ಶೀಘ್ರದಲ್ಲಿ ಅನ್ನಭಾಗ್ಯ ಯೋಜನೆಗೆ ಬರಲಿವೆ ಸ್ಮಾರ್ಟ್ ಕಾರ್ಡ್ ಮಾಹಿತಿ ನೀಡಿದ ಸಚಿವ ಮುನಿಯಪ್ಪ…..

Suddi Sante Desk
ಶೀಘ್ರದಲ್ಲಿ ಅನ್ನಭಾಗ್ಯ ಯೋಜನೆಗೆ ಬರಲಿವೆ ಸ್ಮಾರ್ಟ್ ಕಾರ್ಡ್ ಮಾಹಿತಿ ನೀಡಿದ ಸಚಿವ ಮುನಿಯಪ್ಪ…..

ಬೆಂಗಳೂರು

ಶೀಘ್ರದಲ್ಲಿ ಅನ್ನಭಾಗ್ಯ ಯೋಜನೆಗೆ ಬರಲಿವೆ ಸ್ಮಾರ್ಟ್ ಕಾರ್ಡ್ ಮಾಹಿತಿ ನೀಡಿದ ಸಚಿವ ಮುನಿಯಪ್ಪ ಹೌದು ಪಡಿತದಾರರಿಗೆ ಚೀಟಿ ಜೊತೆಗೆ ಶೀಘ್ರವೇ ಅನ್ನಭಾಗ್ಯದ ಸ್ಮಾರ್ಟ್ ಕಾರ್ಡ್ ಕೊಡಲಾಗುವುದು. ಬಿಪಿಎಲ್ ಹಾಗೂ ಎಪಿಎಲ್ ಚೀಟಿದಾರರಿಗೆ ವಿತರಿಸಲಾಗುವುದು ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

ಅನ್ನಭಾಗ್ಯ ಯೋಜನೆಯಡಿ 1.13 ಕೋಟಿ ಕಾರ್ಡ್ ದಾರ ರಗೆ ಅಂದರೆ ಸುಮಾರು ₹ 4 ಕೋಟಿ ಜನರಿಗೆ ಹಣ ಸಂದಾಯ ಮಾಡಿದ್ದೇವೆ. 2.66 ಲಕ್ಷ ಕಾರ್ಡ್ದಾರರು ಪೋಸ್ಟಲ್ ಇಲಾಖೆ ಯಲ್ಲಿ ಖಾತೆ ತೆರೆದಿದ್ದು ಅವರಿಗೂ ಹಣ ಸಂದಾ ಯವಾಗುತ್ತಿದೆ. ಶೇ 90ರಷ್ಟು ಅಧಿಕ ಕಾರ್ಡ್ ದಾರ ರಗೆ ಈಗಾಗಲೇ ಹಣ ತಲುಪಿದೆ.

ಇನ್ನೂ ಏಳು ಲಕ್ಷ ಕಾರ್ಡ್ ದಾರ ರ ಬ್ಯಾಂಕ್ ಖಾತೆ ತೆರೆಯದಿರುವುದು ಸೇರಿದಂತೆ ವಿವಿಧ ಸಮಸ್ಯೆ ಇದೆ. ಅಂಥವರಿಗೆ ಹಣ ತಲುಪಿಲ್ಲ. ಅವರಿಗೂ ಹಣ ಸಂದಾಯ ಮಾಡಲು ಇಲಾಖೆ ಅಧಿಕಾರಿ ಗಳೇ ಖುದ್ದಾಗಿ ಕಾರ್ಡ್ ಗಳನ್ನು ಪರಿಶೀಲಿಸು ತ್ತಿದ್ದಾರೆ. ಶೇ 100 ಸಾಧನೆ ಮಾಡಲಿದ್ದೇವೆ ಎಂದರು.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.