ಬೆಂಗಳೂರು -
ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಹೊಸದೊಂದು ಕಾರ್ಯಕ್ರಮ ವನ್ನು ಇಲಾಖೆ ಪರಿಚಯಿಸಿದೆ ಹೌದು ನಗರ ಪ್ರದೇಶದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕೃಷಿ,ತೋಟಗಾರಿಕೆ, ಪಶುಸಂಗೋಪನೆ ಹಾಗೂ ಗ್ರಾಮೀಣ ಸಂಸ್ಕೃತಿಯ ನೇರ ಅನುಭವ ಕಲ್ಪಿಸುವ ಸಲುವಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಯು "ಗ್ರಾಮಾನುಭವ" ಎಂಬ ವಿಶಿಷ್ಟ ಕಾರ್ಯಕ್ರ ಮಕ್ಕೆ ಅನುಮೋದನೆ ನೀಡಿದೆ.
ನಗರಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಕೃಷಿ ಪದ್ಧತಿ ಗಳು, ಮಣ್ಣು ಮತ್ತು ನೀರಿನ ಸಂರಕ್ಷಣೆ, ಆಹಾರ ಭದ್ರತೆ ಹಾಗೂ ಗ್ರಾಮೀಣ ಸಮುದಾಯದ ಜೀವನ ಶೈಲಿಯನ್ನು ಪ್ರಾಯೋಗಿಕವಾಗಿ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಜಾರಿಗೆ ತರಲಾ ಗುತ್ತಿದೆ.ಜಿಲ್ಲಾ ಕೇಂದ್ರಗಳ ವ್ಯಾಪ್ತಿಯಲ್ಲಿರುವ ನಗರ ಪ್ರದೇಶದ ಸರಕಾರಿ, ಅನುದಾನಿತ ಹಾಗೂ ಅನುದಾ ನರಹಿತ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜು ಗಳ 8, 9 ಮತ್ತು 11ನೇ ತರಗತಿಯ ವಿದ್ಯಾರ್ಥಿಗಳಿಗೆ ಇದು ಅನ್ವಯಿಸುತ್ತದೆ.
ಕಾರ್ಯಕ್ರಮದಡಿ ಒಂದು ರಾತ್ರಿ ಸೇರಿದಂತೆ ಎರಡು ದಿನಗಳ ಕಾಲ ಗ್ರಾಮದಲ್ಲಿಯೇ ಉಳಿದುಕೊಳ್ಳುವ ಮಕ್ಕಳಿಗೆ ಗ್ರಾಮೀಣದ ಜನಜೀವನದ ಬಗ್ಗೆ, ಕೃಷಿ ಚಟುವಟಿಕೆ ಬಗ್ಗೆ, ಸಾಂಸ್ಕೃತಿಕ ಜಗತ್ತಿನ ಬಗ್ಗೆ ಮಾಹಿತಿ ನೀಡಿ "ಗ್ರಾಮಾನುಭವ'ದ ಪರಿಚಯ ಮಾಡಲಾ ಗುತ್ತದೆ.ಕ್ಷೇತ್ರ ಅಧ್ಯಯನ ಮತ್ತು ಪರಿಚಯಾತ್ಮಕ ಭೇಟಿ ಗಳನ್ನು ಸೆಪ್ಟೆಂಬರ್ನಿಂದ ಡಿಸೆಂಬರ್ನೊಳಗೆ ಪೂರ್ಣಗೊಳಿಸಬೇಕು ತದನಂತರ ಜನವರಿಯಿಂದ ಫೆಬ್ರವರಿಯವರೆಗೆ ಶಾಲಾ ಮಟ್ಟದ ಅನುಪಾಲನಾ ಚಟುವಟಿಕೆಯನ್ನು ಹಮ್ಮಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಮೊದಲ ಹಂತದಲ್ಲಿ ಕೆಪಿಎಸ್, ಪಿಎಂಶ್ರೀ ಸೇರಿದಂತೆ 800ಕ್ಕಿಂತ ಹೆಚ್ಚು ಮಕ್ಕಳಿರುವ ಸರಕಾರಿ ಶಾಲೆ ಮತ್ತು ಪಿಯು ಕಾಲೇಜು ಸೇರಿದಂತೆ ನಗರ ಭಾಗದಲ್ಲಿರುವ ಒಟ್ಟು 160 ಸರಕಾರಿ ಶಾಲೆಗಳು ಮತ್ತು ಕಾಲೇಜುಗಳ ಸುಮಾರು 49,214 ವಿದ್ಯಾರ್ಥಿಗಳಿಗೆ 2.46 ಕೋ. ರೂ. ವೆಚ್ಚದಲ್ಲಿ ಈ ಕಾರ್ಯಕ್ರಮವನ್ನು ಜಾರಿಗೊಳಿಸ ಲಾಗುತ್ತಿದ್ದು ಯಾವ ರೀತಿ ಸ್ಪಂದನೆ ಸಿಗಲಿದೆ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು......