LIVE TV LocalCrimeNationalInternationalPoliticsEducationTechnologyEntertainmentSportsFeature
Education News

ಅನಾಥ ಮಕ್ಕಳಿಗೆ ನೆರವಾದ ಈರಣ್ಣಾ ಬಾರಕೇರ ಗೆಳೆಯರು

ಮಕ್ಕಳಿಗೆ ನೆರವಾದ ಈರಣ್ಣಾ ಬಾರಕೇರ ಗೆಳೆಯರ ಬಳಗ

ಧಾರವಾಡ-

ಪೊಷಕರನ್ನು ಕಳೆದುಕೊಂಡ ಅನಾಥ ಮಕ್ಕಳಿಗೆ ಧಾರವಾಡದ ಈರಣ್ಣ ಬಾರಕೇರ ಮತ್ತು ತಂಡದವರು ನೆರವಾಗಿದ್ದಾರೆ. ಧಾರವಾಡ ತಾಲ್ಲೂಕಿನ ಹಂಗರಕಿ ಗ್ರಾಮದಲ್ಲಿ ತಂದೆ ಅಥವಾ ತಾಯಿಯನ್ನು ಕಳೆದುಕೊಂಡಿರುವ ಹಲವಾರು ಮಕ್ಕಳ ನೆರವಿಗೆ ಇವರು ಸಹಾಯವನ್ನು ಮಾಡಿದರು.ಪ್ರಮುಖವಾಗಿ ಪೊಷಕರಿಲ್ಲದೇ ಅನಾಥವಾಗಿರುವ ಮಕ್ಕಳನ್ನು ಗುರುತಿಸಿರುವ ಯುವಕರು ಅವರ ಶಿಕ್ಷಣಕ್ಕೆ ಬೇಕಾಗಿರುವ ಕಲಿಕಾ ಸಾಮಗ್ರಿಗಳನ್ನು ನೀಡಿದರು.

ಹಂಗರಕಿ ಗ್ರಾಮ ಸೇರಿದಂತೆ ಹತ್ತಕ್ಕೂ ಹೆಚ್ಚು ಗ್ರಾಮಗಳಿಗೆ ತೆರಳಿದ ಈರಣ್ಣಾ ಬಾರಕೇರ ಮತ್ತು ಗೆಳೆಯರು ಮಕ್ಕಳಿಗೆ ಮುಖ್ಯವಾಗಿ ಬೇಕಾಗಿರುವ ಕಲಿಕಾ ಸಾಮಗ್ರಿಗಳನ್ನು ನೀಡಿದರು. ಸ್ಕೂಲ್ ಬ್ಯಾಗ್ ಆರು ನೋಟ್ ಬುಕ್ ಪೆನ್ಸಿಲ್ ಜ್ಯಾಮೆಟ್ರಿ ಬಾಕ್ಸ್ ಊಟದ ಡಬ್ಬಿ ನೀರಿನ ಬಾಟಲ್ ಎರಡು ಬಿಸ್ಕಿಟ್ ಬಂಡಲ್ ಗಳನ್ನು ಒಳಗೊಂಡ ಕೀಟ್ ನ್ನು ಮಕ್ಕಳಿಗೆ ನೀಡಿದರು.ಈಗಾಗಲೇ 12 ಗ್ರಾಮದ 20 ಕ್ಕೂ ಹೆಚ್ಚು ಮಕ್ಕಳಿಗೆ ನೆರವು ನೀಡಿರುವ ಈರಣ್ಣಾ ಬಾರಕೇರ ಮತ್ತು ಗೆಳೆಯರು ಇನ್ನೂ ಹೆಚ್ಚೆಚ್ಚು ಗ್ರಾಮಗಳಲ್ಲಿನ ಮಕ್ಕಳಿಗೆ ನೆರವು ನೀಡಲು ಯೋಚನೆ ಮಾಡಿಕೊಂಡಿದ್ದಾರೆ.

ಯಾವ ದಾನಿಗಳಿಂದ ನೆರವು ಪಡೆದುಕೊಳ್ಳದೇ ಗೆಳೆಯರೆಲ್ಲರೂ ಸೇರಿಕೊಂಡು ಈ ಮಹತ್ವದ ಕಾರ್ಯಕ್ಕೇ ಈರಣ್ಣಾ ಬಾರಕೇರ ಮತ್ತು ಗೆಳೆಯರು ಮುಂದಾಗಿ ಮತ್ತೊಂದು ಸಾಮಾಜಿಕ ಕಾಳಜಿ ಮೆರೆದಿದ್ದಾರೆ. ಈಗಾಗಲೇ ಕರೋನಾದ ಲಾಕ್ ಡೌನ್ ಸಮಯದಲ್ಲಿ ಹಲವಾರು ಸಾಮಾಜಿಕ ಕಾರ್ಯಗಳೊಂದಿಗೆ ಸಾರ್ವಜನಿಕರಿಗೆ ನೆರವಾಗಿರುವ ಇವರು ಈಗ ಮಕ್ಕಳಿಗೂ ಕೂಡಾ ಸಹಾಯದ ಹಸ್ತ ಚಾಚಿದ್ದಾರೆ. ಮಕ್ಕಳಿಗೆ ಕೀಟ್ ವಿತರಣೆಯೊಂದಿಗೆ ಕರೋನಾ ಮತ್ತು ಆರೋಗ್ಯದ ಕುರಿತು ಜಾಗೃತಿಯನ್ನು ಹೇಳುತ್ತಾ ಮಕ್ಕಳಿಗೆ ಸಂಬಂಧಿಸಿದ ಸರಕಾರದ ಸೌಲಭ್ಯಗಳ ಕುರಿತು ಮಾಹಿತಿ ಪರಿಚಯಿಸಿದ್ರು.ಸಹಾಯದ ಹಸ್ತದ ಕಾರ್ಯಕ್ರಮದಲ್ಲಿ ಈರಣ್ಣಾ ಬಾರಕೇರ ಮಲ್ಲಯ್ಯ ಓಡೆಯರ ಈರಪ್ಪ ಜೀರಗಿವಾಡ ಶಶಿಕಲಾ ಶಿವಣ್ಣಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರ - 40 ಸಾವಿರ ಲಂಚ ಸ್ವೀಕರಿಸುವಾಗ ಟ್ರ್ಯಾಪ್.....