ವಿದ್ಯುತ್ ಕಂಬ ಬಿದ್ದು 20 ಕ್ಕೂ ಹೆಚ್ಚು ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಗಂಭೀರ ಗಾಯ ತಪ್ಪಿತು ದೊಡ್ಡ ಅವಘಡ…..

Suddi Sante Desk
ವಿದ್ಯುತ್ ಕಂಬ ಬಿದ್ದು 20 ಕ್ಕೂ ಹೆಚ್ಚು ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಗಂಭೀರ ಗಾಯ ತಪ್ಪಿತು ದೊಡ್ಡ ಅವಘಡ…..

ಚಿಕ್ಕಮಗಳೂರು

ಏಕಾಏಕಿ ರಸ್ತೆಗೆ ಅಡ್ಡಲಾಗಿ ವಿದ್ಯುತ್ ಕಂಬ ಬಿದ್ದು ಚಿಕ್ಕಮಗಳೂರು ತಾಲೂಕಿನ ಕಣಿವೆ-ದಾಸರಹಳ್ಳಿ ಬಳಿ ಭೀಕರ ಸರಣಿ ಅಪಘಾತ ಸಂಭವಿಸಿದೆ ಹೌದು ವಿದ್ಯುತ್ ಕಂಬ‌ ಬಿದ್ದ ಈ ಸರಣಿ ಅಪಘಾ ತದಲ್ಲಿ ಟಾಟಾ ಏಸ್ ವಾಹನ ಮತ್ತು ಸರ್ಕಾರಿ ಬಸ್ ಹಾಗೂ ಕಾರು ಜಖಂಗೊಂಡಿವೆ.

ಟಾಟಾ ಏಸ್‌ನಲ್ಲಿದ್ದ 20ಕ್ಕೂ ಹೆಚ್ಚು ವಿದ್ಯಾರ್ಥಿ ಗಳಿಗೆ ಗಂಭೀರ ಗಾಯಗಳಾಗಿವೆ.ಈ ಮಕ್ಕಳು ಚಿಕ್ಕಮಗಳೂರು ಹಬ್ಬಕ್ಕೆ ಬಂದಿದ್ರು ಖುಷಿಯಾಗಿ ಹಬ್ಬ ಮುಗಿಸಿ ವಾಪಸ್ ತೆರಳುತ್ತಿದ್ದಾಗ ಈ ಅವಘಡ ನಡೆದಿದೆ.ವಿದ್ಯಾರ್ಥಿಗಳು ಸಖರಾಯ ಪಟ್ಟಣದ ಜಿಗಣೆಹಳ್ಳಿ ಸರ್ಕಾರಿ ಶಾಲೆಯವರಾ ಗಿದ್ದಾರೆ.ಗಾಯಗೊಂಡ ವಿದ್ಯಾರ್ಥಿಗಳನ್ನ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡ ಲಾಗಿದೆ.ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಚಿಕ್ಕಮಗಳೂರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.