ರಾಜ್ಯ ಸರ್ಕಾರದ ವಿರುದ್ದ ಶಾಸಕ ಮಹೇಶ್ ಟೆಂಗಿನಕಾಯಿ ವಾಗ್ದಾಳಿ – ನಿತ್ಯ ಬಾಳೆ ಹಣ್ಣು ನೀಡುವುದಕ್ಕಿಂತ ಬಾಳೆ ಹಣ್ಣಿನ ತೋಟ ನಿರ್ಮಿಸಿ ತಿನ್ನು ಎನ್ನುವುದನ್ನು ಸರ್ಕಾರ ಕಲಿಸಬೇಕಿದೆ ಎಂದ ಶಾಸಕ…..

Suddi Sante Desk
ರಾಜ್ಯ ಸರ್ಕಾರದ ವಿರುದ್ದ ಶಾಸಕ ಮಹೇಶ್ ಟೆಂಗಿನಕಾಯಿ ವಾಗ್ದಾಳಿ – ನಿತ್ಯ ಬಾಳೆ ಹಣ್ಣು ನೀಡುವುದಕ್ಕಿಂತ ಬಾಳೆ ಹಣ್ಣಿನ ತೋಟ ನಿರ್ಮಿಸಿ ತಿನ್ನು ಎನ್ನುವುದನ್ನು ಸರ್ಕಾರ ಕಲಿಸಬೇಕಿದೆ ಎಂದ ಶಾಸಕ…..

ಬೆಂಗಳೂರು

ರಾಜ್ಯ ಸರ್ಕಾರದ ವಿರುದ್ಧ ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನ ಸಭಾ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಹುಬ್ಬಳ್ಳಿಯ ಅಭಿವೃದ್ಧಿಗೆ ಈ ಬಾರಿಯ ಬಜೆಟ್‌ ನಲ್ಲಿ ಮನ್ನಣೆ ಸಿಕ್ಕಿಲ್ಲ. ಕಾಂಗ್ರೆಸ್‌ ಸರ್ಕಾರ ತಾರತಮ್ಯ ಎಸಗಿದೆ ಎಂದರು.

ವಿಧಾನಸಭೆ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಮಂಡಿಸಿದ ಬಜೆಟ್ ಕುರಿತು ಮಾತನಾಡಿದ ಅವರು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಹುಬ್ಬಳ್ಳಿಯಲ್ಲಿ ವಿಶೇಷ ಹೂಡಿಕೆ ವಲಯ ನಿರ್ಮಿಸುವ ಯೋಜನೆ ಘೋಷಿಸಿದ್ದರು.ಈ ಬಜೆಟ್‌ನಲ್ಲಿ ಅದನ್ನೂ ಉಲ್ಲೇಖಿಸಿಲ್ಲ ಎಂದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಿಕ್ಷಣ, ಆರೋಗ್ಯ, ಕೃಷಿ, ಸಾರಿಗೆ, ಗ್ರಾಮಣಾಭಿವೃದ್ಧಿಗೆ ನೀಡಿದ್ದ ಅನುದಾನ ಇಂದಿನ ಕಾಂಗ್ರೆಸ್‌ ಸರ್ಕಾರ ಕಡಿತಗೊಳಿಸಿದೆ.ಹಿಂದಿನ ಸರ್ಕಾರ, ಕೇಂದ್ರ ಸರ್ಕಾರವನ್ನು ನಿಂದಿಸಲಷ್ಟೇ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ ಎಂದರು.

ಆರ್ಥಿಕ ಮುನ್ನೋಟಕ್ಕಿಂತ, ರಾಜಕೀಯ ಹಿನ್ನೋಟವಿರುವ ಜನ ವಿರೋಧ ಬಜೆಟ್‌ ಇದು. ಇದರಿಂದ ಮುಂದಿನ ಎರಡು ವರ್ಷ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ.ನಿತ್ಯ ಬಾಳೆ ಹಣ್ಣು ನೀಡು ವುದಕ್ಕಿಂತ ಬಾಳೆ ಹಣ್ಣಿನ ತೋಟ ನಿರ್ಮಿಸಿ, ತಿನ್ನು ಎನ್ನುವುದನ್ನು ಸರ್ಕಾರ ಕಲಿಸಬೇಕಿದೆ.

ಕೇಂದ್ರ ಸರ್ಕಾರವು ನೇರ ಹಣ ವರ್ಗಾವಣೆಗಾಗಿ ಎಲ್ಲರಿಗೂ ಬ್ಯಾಂಕ್‌ ಖಾತೆ ತೆರೆಸಿದ್ದರಿಂದಲೇ ಅನ್ನಭಾಗ್ಯ ಅಕ್ಕಿಯ ₹170 ನೀಡಲು ಸಾಧ್ಯವಾ ಗಿದೆ ಎಂದರು.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.