ಚುನಾವಣೆಯ ನಡುವೆ ಕ್ಷೇತ್ರದಲ್ಲಿನ ಸಮಸ್ಯೆಗೆ ಸ್ಪಂದಿಸಿದ ಶಾಸಕ ಅಮೃತ ದೇಸಾಯಿ – ಸಿಡಿಲಿಗೆ ಬಲಿಯಾಗಿ ಜಾನುವಾರುಗಳನ್ನು ಕಳೆದುಕೊಂಡ ರೈತ ಕುಟುಂಬಕ್ಕೆ ಸಾಂತ್ವನ ಹೇಳಿದ ಧಣಿ…..

Suddi Sante Desk
ಚುನಾವಣೆಯ ನಡುವೆ ಕ್ಷೇತ್ರದಲ್ಲಿನ ಸಮಸ್ಯೆಗೆ ಸ್ಪಂದಿಸಿದ ಶಾಸಕ ಅಮೃತ ದೇಸಾಯಿ – ಸಿಡಿಲಿಗೆ ಬಲಿಯಾಗಿ ಜಾನುವಾರುಗಳನ್ನು ಕಳೆದುಕೊಂಡ ರೈತ ಕುಟುಂಬಕ್ಕೆ ಸಾಂತ್ವನ ಹೇಳಿದ ಧಣಿ…..

ಬೆಂಗಳೂರು

ಬೇಸಿಗೆಯ ಬಿಸಿಲಿನೊಂದಿಗೆ ಚುನಾವಣೆಯ ಕಾವು ಆರಂಭವಾಗಿದೆ ಈ ಒಂದು  ಮಧ್ಯೆ ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಕಾಲಿಗೆ ಚಕ್ರವನ್ನು ಕಟ್ಟಿಕೊಂಡು ಬಿಡುವಿಲ್ಲದೆ ಭರ್ಜರಿ ಯಾಗಿ ಚುನಾವಣೆ ಪ್ರಚಾರ ದಲ್ಲಿ ತೊಡಗಿದ್ದು ಈ ನಡುವೆ ಧಾರವಾಡ ದ ಮುಗಳಿ ಗ್ರಾಮದಲ್ಲಿ ಸಿಡಿಲಿನಿಂದಾಗಿ ನಾಲ್ಕು ಜಾನುವಾರು ಗಳನ್ನು ಕಳೆದುಕೊಂಡ ರೈತನ ಮನೆಗ  ಶಾಸಕ ಅಮೃತ ದೇಸಾಯಿ ಭೇಟಿ ನೀಡಿ ಪರಿಶೀಲನೆ ಮಾಡಿದರು

ಅಕಾಲಿಕ ಮಳೆಯ ಕಾರಣ ಧಾರವಾಡ ತಾಲೂಕು ಮುಗಳಿ ಗ್ರಾಮದಲ್ಲಿ 2 ಎತ್ತು 1 ಆಕಳು ಸಿಡಿಲಿನಿಂದ ಬಲಿಯಾಗಿದ್ದು ಹೀಗಾಗಿ ಗ್ರಾಮದ ಹನುಮಂತಪ್ಪ ಫಕ್ಕೀರಪ್ಪ ಜಗದಾಳಿ ಅವರ ಮನೆಗೆ ತೆರಳಿ ಸಾಂತ್ವನ ಹೇಳಿದರು.

ರೈತನು ದೇಶದ ಬೆನ್ನೆಲುಬು ಈ ಪ್ರಕೃತಿ ವಿಕೋಪಗಳಿಂದ ಅವರಿಗೆ ಹಾನಿಯಾಗಿದ್ದನ್ನು ಕಂಡು ಸಂಬಂಧಿಸಿದ ಅಧಿಕಾರಿಗಳಿಗೆ ಮಾತ ನಾಡಿ ಆದಷ್ಟು ಬೇಗ ರೈತರಿಗೆ ಪರಿಹಾರ ನೀಡುವಂತೆ ಮಾತನಾಡಲಾಯಿತು.ಈ ಸಂದರ್ಭದಲ್ಲಿ ಗ್ರಾಮದ ಗುರು ಹಿರಿಯರು ಹಾಗೂ ಯುವಮಿತ್ರರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.