LIVE TV LocalCrimeNationalInternationalPoliticsEducationTechnologyEntertainmentSportsFeature
Local News

ಮನಷ್ಯರಿಗೆ ಕರೊನಾ – ಜಾನುವಾರುಗಳಿಗೆ ಚರ್ಮ ಗಂಟು ರೋಗ

ಧಾರವಾಡ -

ಎಲ್ಲಿ ನೋಡಿದಲ್ಲಿ ಕೇಳಿದಲ್ಲಿ ಮಹಾಮಾರಿ ಕರೊನಾ ಕರೊನಾ, ದೂರದ ಚೀನಾ ದೇಶದಿಂದ ಈ ಒಂದು ಮಹಾಮಾರಿ ಮನುಷ್ಯರನ್ನು ಕಾಡುತ್ತಿದ್ದರೆ ಇನ್ನೂ ಇತ್ತ ಪ್ರಾಣಿಗಳಿಗೆ ಒಂದು ಕಾಯಿಲೆ ಈಗಾಗಲೇ ಕಾಣಸಿಕೊಂಡಿದೆ. ಹೌದು ಮನುಷ್ಯರಿಗೆ ಕರೊನಾ ಚಿಂತೆಯಾದ್ರೆ ಇನ್ನೂ ಜಾನುವಾರುಗಳಿಗೆ ಚರ್ಮ ಗಂಟು ರೋಗ ಎಂಬ ಕಾಯಿಲೆ ಕಾಣಿಸಿಕೊಂಡಿದೆ.

ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಈ ಒಂದು ಈವರೆಗೆ ಕಾಯಿಲೆ ಇರಲಿಲ್ಲ. ಚೀನಾದಿಂದ ಕರೊನಾ ನಮ್ಮ ದೇಶಕ್ಕೇ ಹೇಗೆ ಕಾಲಿಟ್ಟಿತೊ ಗೊತ್ತಿಲ್ಲ ಇತ್ತ ದಕ್ಷಿಣ ಆಪ್ರೀಕದಿಂದ ಈ ಒಂದು ಚರ್ಮ ಗಂಟು ರೋಗ ಕಾಲಿಟ್ಟಿದ್ದು ಧಾರವಾಡ ಜಿಲ್ಲೆಯಲ್ಲಿ ಜಾನುವಾರುಗಳನ್ನು ಅತಿಯಾಗಿ ಕಾಡುತ್ತಿದೆ.

ಕಳೆದ ಎರಡು ಮೂರು ತಿಂಗಳಿನಿಂದ ಈ ಒಂದು ರೋಗ ಜಿಲ್ಲೆಯಲ್ಲಿ ಹೆಚ್ಚಾಗಿದ್ದು ಇದಕ್ಕೆ ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಜಾನುವಾರಗಳು ಬಲಿಯಾಗಿದ್ದು ಇನ್ನೂ ಕೂಡಾ ಸಾಯುತ್ತಿವೆ.

ಕ್ಯಾಬ್ರಿ ಎಂಬ ವೈರಸ್ ನಿಂದ ಕೂಡಿದ ಈ ಚರ್ಮ ಗಂಟು ರೋಗ ಜಾನುವಾರುಗಳಲ್ಲಿ ಕಾಣಿಸಿಕೊಳ್ಳುತ್ತದೆ. ಮೂಲತಃ ದಕ್ಷಿಣ ಆಪ್ರೀಕಾ ದೇಶದ್ದಾಗಿದೆ.ಕರೊನಾ ಹಾಗೇ ಇದೊಂದು ಹೊಸ ತರಹದ ವೈರಸ್ ಆಗಿದೆ.ದಕ್ಷಿಣ ಆಪ್ರೀಕಾದಲ್ಲಿ ಇದು ಕುರಿಗಳಿಗೆ ಮಾತ್ರ ಕಾಯಿಲೆ ಬರುತ್ತಿತ್ತಂತೆ ಆದರೆ ನಮ್ಮ ದೇಶದಲ್ಲಿ ಈ ವೈರಸ್ ಕಾಲಿಟ್ಟಿದ್ದು ಈಗ ಎಲ್ಲಾ ರೀತಿಯ ಜಾನುವಾರಗಳಿಗೂ ಕಾಣಿಸಿಕೊಳ್ಳುತ್ತಿದೆ.

