LIVE TV LocalCrimeNationalInternationalPoliticsEducationTechnologyEntertainmentSportsFeature
State News

ಶಿಕ್ಷಕನ ನಿರ್ಧಾರದಿಂದ ಬದುಕುಳಿದ 1643 ಮಕ್ಕಳು - ರಿಯಲ್ ಹೀರೋ ಶಿಕ್ಷಕ ರಾಜೇಂದ್ರ.....

ನೇಪಾಳ -

ಶಿಕ್ಷಕನ ತಕ್ಷಣದ ನಿರ್ಧಾರದಿಂದ ಬದುಕುಳಿದ್ದಾರೆ 1643 ವಿದ್ಯಾರ್ಥಿಗಳು ಸೆಕೆಂಡ್ ಅಂತರದಲ್ಲಿ ಶಿಕ್ಷಕ  ಮಾಡಿದ ಕೆಲಸದಿಂದ ಬದುಕುಳಿದ ಮಕ್ಕಳು ಹೌದು ನೇಪಾಳ ಪ್ರವಾಹದ ದುರಂತ ಕತೆಗಳು ಒಂದೊಂ ದಾಗಿ ಹೊರಬರುತ್ತಿದೆ ಇದೇ ವೇಳೆ ಹಲವರು ಪ್ರಾಣ ಉಳಿಸಿದ ಹಿರೋಗಳಿಗೆ ಭಾರಿ ಮೆಚ್ಚುಗೆ ವ್ಯಕ್ತವಾ ಗುತ್ತಿದ್ದರೆ ಈ ನೇಪಾಳ ಮಹಾ ಪ್ರವಾಹದಲ್ಲಿ ಮೂರು ಅಂತಸ್ತಿನ ದೊಡ್ಡ ಶಾಲೆಯೊಂದು ಕೊಚ್ಚಿ ಹೋಗಿದೆ. ಆದರೆ ಈ ಶಾಲೆಯಲ್ಲಿದ್ದ 1643 ವಿದ್ಯಾರ್ಥಿಗಳು ಸುರಕ್ಷಿತರಾಗಿದ್ದಾರೆ.

ಇದಕ್ಕೆ ಕಾರಣ ಇಂಗ್ಲೀಷ್ ಶಿಕ್ಷಕ ಸೆಕೆಂಡ್‌ಗಳ ಅಂತರ ದಲ್ಲಿ ತೆಗೆದುಕೊಂಡು ನಿರ್ಧಾರ ವಿದ್ಯಾರ್ಥಿಗಳ ಜೀವ ಉಳಿಸಿದೆ.47 ವರ್ಷದ ಶಿಕ್ಷಕ ರಾಜೇಂದ್ರ ದವಾಡಿ ರಿಯಲ್ ಹೀರೋ ಆಗಿದ್ದಾರೆ.ನೇಪಾಳದ ನುವಾ ಕೋಟ್ ಜಿಲ್ಲೆಯ ತ್ರಿಶೂಲಿ ಕಣವೆಯಲ್ಲಿನ ಮೂರು ಅಂತಸ್ತಿನ ದೊಡ್ಡ ಶಾಲೆ ಪ್ರವಾಹದ ಸಂದರ್ಭದಲ್ಲಿ ಈ ಶಾಲೆಯಲ್ಲಿ 1643 ವಿದ್ಯಾರ್ಥಿಗಳಿದ್ದರು9.20ಕ್ಕೆ ದವಾಡಿ ಸ್ನೇಹಿತ ಕರೆ ಮಾಡಿದ್ದ. ಆತಂಕದಲ್ಲೇ ನಮ್ಮ ಗ್ರಾಮ ಕೊಚ್ಚಿ ಹೋಗಿದೆ ಕಂಡು ಕೇಳರಿಯದ ಪ್ರವಾಹ ಬಂದಿದೆ ತಕ್ಷಣವೇ ಕಾರ್ಯಪ್ರವೃತ್ತರಾಗಲು ದಾವಾಡಿಗೆ ಹೇಳಿದ್ದ.

