ಪಕ್ಷದ ಸಂಘಟನೆ ಕುರಿತಂತೆ ತೆಗೂರ ಗ್ರಾಮದಲ್ಲಿ ಸಭೆ ಮಾಡಿದ ಶಾಸಕ ಅಮೃತ ದೇಸಾಯಿ – ಶಾಸಕರಿಗೆ ಸಾಥ್ ನೀಡಿದ KMF ಅಧ್ಯಕ್ಷ ಶಂಕರ ಮುಗದ ಮತ್ತು ಮುಖಂಡರು ಕಾರ್ಯಕರ್ತರು

Suddi Sante Desk
ಪಕ್ಷದ ಸಂಘಟನೆ ಕುರಿತಂತೆ ತೆಗೂರ ಗ್ರಾಮದಲ್ಲಿ ಸಭೆ ಮಾಡಿದ ಶಾಸಕ ಅಮೃತ ದೇಸಾಯಿ – ಶಾಸಕರಿಗೆ ಸಾಥ್ ನೀಡಿದ KMF ಅಧ್ಯಕ್ಷ ಶಂಕರ ಮುಗದ ಮತ್ತು ಮುಖಂಡರು ಕಾರ್ಯಕರ್ತರು

ತೆಗೂರ –

ಪಕ್ಷದ ಸಂಘಟನೆ ಮತ್ತು ಕಾರ್ಯಕರ್ತರ ಪಾತ್ರ ಕುರಿತಂತೆ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಧಾರವಾಡದೆ ತೆಗೂರ ಗ್ರಾಮ ದಲ್ಲಿ ಸಭೆಯನ್ನು ಮಾಡಿದರು.ಗ್ರಾಮದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ತೆಗೂರ ಗ್ರಾಮದಲ್ಲಿ ಪಕ್ಷದ ಮುಖಂಡರೊಂದಿಗೆ ಸಭೆ ಮಾಡಿ ಹಲ ವಾರು ವಿಚಾರಗಳ ಕುರಿತಂತೆ ಚರ್ಚೆಯನ್ನು ಮಾಡಿದರು ಶಾಸಕರು.

ಇದೇ ವೇಳೆ ಪಕ್ಷ ನೀಡಿದ ಜವಾಬ್ದಾರಿಯಂತೆ ಧಾರವಾಡ ತಾಲೂಕಿನ ತೆಗೂರ ಗ್ರಾಮದಲ್ಲಿ ಬೂತ ಸಂಖ್ಯೆ 41 ಮತ್ತು  42 ಬೂತ್ ಪರಾ ಮರ್ಶೆ ಹಾಗೂ ಪರಿಷ್ಕರಣಿಯನ್ನು ಮಾಡಲಾ ಯಿತು.ಈ ಸಂಧರ್ಭದಲ್ಲಿ ಬೂತ್ ಅಧ್ಯಕ್ಷರ ಹಾಗೂ ಪೇಜ್ ಪ್ರಮುಖರ ಮಾಹಿತಿ ಅವರ ಉಪಸ್ಥಿತಿಯನ್ನು ಪರಿಶೀಲಿಸಿ ಸಂಘಟನೆಯಲ್ಲಿ ಅವರ ಪಾತ್ರದ ಕುರಿತು ಮನವರಿಕೆ ಮಾಡಲಾ ಯಿತು.

ಇದೇ ವೇಳೆ ಸರ್ವ ಸದಸ್ಯರ ಮನೆಗಳ ಮೇಲೆ ಧ್ವಜಾರೋಹಣ ಮಾಡಲಾಯಿತು.ಈ ವೇಳೆ ಶಂಕರ ಮುಗದ, ನಾಗಪ್ಪ ಗಾಣಿಗೇರ, ಯಲ್ಲಪ್ಪ ಬಾಗೊಡಿ, ಮಕ್ತುಮ ಅಂಕಲಗಿ, ಮಲ್ಲಿಕಾರ್ಜುನ ಗೋಕಾವಿ ಗ್ರಾಮ ಪಂಚಾಯತಿ ಸದಸ್ಯರು ಮತ್ತು  ಮಹಾ ಶಕ್ತಿ ಕೆಂದ್ರದ ಪ್ರಮುಖರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ತೆಗೂರ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.