ಜಿಲ್ಲೆಯಲ್ಲಿ ಬಹುತೇಕ ಎಲ್ಲಾ ತಾಲೂಕುಗಳಲ್ಲಿ ಈ ಒಂದು ಕಾಯಿಲೆ ಜಾನುವಾರುಗಳಲ್ಲಿ ಕಾಣಿಸಿಕೊಂಡಿದೆ. ಈಗಾಗಲೇ 500 ಕ್ಕೂ ಹೆಚ್ಚು ಜಾನುವಾರಗಳಲ್ಲಿ ಚರ್ಮ ಗಂಟು ರೋಗ ಎಂಬ ಕಾಯಿಲೆ ಕಾಣಿಸಿಕೊಂಡಿದ್ದು ಇದನ್ನು ಈಗಾಗಲೇ ಗಂಭೀರವಾಗಿ ತಗೆದುಕೊಂಡಿರುವ ಜಿಲ್ಲಾ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ನಿಯಂತ್ರಣಕ್ಕೇ ಮುಂದಾಗಿದ್ದಾರೆ.

ಆದ್ರೂ ಕೂಡಾ ಸಮರ್ಪಕ ರೀತಿಯಲ್ಲಿ ಈ ಒಂದು ಕಾಯಿಲೆ ನಿಯಂತ್ರಣವಾಗುತ್ತಿಲ್ಲ. ಹೀಗಾಗಿ ದಿನದಿಂದ ದಿನಕ್ಕ ಈ ಒಂದು ಕಾಯಿಲೆ ಹೆಚ್ಚಾಗುತ್ತಿದ್ದು ಇದರಿಂದ ಗ್ರಾಮೀಣ ಪ್ರದೇಶದ ರೈತರು ಭಯಗೊಂಡಿದ್ದಾರೆ. ಈ ಒಂದು ಕಾಯಿಲೆ ಜಾನುವಾರುಗಳಲ್ಲಿ ಕಾಣಿಸಿಕೊಂಡ್ರೆ ಮೈಮೇಲೆ ಬಿಲ್ಲೆ ಬಿಲ್ಲೆ ಆಕಾರದ ಚರ್ಚದಲ್ಲಿ ಗಂಟುಗಳು ಎದ್ದು ಒಂಥರಾ ವಿಚಿತ್ರವಾಗಿ ಕಾಣುತ್ತದೆ.

ಅದೇ ಮುಂದೆ ಹೆಚ್ಚಾಗಿ ಆವರಿಸಿಕೊಂಡು ಜಾನುವಾರಗಳ ಪ್ರಾಣಕ್ಕೇ ಹಾನಿಯನ್ನುಂಟು ಮಾಡುತ್ತದೆ. ಮನುಷ್ಯರಿಗೆ ಸಧ್ಯ ಕರೊನಾ ಸಿಕ್ಕಾಪಟ್ಟಿಯಾಗಿ ಕಾಡುತ್ತಿದ್ದರೆ ಇತ್ತ ಚರ್ಮ ಗಂಟು ರೋಗ ಪ್ರಾಣಿಗಳಿಗೂ ಹೆಚ್ಚಾಗಿ ಕಾಡುತ್ತಿದ್ದು ಹೆಚ್ಚಾಗುವ ಮುನ್ನ ಈ ಒಂದು ಕಾಯಿಲೆಯನ್ನು ಸಂಪೂರ್ಣವಾಗಿ ನಿಯಂತ್ರಣವನ್ನು ಜಿಲ್ಲಾ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಮಾಡ್ತಾರಾ ಎಂಬದನ್ನು ಕಾದು ನೋಡಬೇಕಿದೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರ - 40 ಸಾವಿರ ಲಂಚ ಸ್ವೀಕರಿಸುವಾಗ ಟ್ರ್ಯಾಪ್.....