ಮಳೆಗೆ ಬಿದ್ದ ಶಾಲಾ ಕೊಠಡಿ ಮರದ ಕೆಳಗೆ ಮಕ್ಕಳಿಗೆ ಪಾಠ ಶಾಲಾ ಆರಂಭದ ಬೆನ್ನಲ್ಲೇ ಇದೇನಿದು ಸಚಿವರೇ…..

Suddi Sante Desk

ಶ್ರೀನಿವಾಸಪುರ –

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮೊಗಿಲ ಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಟ್ಟಡ ಕುಸಿತವಾಗಿ ಉಳಿದ ಕೊಠಡಿಗಳು ಬಿರಕು ಬಿಟ್ಟು ಅಪಾಯದ ನಡುವೆ ಶಾಲಾರಂಭದ ದಿನ ಮಕ್ಕಳು ಮರದ ಕೆಳಗೆ ಪಾಠ ಕೇಳುತ್ತಿದ್ದಾರೆ‌‌.ಹೌದು ಶ್ರೀನಿವಾಸಪುರ ತಾಲೂ ಕಿನಲ್ಲಿ ಶಾಲಾ ಪ್ರಾರಂಭೋತ್ಸವವಕ್ಕೆ ಮಕ್ಕಳು ಸಡಗರ ದಿಂದ ಆಗಮಿಸಿದರೂ ಕೂರಲು ಕೊಠಡಿಗಳಿಲ್ಲ ಕಳೆದ ನವಂಬರ್‌ ಮಾಹೆಯಲ್ಲಿ ರಜಾ ದಿನವಾದ ಭಾನುವಾರ ಕಟ್ಟಡ ಕುಸಿದು ಬಿದ್ದಿರುವುದರಿಂದ ಅನೇಕ ಎಳೆಯ ಮಕ್ಕಳ ಜೀವ ಉಳಿದಂತಾಗಿದೆ.ಅದೃಷ್ಟವಶಾತ್‌ ಭಾನು ವಾರ ಕಟ್ಟಡ ಕುಸಿದು ಬಿದ್ದಿದೆ.ಇದರಿಂದ ಮಕ್ಕಳು ಪಾರಾಗಿ ದ್ದಾರೆ ಈ ಘಟನೆಯಿಂದ ತಿಳಿದು ಬಂದಿದೆ.ಕೊಠಡಿ ಉರಳಿದ ಕಟ್ಟಡಕ್ಕೆ ಒಂದೇ ಗೋಡೆಯಿರುವುದರಿಂದ ಉಳಿದ ಕೊಠಡಿಗಳು ಬಿರಕು ಬಿಟ್ಟು ಮಳೆ ನೀರು ಸೋರಿಕೆ ಯಾಗಿ ಇಂದೋ ನಾಳೆ ಬೀಳುವಂತಾಗಿದೆ ಇದರಿಂದ ಮಕ್ಕಳನ್ನು ಶಾಲೆಯ ಆವರಣದ ಮರದ ಕೆಳಗೆ ಪಾಠ ಮಾಡುವಂತಾಗಿದೆ.

ಶಾಲೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೃಷ್ಣಮೂರ್ತಿ,ತಾಪಂ ಇಒ ಎಸ್‌. ಆನಂದ್‌ ರವರು ಮಂಗಳವಾರ ಭೇಟಿ ಪರಿಶೀಲನೆ ನಡೆಸಿದರು.ಶಾಸಕರ ಅನುದಾನದಲ್ಲಿ ಶೀಘ್ರದಲ್ಲಿಯೇ ಕೊಠಡಿ ನಿರ್ಮಾಣ ಮಾಡಲಾಗುತ್ತದೆ ಎಂದರು.

ಮಕ್ಕಳ ಹಿತದೃಷ್ಟಿಯಿಂದ ಗ್ರಾಮದ ಮನೆಯಲ್ಲಿ ಮಕ್ಕಳ ಪಾಠ ಪ್ರವಚನಗಳನ್ನು ನಡೆಸಲುಅದರ ಬಾಡಿಗೆ ತಾಪಂ ನಿಂದ ಭರಿಸಲಾಗುತ್ತದೆ.ಹಾಗೆಯೇ ಗ್ರಾಮದಲ್ಲಿ ಮಾದರಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಪ್ರಾರಂಬಿಸಲಾಗುತ್ತದೆ. ಜೊತೆಗೆ ಅಡುಗೆ ಕೋಣೆ ಅದೇ ರೀತಿ ಶಾಲೆಯ ಒಂದು ಭಾಗದ ಕಾಂಪೌಂಡ್‌ ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ‌‌.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.