎಂದು ಜೋಶಿ ವಾಗ್ದಾಳಿ‌ ನಡೆಸಿದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.