ನದಿಯಿಂದ ಕೆಲ ದೂರಗಳಲ್ಲಿ ಶಾಲೆ ಇತ್ತು ಇಷ್ಟೇ ಅಲ್ಲ ನದಿಯಿಂದ 60 ಮೀಟರ್ ಎತ್ತರದಲ್ಲಿ ಶಾಲೆ ಇದೆ. ಇನ್ನು ಕಾಂಕ್ರೀಟ್‌ನಿಂದ ಕಟ್ಟಿದ ಗಟ್ಟಿಮುಟ್ಟಾದ ಶಾಲೆ ಇದು. ಹೀಗಾಗಿ ಅಪಾಯ ಬರದು ಎಂದು ರಾಜೇಂದ್ರ ಭಾವಿಸಿದ್ದರು. ಕರೆ ಕಟ್ ಮಾಡಿ ಕೆಲ ನಿಮಿಷಗಳಲ್ಲೇ ಪೋಷಕರೊಬ್ಬರು ಶಾಲೆಗೆ ಓಡೋಡಿ ಬಂದಿದ್ದರು. ಪ್ರವಾಹ ತೀವ್ರವಾಗಿದೆ ಎಂದು ಸಂಬಂಧಿಕರು ಹೇಳಿ ದ್ದಾರೆ. ಹಲವರು ಕೊಚ್ಚಿ ಹೋಗಿದ್ದಾರೆ ಎಂದಿದ್ದಾರೆ. ಅಷ್ಟರಲ್ಲೇ ರಾಜೇಂದ್ರ ಅವರಿಗೆ ಪರಿಸ್ಥಿತಿ ಅರಿವಾಗಿದೆ. ಸಮಯವೂ ಮೀರಿದೆ.ಶಾಲೆಯ ಬೆಲ್ ಹೊಡೆಯಲು ಸೂಚಿಸಿದ ಶಿಕ್ಷಕ

ಪರಿಸ್ಥಿತಿ ಅರಿವಾಗುತ್ತಿದ್ದಂತೆ ಸಮಯವೂ ಮಿಂಚಿತ್ತು. ಪ್ರವಾಹದ ನೀರು 75 ಕಿಲೋಮೀಟರ್ ವೇಗದಲ್ಲಿ ಬರುತ್ತಿತ್ತು. ಶಾಲೆಯ ಬೆಲ್ ಬಾರಿಸಲು ಸೂಚಿಸಿದ್ದು ಮಾತ್ರವಲ್ಲ, ಶಿಕ್ಷಕರಿಗೆ ಸಿಬ್ಬಂದಿಗಳಿಗೆ ಸೂಚನೆ ನೀಡಿ ದ್ದಾರೆ. ಎಲ್ಲಾ ಕೊಠಡಿಗಳಿಂದ ಮಕ್ಕಳನ್ನು ಶಾಲೆ ಯಿಂದ ಹೊರಕಳುಹಿಸಲು ಸೂಚಿಸಿದ್ದಾರೆ. ಪ್ರವಾಹ ಬರುತ್ತಿದೆ. ಹೀಗಾಗಿ ರಾಜೇಂದ್ರ ದ್ವಾರದ ಬಳಿ ನಿಂತಿ ದ್ದಾರೆ. ನೂಗು ನುಗ್ಗಲು ಮಾಡದೇ ಸೂಚನೆ ಪಾಲಿಸಿ ಎಂದು ಶಾಲಾ ಕೊಠಡಿಗಳಲ್ಲಿ ಶಿಕ್ಷಕರು ಸೂಚಿಸಿದ್ದಾರೆ.

ಇತ್ತ ಮಕ್ಕಳು ಬರುತ್ತಿದ್ದಂತೆ ಕಾಲ್ನಡಿಗೆಯಲ್ಲಿ ಶಾಲೆ ಯಿಂದ ಕೆಲ ದೂರ ಓಡಲು ಆರಂಭಿಸಿದ್ದಾರೆ. ಶಿಕ್ಷಕ ರಾಜೇಂದ್ರ, ವಿದ್ಯಾರ್ಥಿಗಳು ಹಾಗೂ ಇತರ ಸಿಬ್ಬಂದಿ ಗಳು ಹಿಂಬಾಲಿಸಿದ್ದಾರೆ ಇದರ ನಡುವೆ ಆಘಾತ ಮಾಹಿತಿ ಕೇಳಿ ವಿದ್ಯಾರ್ಥಿಯೊಬ್ಬಳು ಅಸ್ವಸ್ಥಳಾಗಿ ದ್ದಾಳೆ. ಈಕೆಯನ್ನು ಬೈಕ್‌ನಲ್ಲಿ ಎತ್ತರ ಪ್ರದೇಶಕ್ಕೆ ಕರೆ ಯದೊಯ್ಯಲಾಯಿತು.ಇತ್ತ ವಿದ್ಯಾರ್ಥಿಗಳು ಸೇರಿದಂತೆ ಇಡೀ ಶಾಲೆಯ ಸಿಬ್ಬಂದಿಗಳು ನದಿ ಎಷ್ಟೇ ತುಂಬಿ ಹರಿದರೂ ಯಾವುದೇ ಸಮಸ್ಯೆಯಾಗದಂತೆ ಪಕ್ಕದ ಎತ್ತರದ ಪ್ರದೇಶ ಹತ್ತಿದ್ದಾರೆ.

