ಕೈ ಬಾರ ಇಳಿಸಿ ಕೇಸರಿ ಬಾರ ಹೊತ್ತುಕೊಂಡ ನಾಗರಾಜ ಛಬ್ಬಿ ಕೈ ಪಕ್ಷದ ಬಹುದಿನಗಳ ಸಂಬಂಧಕ್ಕೆ ನಾಂದಿ…..

Suddi Sante Desk
ಕೈ ಬಾರ ಇಳಿಸಿ ಕೇಸರಿ ಬಾರ ಹೊತ್ತುಕೊಂಡ ನಾಗರಾಜ ಛಬ್ಬಿ ಕೈ ಪಕ್ಷದ ಬಹುದಿನಗಳ ಸಂಬಂಧಕ್ಕೆ ನಾಂದಿ…..

ಹುಬ್ಬಳ್ಳಿ

ಕಾಂಗ್ರೆಸ್ ಪಕ್ಷಕ್ಕೆ ನಾಗರಾಜ್ ಛಬ್ಬಿ ಗುಡ್ ಬೈ ಹೇಳಿದ್ದಾರೆ ಹೌದು ಕೈ ಬಿಟ್ಟು ಕಮಲ ಪಕ್ಷವನ್ನು ಹಿಡಿದಿದ್ದಾರೆ ನಾಗರಾಜ್ ಛಬ್ಬಿ. CM ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲು, ಸಚಿವ ಗೋವಿಂದ ಕಾರಜೋಳ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು ಛಬ್ಬಿ.

ಧಾರವಾಡ ಜಿಲ್ಲೆಯ ಕಲಘಟಗಿಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾ ಗಿದ್ದ‌ ನಾಗರಾಜ್ ಛಬ್ಬಿ.ಮಾಜಿ ಸಚಿವ ಸಂತೋಷ ಲಾಡ್ ಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್‌ ನ್ನು ನೀಡಿದ್ದು ಹೀಗಾಗಿ ಕಾಂಗ್ರೆಸ್ ಹೈಕಮಾಂಡ ನಿರ್ಧಾರ ದಿಂದ ಬೇಸತ್ತು ಗುಡ್ ಬೈ ಹೇಳಿ ಬಿಜೆಪಿ ಪಕ್ಷವನ್ನು ಸೇರ್ಪಡೆ ಯಾದರು.

ಇದರಿಂದ ಮುನಿಸಿಕೊಂಡು ಪಕ್ಷವನ್ನು ತೊರೆದ ಛಬ್ಬಿಯವರು ಬಿಜೆಪಿ ಸೇರಿಕೊಂಡರು.ಬೆಳಿಗ್ಗೆ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದ ಇವರು.4 ಬಾರಿ ಟಿಕೆಟ್ ವಂಚನೆಯಿಂದ ಬೇಸತ್ತು ಕಾಂಗ್ರೆಸ್ ಗೆ ರಾಜಿನಾಮೆ ನೀಡಿದರು

ದೆಹಲಿಯಲ್ಲಿ ಬಿಜೆಪಿ ಸೇರಿದರು ನಾಗರಾಜ ಛಬ್ಬಿ
4 ಬಾರಿ ಕಾಂಗ್ರೆಸ್ ಟಿಕೆಟ್ ವಂಚಿತರಾಗಿದ್ದ ಇವರು ಹು-ಧಾ ಸೆಂಟ್ರಲ್ ಒಂದು ಬಾರಿ, ಪಶ್ಚಿಮ ದಿಂದ ಒಂದು ಬಾರಿ ಕಲಘಟಗಿಯಿಂದ ಎರಡು ಬಾರಿ ಟಿಕೆಟ್ ವಂಚಿತರಾದ ಇವರು ಈಗ ಕೇಸರಿ ಪಕ್ಷದ ಬಳಗವನ್ನು ಸೇರಿಕೊಂಡಿದ್ದಾರೆ‌.

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.