ಕ್ಷೇತ್ರದಲ್ಲಿ ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಕೆ ಪರಿಶೀಲನೆ ಮಾಡಿದ ಸಚಿವ ಸಂತೋಷ ಲಾಡ್ – ಅರ್ಜಿ ಸಲ್ಲಿಸಿ ನೆಚ್ಚಿನ ಸಚಿವ ರೊಂದಿಗೆ ಗ್ರೂಪ್ ತಗೆಸಿಕೊಂಡ ನಾರಿಯರು…..

Suddi Sante Desk
ಕ್ಷೇತ್ರದಲ್ಲಿ ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಕೆ ಪರಿಶೀಲನೆ ಮಾಡಿದ ಸಚಿವ ಸಂತೋಷ ಲಾಡ್ – ಅರ್ಜಿ ಸಲ್ಲಿಸಿ ನೆಚ್ಚಿನ ಸಚಿವ ರೊಂದಿಗೆ ಗ್ರೂಪ್ ತಗೆಸಿಕೊಂಡ ನಾರಿಯರು…..

ಕಲಘಟಗಿ

ಕಾರ್ಮಿಕ ಸಚಿವ ಸಂತೋಷ ಲಾಡ್ ರ ಪ್ರವಾಸ ಧಾರವಾಡ ಜಿಲ್ಲೆಯಲ್ಲಿ ಮುಂದುವರೆದಿದೆ ಹೌದು ಎರಡು ದಿನಗಳಿಂದ ಕ್ಷೇತ್ರದಲ್ಲಿ ಉಳಿದುಕೊಂಡಿ ರುವ ಸಂತೋಷ ಲಾಡ್ ರು ಇಂದು ಕಲಘಟಗಿ ಯ ಬೇಗೂರಿನ ಗ್ರಾಮ ಒನ್‌ ಕೇಂದ್ರಕ್ಕೆ ಭೇಟಿ ನೀಡಿ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಬಗ್ಗೆ ಪರಿಶೀಲನೆ ನಡೆಸಿದರು

ನಮ್ಮ ಸರ್ಕಾರದ ಮಹತ್ವದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ರಾಜ್ಯದಾದ್ಯಂತ ಆರಂಭವಾಗಿದ್ದು ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು ಅರ್ಜಿ ಸಲ್ಲಿಸುತ್ತಿರು ವುದನ್ನು ಸಚಿವರು ಗಮನಿಸಿದರು

ಈ ಕೇಂದ್ರದಲ್ಲೂ ಮಹಿಳೆಯರು ಅರ್ಜಿ ಸಲ್ಲಿಸಲು ಬಂದಿದ್ದು ಕಂಡು ಖುಷಿಯಾಯಿತು ಎಂದು ಸಚಿವ ಸಂತೋಷ ಲಾಡ್ ಹೇಳಿದರು ಇದೇ ವೇಳೆ ಅರ್ಜಿ ಸಲ್ಲಿಸಿದ ಮಹಿಳೆಯರು ಸಚಿವ ರೊಂದಿಗೆ ಪೊಟೊ ತಗೆಸಿಕೊಂಡು ಸಂಭ್ರಮಿಸಿದರು‌

ಸುದ್ದಿ ಸಂತೆ ನ್ಯೂಸ್ ಕಲಘಟಗಿ‌‌…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.