This is the title of the web page
This is the title of the web page

Live Stream

[ytplayer id=’1198′]

April 2025
T F S S M T W
 12
3456789
10111213141516
17181920212223
24252627282930

| Latest Version 8.0.1 |

State News

ACB ಬಲೆಗೆ ಗ್ರಾಮ ಪಂಚಾಯತ ಕಂಪ್ಯೂಟರ್ ಸಿಬ್ಬಂದಿ – ಕೂಲಿ ಕೆಲಸದ ಹಣ ಖಾತೆಗೆ ಜಮಾ ಮಾಡಲು ಹಣಕ್ಕೆ ಬೇಡಿಕೆ ಇಟ್ಟಿದ್ದ ನರೇಂದ್ರಬಾಬು…..

WhatsApp Group Join Now
Telegram Group Join Now

ಚಿತ್ರದುರ್ಗ –

ನರೇಗಾ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ ಹಣವನ್ನು ಜಮಾ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಗ್ರಾಮ ಪಂಚಾಯತ ಕಂಪ್ಯೂಟರ್ ಆಪರೇಟರ್ ರೊಬ್ಬರು ಎಸಿಬಿ ಬಲೆಗೆ ಬಿದ್ದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.ಹೌದು ಹಿರಿಯೂರು ತಾಲ್ಲೂಕಿನ ವಿ.ವಿ.ಪುರ ಗ್ರಾಮ ಪಂಚಾಯಿತಿಯ ಡಾಟಾ ಎಂಟ್ರಿ ಆಪರೇಟರ್ ಆರ್. ನರೇಂದ್ರಬಾಬು ಅವರು ಗುಲ್ಲಾ ಓಂಕಾರಪ್ಪ ಅವರಿಂದ ನರೇಗಾ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೂಲಿ ಕೆಲಸದ ಹಣ ಖಾತೆಗಳಿಗೆ ಜಮಾ ಮಾಡುವ ವಿಚಾರಕ್ಕೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಈ ಕುರಿತಂತೆ ಎಸಿಬಿ ಗೆ ದೂರನ್ನು ನೀಡಿದ್ದರು ಕಾರ್ಯಾ ಚರಣೆ ಮಾಡಿದ ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ
ಓಂಕಾರಪ್ಪ ವಿ.ವಿ.ಪುರ ಗ್ರಾಮ ಪಂಚಾಯಿತಿಯ ಡಾಟಾ ಎಂಟ್ರಿ ಆಪರೇಟರ್ ಆರ್. ನರೇಂದ್ರಬಾಬು ಅವರನ್ನು ಭೇಟಿ ಮಾಡಿ ಕೂಲಿ ಕೆಲಸದ ಹಣ ತಮ್ಮ ಖಾತೆಗಳಿಗೆ ಜಮಾ ಆಗಿರುವುದಿಲ್ಲ ಎಂದು ಕೇಳಿದ್ದು,ನಿಮ್ಮ ಖಾತೆಗೆ ಕೂಲಿ ಕೆಲಸ ಜಮಾ ಆಗಲು ಪಿ.ಡಿ.ಓ.ರವರು ಥಂಬ್‌ ನೀಡಬೇಕು. ನೀವು ಹಣವನ್ನು ಕೊಡದೆ ಅವರು ಥಂಬ್‌ ನೀಡುವುದಿಲ್ಲ.ನೀವು ಪಿ.ಡಿ.ಓ.ರವರಿಗೆ ನೀಡಬೇಕಾದ ಹಣವನ್ನು ನನಗೆ ಕೊಡಿ,ಇಂಜಿನಿಯರ್‌ರವರಿಗೆ ನೀಡಬೇ ಕಾದ ಹಣವನ್ನು ಅವರಿಗೇ ಕೊಡಿ, ಬೇರೆಯವರೆಲ್ಲ ಒಂದು ಲಕ್ಷಕ್ಕೆ ಐದು ಸಾವಿರ ನೀಡಿದ್ದಾರೆ.

ಸಾಹೇಬರಿಗೆ ಕೊಡಬೇಕಾದ ಆ ಹಣವನ್ನು ನನಗೆ ಕೊಡಿ ಎಂದು ರೂ.5000/- ಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಕಾರಪ್ಪ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿರುತ್ತಾರೆ.ಈ ದೂರಿನ ನ್ವಯ ಎಸಿಬಿ ಅಧಿಕಾರಿಗಳು ಪ್ರಕರಣ ದಾಖಲಿಸಿ ತನಿಖೆ ಯನ್ನು ಕೈಗೊಂಡಿದ್ದಾರೆ.ಈ ಒಂದು ಕಾರ್ಯಾಚರಣೆಯು ಎಸ್ಪಿ ಜಯಪ್ರಕಾಶ್‌, ಪೊಲೀಸ್ ಅಧೀಕ್ಷಕರು, ಭ್ರಷ್ಟಾಚಾರ ನಿಗ್ರಹದಳ, ಪೂರ್ವ ವಲಯ, ದಾವಣಗೆರೆ ಇವರ ಮಾರ್ಗ ದರ್ಶನದಲ್ಲಿ ಕೈಗೊಳ್ಳಲಾಗಿರುತ್ತದೆ.

ಈ ಸಂದರ್ಭದಲ್ಲಿ ಚಿತ್ರದುರ್ಗ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಾದ ಡಿ.ವೈ.ಎಸ್.ಪಿ ,ಬಸವರಾಜ ಆರ್. ಮಗದುಮ್,ಪೊಲೀಸ್ ನಿರೀಕ್ಷಕ ಹಸನ್‌ಸಾಬ್,ಪ್ರವೀಣ್ ಕುಮಾರ್,ಮತ್ತು ಸಿಬ್ಬಂದಿಗಳಾದ ಮಾರುತಿರಾಂ ಹೆಚ್‌.ಸಿ. ಓಬಣ್ಣ,ಹೆಚ್.ಸಿ.ಹರೀಶ್ ಕುಮಾರ್,ಹೆಚ್.ಸಿ.ಹಾಗೂ ಫಕ್ರುದ್ದೀನ್,ಪಿ.ಸಿ.ಯತಿರಾಜ, ಪಿ.ಸಿ.ಫಯಾಜ್,ಪಿ.ಸಿ. ಹಾಜರಿದ್ದರು.


Google News

 

 

WhatsApp Group Join Now
Telegram Group Join Now
Suddi Sante Desk