This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

ಧಾರವಾಡ

ರಾಜು ನಾಯಕವಾಡಿಯವರನ್ನು ಭೇಟಿಯಾದ NCP ಪಕ್ಷದ ಟೀಮ್ – ಶೀಘ್ರದಲ್ಲೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶರದ್ ಪವಾರ್ ಸಮ್ಮುಖದಲ್ಲಿ ಸೇರ್ಪಡೆಯಾಗುವಂತೆ ಆಹ್ವಾನ NCP ರಾಜ್ಯಾಧ್ಯಕ್ಷರು…..

ರಾಜು ನಾಯಕವಾಡಿಯವರನ್ನು ಭೇಟಿಯಾದ NCP ಪಕ್ಷದ ಟೀಮ್ – ಶೀಘ್ರದಲ್ಲೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶರದ್ ಪವಾರ್ ಸಮ್ಮುಖದಲ್ಲಿ ಸೇರ್ಪಡೆಯಾಗುವಂತೆ ಆಹ್ವಾನ NCP ರಾಜ್ಯಾಧ್ಯಕ್ಷರು…..
WhatsApp Group Join Now
Telegram Group Join Now

ಹುಬ್ಬಳ್ಳಿ

ರಾಜು ನಾಯಕವಾಡಿಯವರನ್ನು ಭೇಟಿಯಾದ NCP ಪಕ್ಷದ ಟೀಮ್ – ಶೀಘ್ರದಲ್ಲೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶರದ್ ಪವಾರ್ ಸಮ್ಮುಖ ದಲ್ಲಿ ಸೇರ್ಪಡೆಯಾಗುವಂತೆ ಆಹ್ವಾನ NCP ರಾಜ್ಯಾಧ್ಯಕ್ಷರು ಹೌದು ಒಂದು ಕಡೆಗೆ ಲೋಕ ಸಭಾ ಚುನಾವಣೆಗೆ ದಿನಾಂಕ ಹತ್ತಿರ ಬರುತ್ತಿ ದ್ದಂತೆ ಇತ್ತ ಯುವ ಮುಖಂಡ ಸಮಾಜ ಕಾರ್ಯ ಕರ್ತ ರಾಜು ನಾಯಕವಾಡಿ ಯವರು ಕೂಡಾ ಸ್ಪರ್ಧೆಗೆ ಭರ್ಜರಿಯಾದ ಸಿದ್ದತೆಯನ್ನು ಮಾಡುತ್ತಿ ರುವ ಬೆನ್ನಲ್ಲೇ ಇವರಿಗೆ ಬೇರೆ ಬೇರೆ ಪಕ್ಷಗಳಿಗೆ ಆಹ್ವಾನ ಕೂಡಾ ಬರುತ್ತಿವೆ.

ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಬೇರೆ ಬೇರೆ ಪಕ್ಷದವರು ಇವರನ್ನು ಪಕ್ಷಕ್ಕೆ ಆಹ್ವಾನ ಕುರಿತಂತೆ ಆಮಂತ್ರಿಸುತ್ತಿದ್ದಾರೆ.ಈ ಹಿಂದೆ ಎನ್ ಸಿಪಿ ಪಕ್ಷದ ರಾಜ್ಯಾಧ್ಯಕ್ಷರು ರಾಜು ನಾಯಕವಾಡಿ ಯವರನ್ನು ಭೇಟಿಯಾಗಿ ಪಕ್ಷಕ್ಕೆ ಬರುವ ಕುರಿತಂತೆ ಚರ್ಚೆಯನ್ನು ಮಾಡದ್ದರು.ಈ ಒಂದು ಸಂದರ್ಭದಲ್ಲಿ ಸ್ಥಳೀಯ ಮಠಾಧೀಶರು ಮುಖಂಡರು ಸಮಾಜದ ಗಣ್ಯರೊಂದಿಗೆ ಚರ್ಚೆ ಯನ್ನು ಮಾಡಿ ತಿಳಿಸುವುದಾಗಿ ಹೇಳಿದ್ದರು.

ಇದಾದ ನಂತರ ಸಧ್ಯ ರಾಜು ನಾಯಕವಾಡಿ ಅವರನ್ನು ಎನ್ ಸಿಪಿ ಪಕ್ಷದ ರಾಜ್ಯಾಧ್ಯಕ್ಷ ಸಿ ಎಸ್ ಇನಾಮದಾರ ಮತ್ತೊಂದು ಸುತ್ತಿನ ಮಾತುಕತೆ ಯನ್ನು ಮಾಡಿದರು.ನಗರದ ಖಾಸಗಿ ಹೊಟೇಲ್ ನಲ್ಲಿ ಒಂದು ಗಂಟೆಗಳ ಕಾಲ ಚರ್ಚೆಯನ್ನು ಮಾಡಿ ಕೆಲವೊಂದಿಷ್ಟು ವಿಚಾರಗಳ ಕುರಿತಂತೆ ಚರ್ಚೆಯನ್ನು ಮಾಡಿದರು.ಪಕ್ಷಕ್ಕೆ ಆಹ್ವಾನವನ್ನು ನೀಡಿದರು.ಬರುವ ಲೋಕಸಭಾ ಚುನಾವಣೆಗೆ ಪಕ್ಷದಿಂದ ಟಿಕೇಟ್ ನೀಡುವ ಮತ್ತು ಸಧ್ಯ ಜಿಲ್ಲಾ ಧ್ಯಕ್ಷ ಸ್ಥಾನ ಸೇರಿದಂತೆ ಹಲವಾರು ವಿಚಾರಗಳ ಕುರಿತಂತೆ ಮಾತುಕತೆಯನ್ನು ಮಾಡಿದರು.

ಇನ್ನೂ ಇದೇ ವೇಳೆ ಎನ್ ಸಿಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶರದ್ ಪವಾರ್ ಅವರ ಸಮ್ಮುಖದಲ್ಲಿ ಯೇ ಪಕ್ಷಕ್ಕೆ ಸೇರ್ಪಡೆ ಮಾಡುವ ಮಾತುಗಳನ್ನು ಹೇಳಿದರು.ಇನ್ನೂ ಇತ್ತ ರಾಜು ನಾಯಕವಾಡಿ ಕೂಡಾ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಶೀಘ್ರದಲ್ಲೇ ಈ ಒಂದು ಕುರಿತಂತೆ ತೀರ್ಮಾನ ವನ್ನು ಪ್ರಕಟಿಸುವುದಾಗಿ ಹೇಳಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……


Google News

 

 

WhatsApp Group Join Now
Telegram Group Join Now
Suddi Sante Desk