ಉಪ ಚುನಾವಣಾ ಪ್ರಚಾರದ ಅಖಾಡಕ್ಕಿಳಿದ ಶಾಸಕ ಎನ್ ಹೆಚ್ ಕೋನರೆಡ್ಡಿ – ಸಚಿವ ಸತೀಶ್ ಜಾರಕಿಹೋಳಿ,ಶಾಸಕ ವಿನಯ ಕುಲಕರ್ಣಿ ಯವರೊಂದಿಗೆ ಯಾಸೀರ್ ಪಠಾಣ್ ಪರ ರೋಡ್ ಶೋ ಮತಯಾಚನೆ ಮಾಡಿದ NHK…..

Suddi Sante Desk
ಉಪ ಚುನಾವಣಾ ಪ್ರಚಾರದ ಅಖಾಡಕ್ಕಿಳಿದ ಶಾಸಕ ಎನ್ ಹೆಚ್ ಕೋನರೆಡ್ಡಿ – ಸಚಿವ ಸತೀಶ್ ಜಾರಕಿಹೋಳಿ,ಶಾಸಕ ವಿನಯ ಕುಲಕರ್ಣಿ ಯವರೊಂದಿಗೆ ಯಾಸೀರ್ ಪಠಾಣ್ ಪರ ರೋಡ್ ಶೋ ಮತಯಾಚನೆ ಮಾಡಿದ NHK…..

ಶಿಗ್ಗಾಂವಿ

ಉಪ ಚುನಾವಣಾ ಪ್ರಚಾರದ ಅಖಾಡಕ್ಕಿಳಿದ ಶಾಸಕ ಎನ್ ಹೆಚ್ ಕೋನರೆಡ್ಡಿ – ಸಚಿವ ಸತೀಶ್ ಜಾರಕಿ ಹೋಳಿ,ಶಾಸಕ ವಿನಯ ಕುಲಕರ್ಣಿ ಯವರೊಂದಿಗೆ ಯಾಸೀರ್ ಪಠಾಣ್ ಪರ ರೋಡ್ ಶೋ ಮತಯಾಚನೆ ಮಾಡಿದ NHK

ದಿನದಿಂದ ದಿನಕ್ಕೆ ಶಿಗ್ಗಾವಿ ಉಪ ಚುನಾವಣೆಯ ಕದನ ಕಣ ರಂಗೇರುತ್ತಿದೆ.ಇನ್ನೂ ಈ ಒಂದು ಪ್ರತಿಷ್ಠೆಯ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಯಾಸೀರ್ ಅಹ್ಮದ್ ಖಾನ್ ಪಠಾಣ್ ಪರವಾಗಿ ರಾಜ್ಯ ಸರ್ಕಾರದ ಸಚಿವರು ಶಾಸಕರು ಸೇರಿದಂತೆ ಹಲವರು ಪ್ರಚಾರವನ್ನು ಮಾಡುತ್ತಿದ್ದು ಇನ್ನೂ ಶಾಸಕ ಎನ್ ಹೆಚ್ ಕೋನರಡ್ಡಿ ಕೂಡಾ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ.

ಹೌದು ಶಿಗ್ಗಾವಿ – ಸವಣೂರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೋಳಿ ಅವರೊಂದಿಗೆ ಶಾಸಕ ಎನ್ ಹೆಚ್ ಕೋನರೆಡ್ಡಿಯವರು ಪಕ್ಷದ ಅಭ್ಯರ್ಥಿ ಯಾಸೀರ್ ಅಹ್ಮದ್ ಖಾನ್ ಪಠಾಣ್ ಅವರೊಂದಿಗೆ ಶಾಖಾಪೂರ ಗ್ರಾಮಕ್ಕೆ ಭೇಟಿ ನೀಡಿ ಮತ ಯಾಚಿಸಿದರು

ಇದೇ ವೇಳೆ ಹಲವೆಡೆ ರೋಡ್ ಶೋ ಮೂಲಕ ಮತಯಾಚನೆಯನ್ನು ಮಾಡಿದರು ಈ ಸಂದರ್ಭದಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕರಾದ ವಿನಯ ಕುಲಕರ್ಣಿ,ಧಾರವಾಡ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅನೀಲಕುಮಾರ ಪಾಟೀಲ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರು ‌ವಿನಯ ಸೋರಕೆ ಸೇರಿ ದಂತೆ ಪಕ್ಷದ ಹಲವಾರು‌ ಮುಖಂಡರು, ಕಾರ್ಯಕರ್ತರು ಹಾಗೂ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಶಿಗ್ಗಾಂವಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.