ಅಷ್ಟರಲ್ಲೇ ಪ್ರವಾಹದಿಂದ ನದಿ ನೀರಿನ ಮಟ್ಟ ಏರಿಕೆ ಯಾಗಿದೆ. ಕೆಲವೇ ಕ್ಷಣದಲ್ಲಿ ಶಾಲೆ ಮೇಲಿನಿಂದ ನೀರು ಹರಿದಿದೆ. ಶಾಲೆ ಕಟ್ಟಡ ಕೊಚ್ಚಿ ಹೋಗಿದೆ. ಶಿಕ್ಷನ ತಕ್ಷಣದ ನಿರ್ಧಾರದಿಂದ 1643 ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದಾರೆ.

ಸುದ್ದಿ ಸಂತೆ ನ್ಯೂಸ್ ನೇಪಾಳ....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಳೆಯಿಂದ ಬದಲಾಗಲಿವೆ ಐದು ನಿಯಮಗಳು - ಜೇಬಿಗೆ ಕತ್ತರಿ ಗ್ಯಾರಂಟಿ ಇಂದೇ ಈ ಕೆಲಸ ಮುಗಿಸಿ.....CM ಭೇಟಿಯಾಗಲಿರುವ ವಿಶೇಷ ಜೈನ ನಿಯೋಗ - ರಾಷ್ಟ್ರ ಸಂತ ಆಚಾರ್ಯ ಗುಣಧರ ನಂದಿ ಮಹಾರಾಜರ ಮಾರ್ಗದರ್ಶನದಲ್ಲಿ CM ಭೇಟಿ.....ಹಲವು ಬೇಡಿಕೆಗಳ ಈಡೇರಿಕೆಗೆ ಮನವಿ.....ಗುರುತಿನ ಚೀಟಿ ಧರಿಸಲು ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ - ಸರ್ಕಾರದಿಂದ ಮಹತ್ವದ ಆದೇಶ.....ಒಂದೇ ತಿಂಗಳಲ್ಲಿ ಮೂರು ಬಾರಿ ಅಸ್ವಸ್ಥಗೊಂಡ ಶಾಲಾ ವಿದ್ಯಾರ್ಥಿಗಳು - ಮೇಲಿಂದ ಮೇಲೆ ಘಟನೆ ನಡೆಯುತ್ತಿದ್ದರು ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು.....ರಾಜ್ಯ ಸರ್ಕಾರಿ ನೌಕರರ ಪ್ರತಿಭಟನೆ - 8ನೇ ವೇತನ ಆಯೋಗ ಬಂದರೆ ಎಷ್ಟು ಸಂಬಳ ಹೆಚ್ಚಾಗುತ್ತದೆ ವೇತನ ಆಯೋಗದ ಮುಂದೆ ಇರುವ ಬೇಡಿಕೆಗಳೇನು.....ಶಿಕ್ಷಕನ ನಿರ್ಧಾರದಿಂದ ಬದುಕುಳಿದ 1643 ಮಕ್ಕಳು - ರಿಯಲ್ ಹೀರೋ ಶಿಕ್ಷಕ ರಾಜೇಂದ್ರ.....IAS ಅಧಿಕಾರಿ ಗ್ಯಾನೇಂದ್ರ ಕುಮಾರ್ ಬಂಧನ - ವಿಚಾರಣೆ ನಂತರ ವಶಕ್ಕೆ ತೆಗೆದುಕೊಂಡ ಪೊಲೀಸರು.....ಒತ್ತಡದ ಹತ್ತಾರು ಕಾರ್ಯಗಳ ನಡುವೆ ಶಿಕ್ಷಕರ ಕಾರ್ಯದ ಬಗ್ಗೆ ಮೆಚ್ಚುಗೆ - ಅರ್ಥಪೂರ್ಣವಾಗಿ ನಡೆಯಿತು KSPSTA ಪದಗ್ರಹಣ ಕಾರ್ಯಕ್ರಮ.....KAS ಅಧಿಕಾರಿಗಳ ವರ್ಗಾವಣೆ - ಹತ್ತಕ್ಕೂ ಹೆಚ್ಚು ಅಧಿಕಾರಿಗಳ ವರ್ಗಾವಣೆ ಆಡಳಿತ ಯಂತ್ರಕ್ಕೆ ಸರ್ಜರಿ.....