LIVE TV LocalCrimeNationalInternationalPoliticsEducationTechnologyEntertainmentSportsFeature
State News

ಕರೆಯನ್ನು ಸ್ವೀಕಾರ ಮಾಡದ BEO ಅಧಿಕಾರಿ ವಿರುದ್ಧ ಅಸಮಾಧಾನ ಆಕ್ರೋಶ.....

ಶಿವಮೊಗ್ಗ -

ಕಳೆದ ಕೆಲ ದಿನಗಳಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ.ಮಳೆಯಿಂದಾಗಿ ಸಾಗರ ತಾಲೂಕಿನ ಶಾಲೆಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿತ್ತು.ನಾಳೆ ರಜೆಯೋ ಅಥವಾ ಶಾಲೆಗಳು ನಡೆಯಲಿದೆಯೋ ಎಂಬ ಮಾಹಿತಿಗಾಗಿ ಬಿಇಓಗೆ ಕರೆ ಮಾಡಿದ್ರೇ ಯಾರೊಬ್ಬರ ಕರೆಯನ್ನು ಬಿಇಓ ರಿಸೀವ್ ಮಾಡದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಈ ಸಂಬಂಧ ಸಾಗರ ತಾಲೂಕಿನ ಮಕ್ಕಳು ಪೋಷಕರು ಅನೇಕರ ಪತ್ರಕರ್ತರನ್ನು ಸಂಪರ್ಕಿಸಿ,ನಾಳೆ ಶಾಲೆಗಳಿಗೆ ರಜೆ ಇದ್ಯಾ ಅಥವಾ ತರಗತಿಗಳು ನಡೆಯಲಿದ್ಯಾ ಎನ್ನುವ ಮಾಹಿತಿ ಯನ್ನು ಕೇಳುತ್ತಿದ್ದಾರೆ.ಪತ್ರಕರ್ತರು,ಶಾಲಾ ಮುಖ್ಯಸ್ಥರು, ಪೋಷಕರು ಸಾಗರ ತಾಲೂಕು ಬಿಇಓ ಬಿಂಬಾ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ರೇ ಯಾವುದೇ ಪೋನ್ ಕಾಲ್ ಪಿಕ್ ಮಾಡಿ,ಉತ್ತರಿಸದೇ ಇರುವುದು ಮತ್ತಷ್ಟು ಗೊಂದಲ ದ್ವಂದ್ವಕ್ಕೆ ಸಿಲುಕುವಂತೆ ಮಾಡಿದೆ.

ಸರಿ ಇನ್ನೂ ಮಾಹಿತಿ ನೀಡುವವರು ಯಾರು ಪೋಷಕರು ಶಾಲಾ ಆಡಳಿತ ಮಂಡಳಿಗೆ ನಾಳೆ ಶಾಲೆ ತೆರೆಯೋ ಬಗ್ಗೆ ಮಾಹಿತಿ ನೀಡುವವರು ಯಾರು ಯಾಕೆ ಹೀಗೆ ಪೋನ್ ಪಿಕ್ ಮಾಡುತ್ತಿಲ್ಲ ಎಂಬುದು ಹಲವರ ಪ್ರಶ್ನೆಯಾಗಿದೆ. ಅಲ್ಲದೇ ಸಾಗರ ತಾಲೂಕು ಬಿಇಓ ಬಿಂಬಾ ನಡೆಗೆ ಸಾರ್ವ ಜನಿಕರು ಕಿಡಿಕಾರಿದ್ದಾರೆ.ಈ ಕೂಡಲೇ ನಾಳೆ ಶಾಲೆಗಳು ತೆರೆಯಲಿವೆಯೋ ಅಥವಾ ರಜೆ ಇರಲಿದೆಯೋ ಎನ್ನುವ ಬಗ್ಗೆ ಮೇಲಧಿಕಾರಿಗಳಾದರೂ ಮಾಹಿತಿ ನೀಡುವಂತೆ ಸಾಗರ ತಾಲೂಕು ಜನತೆ ಒತ್ತಾಯಿಸಿದ್ದಾರೆ.

ಇನ್ನೂ ಸಾಗರ ತಾಲೂಕು ಜನತೆ ಸೋಷಿಯಲ್ ಮೀಡಿ ಯಾಗಳಲ್ಲಿ ಬಿಇಓ,ಜಿಲ್ಲಾಧಿಕಾರಿಗಳು,ಉಪ ನಿರ್ದೇಶಕರೇ ಉತ್ತರಿಸಿ ಎಂಬುದಾಗಿ ಪೋಸ್ಟ್ ಮಾಡಿ ಕೇಳುತ್ತಿದ್ದಾರೆ. ಈಗ ಸಾಗರ ತಾಲೂಕಿನಾಧ್ಯಂತ ಬಿಇಓ ಕರೆ ಸ್ವೀಕರಿಸದ ಕಾರಣ,ನಾಳೆ ಶಾಲೆಯ ರಜೆಯ ಗೊಂದಲದಲ್ಲಿದ್ದಾರೆ. ಆ ಬಗ್ಗೆ ಉತ್ತರಿಸುತ್ತಾರಾ ಎನ್ನುವ ಬಗ್ಗೆ ಕಾದು ನೋಡಬೇಕಿದೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರ - 40 ಸಾವಿರ ಲಂಚ ಸ್ವೀಕರಿಸುವಾಗ ಟ್ರ್ಯಾಪ್.....