ಪಾರ್ಟಿ ಮಾಡುವಾಗ ಕೊಲೆ – ಹೊಸ ವರುಷದ ಮೊದಲನೆಯ ದಿನ ಕೊಲೆ

Suddi Sante Desk

ವಿಜಯಪುರ –


ಹೊಸ ವರ್ಷದ ಮೊದಲ ದಿನವೇ ವಿಜಯಪುರದಲ್ಲಿ ನೆತ್ತರು ಹರಿದಿದೆ.ಹಳೆಯ ದ್ವೇಷದಿಂದ ವ್ಯಕ್ತಿಯೊರ್ವನನ್ನು ಕೊಲೆ ಮಾಡಲಾಗಿದೆ.ವಿಜಯಪುರ ತಾಲೂಕಿನ ರತ್ನಾಪುರ ಬಳಿಯ ಎ1 ಡಾಬಾದಲ್ಲಿ ಕೊಲೆ ಮಾಡಲಾಗಿದೆ.

ಮಹಾದೇವ ಕವಲಗಿ 57 ವರ್ಷ ಕೊಲೆಯಾದ ವ್ಯಕ್ತಿಯಾಗಿದ್ದಾನೆ.ಮಹಾದೇವನ ಕತ್ತು ಕೊಯ್ದು ಹಾಗೂ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ ಯುವಕ.

ಹೊಸ ವರ್ಷದ ಪಾರ್ಟಿ ಮಾಡುವ ವೇಳೆ ಈ ಒಂದು ಘಟನೆ ನಡೆದಿದೆ.ಮಹದೇವ ಜೊತೆ ಊಟಕ್ಕೆ ಕುಳಿತಿದ್ದ ಸಂತೋಷ ಎಡವೆ, ದಶರಥ ಹಾಗೂ ಪಾಂಡುರಂಗ ಎಂಬ ಯುವಕರು
ಕೊಲೆಗೀಡಾದ ಮಹದೇವ ಹಾಗೂ ಯುವಕ ಸಂತೋಷ ತಂದೆಯ ಮದ್ಯೆ ಈ ಹಿಂದೆ ಜಗಳ ಆಗಿತ್ತಂತೆ ಡಾಬಾದಲ್ಲಿ ಬಿಲ್ ನೀಡುವ ವಿಚಾರವಾಗಿ ಜಗಳ ಆಗಿತ್ತಂತೆ.

ಅದೇ ದ್ವೇಷದ ಹಿನ್ನೆಲೆಯಲ್ಲಿ ಮಹಾದೇವನನ್ನು ಚಾಕುವಿನಿಂದ ಕತ್ತು ಕೊಯ್ದು, ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಸಂತೋಷ
ಘಟನೆಯ ಬಳಿಕ ಸಂತೋಷ ಜೊತೆಗಿದ್ದ ದಶರಥ ಹಾಗೂ ಪಾಂಡುರಂಗ ಪರಾರಿಯಾಗಿದ್ದಾರೆ.

ಸಂತೋಷ್ ಒಬ್ಬನೇ ಕೊಲೆ ಮಾಡಿದ್ದಾಗಿ ಪ್ರತ್ಯಕ್ಷದರ್ಶಿಗಳ ಹೇಳಿದ್ದು ಸ್ಥಳಕ್ಕೆ ತಿಕೋಟಾ ಪೊಲೀಸರ ಭೇಟಿ ಪರಿಶೀಲನೆ ಮಾಡಿದ್ದಾರೆ.
ತಿಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.