ಕ್ಷೇತ್ರದ ಸಮಸ್ತ ಜನತೆಯ ಕಲ್ಯಾಣಕ್ಕಾಗಿ ಧರ್ಮಸ್ಥಳ,ಉಡುಪಿ ಯಲ್ಲಿ ವಿಶೇಷವಾಗಿ ಪೂಜೆ ಸಲ್ಲಿಸಿದ ಶಾಸಕ ಎನ್ ಹೆಚ್ ಕೊನರೆಡ್ಡಿ – ಶಾಸಕರಿಗೆ ಸಾಥ್ ನೀಡಿದ ಕುಟುಂಬಸ್ಥರು…..

Suddi Sante Desk
ಕ್ಷೇತ್ರದ ಸಮಸ್ತ ಜನತೆಯ ಕಲ್ಯಾಣಕ್ಕಾಗಿ ಧರ್ಮಸ್ಥಳ,ಉಡುಪಿ ಯಲ್ಲಿ ವಿಶೇಷವಾಗಿ ಪೂಜೆ ಸಲ್ಲಿಸಿದ ಶಾಸಕ ಎನ್ ಹೆಚ್ ಕೊನರೆಡ್ಡಿ – ಶಾಸಕರಿಗೆ ಸಾಥ್ ನೀಡಿದ ಕುಟುಂಬಸ್ಥರು…..

ಧರ್ಮಸ್ಥಳ

ಕ್ಷೇತ್ರದ ಸಮಸ್ತ ಜನತೆಯ ಕಲ್ಯಾಣಕ್ಕಾಗಿ ಧರ್ಮಸ್ಥಳ,ಉಡುಪಿ ಯಲ್ಲಿ ವಿಶೇಷವಾಗಿ ಪೂಜೆ ಸಲ್ಲಿಸಿದ ಶಾಸಕ ಎನ್ ಹೆಚ್ ಕೊನರೆಡ್ಡಿ  ಶಾಸಕ ರಿಗೆ ಸಾಥ್ ನೀಡಿದ ಕುಟುಂಬಸ್ಥರು

ನವಲಗುಂದ ವಿಧಾನ ಸಭಾ ಕ್ಷೇತ್ರದ ಶಾಸಕ ಎನ್ ಹೆಚ್ ಕೊನರಡ್ಡಿಯವರು ಕುಟುಂಬದೊಂ ದಿಗೆ ಪ್ರವಾಸದಲ್ಲಿದ್ದಾರೆ.ಹೌದು ಸದಾ ಬಿಡುವಿ ಲ್ಲದ ಕೆಲಸ ರಾಜಕೀಯ ಚಟುವಟಿಕೆಗಳ ನಡುವೆ ಯೂ ಕೂಡಾ ಶಾಸಕ ಎನ್ ಹೆಚ್ ಕೊನರಡ್ಡಿ ಯವರು ಸಧ್ಯ ಕುಟುಂಬದವರೊಂದಿಗೆ ಧಾರ್ಮಿಕ ಕ್ಷೇತ್ರಗಳ ಪ್ರವಾಸದಲ್ಲಿದ್ದಾರೆ

ಈ ನಡುವೆ ಕ್ಷೇತ್ರದ ಸಮಸ್ತ ಜನತೆಯ ಕಲ್ಯಾಣ ಕ್ಕಾಗಿ ವಿಶೇಷವಾದ ಪೂಜೆಯನ್ನು ಸಲ್ಲಿಸಿದ್ದು ಕಂಡು ಬಂದಿತು.ಉಡುಪಿ ಶ್ರೀಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿದ ಶಾಸಕರು ಶ್ರೀಕೃಷ್ಣನ ದರ್ಶನವನ್ನು ಪಡೆದುಕೊಂಡುರು. ಇದೇ ವೇಳೆ ವಿಶೇಷ ಪೂಜೆ ಯನ್ನು ಸಲ್ಲಿಸಿ ಕ್ಷೇತ್ರದ ಜನತೆಯ ಕಲ್ಯಾಣ ಮತ್ತು ಕ್ಷೇತ್ರದ ಕಲ್ಯಾಣಕ್ಕಾಗಿ ಪ್ರಾರ್ಥನೆಯನ್ನು

ಮಾಡಿದ್ದು ಕಂಡು ಬಂದಿತು.ಇದೇ ವೇಳೆ ಸ್ವಾಮಿಜೀಯವರನ್ನು ಆತ್ಮೀಯವಾಗಿ ಭೇಟಿ ಮಾಡಿ ಆಶೀರ್ವಾದವನ್ನು ಪಡೆದುಕೊಂಡರು. ಇನ್ನೂ ನಂತರ ಧರ್ಮಸ್ಥಳಕ್ಕೆ ತೆರಳಿ ಮಂಜುನಾ ಥನ ದರ್ಶನವನ್ನು ಮಾಡಿದರು.ಕುಟುಂಬ ಸಮೇತ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರ್ಶನ ಪಡೆದರು

ಇಲ್ಲೂ ಕೂಡಾ ಕ್ಷೇತ್ರದ ಅಭಿವೃದ್ದಿ ಮತ್ತು ಜನತೆಯ ಕಲ್ಯಾಣಕ್ಕಾಗಿ ಮಂಜುನಾಥನಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು ಶಾಸಕರು.ಈ ಸಂದರ್ಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರೊಂದಿಗೆ ಕೆಲ ಸಮಯ ಕುಳಿತುಕೊಂಡು ಮಾತುಕತೆ ಮಾಡಿ ಆಶೀರ್ವಾದ ಪಡೆದರು ಪ್ರವಾಸದ ನಡುವೆಯೂ ಕೂಡಾ ಕುಟುಂಬದವರೊಂದಿಗೆ ವಿಶೇಷವಾಗಿ ನವಲಗುಂದ ವಿಧಾನಸಭಾ ಕ್ಷೇತ್ರದ ಸಮಸ್ತ ಜನತೆಯ ಕಲ್ಯಾಣಕ್ಕಾಗಿ ವಿಶೇಷ ಪೂಜೆಯನ್ನು ಈ ವೇಳೆ ಸಲ್ಲಿಸಿದ್ದು ಕಂಡು ಬಂದಿತು. ಶಾಸಕ ರೊಂದಿಗೆ ಅವರ ಧರ್ಮಪತ್ನಿ,ಇಬ್ಬರು ಪುತ್ರಿ ಯರು ಸೇರಿದಂತೆ ಆಪ್ತರು ಹಲವರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಧರ್ಮಸ್ಥಳ…..

ಸುದ್ದಿ ಸಂತೆ ನ್ಯೂಸ್ ಧರ್ಮಸ್ಥಳ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.