ಬೆಂಗಳೂರು -
ರಾಜ್ಯ ಸರ್ಕಾರದ ಅದರಲ್ಲೂ ವಿಶೇಷವಾಗಿ ಶಿಕ್ಷಣ ಇಲಾಖೆಯ ವಿರುದ್ಧ ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರು ಗೆಲುವು ಸಾಧಿಸಿದ್ದಾರೆ ಹೌದು KAT ಆದೇಶದನ್ವಯ ಗಳಿಕೆ ರಜೆ ಮಂಜೂರು ಮಾಡಲು ಮನವಿಯನ್ನು ಮಾಡಲಾಗಿತ್ತು ಸಧ್ಯ ನ್ಯಾಯಾಲಯ ಮಹತ್ವದ ಆದೇಶವನ್ನು ಮಾಡಿದ್ದು ಇದರಿಂದಾಗಿ ನಾಡಿನ ಶಿಕ್ಷಕ ಬಂಧುಗಳಿಗೆ ಗೆಲುವು ಸಿಕ್ಕಂತಾಗಿದೆ
ಪರಿಶಿಷ್ಟ ಜಾತಿ, ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಕಾರ್ಯ ಹಾಗೂ ಬಿ.ಎಲ್.ಓ. (BLO) ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಶಿಕ್ಷಕರಿಗೆ ಗಳಿಕೆ ರಜೆ (Earned Leave) ಮಂಜೂರು ಮಾಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶಿಫಾರಸ್ಸು ಮಾಡಲು ಕೋರಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (KSPSTA), ತಾಲ್ಲೂಕು ಘಟಕ ತಿಕೋಟಾ ವತಿಯಿಂದ ತಹಶೀಲ್ದಾರರು, ತಿಕೋಟಾ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಗಳು ಹಾಗೂ KSPSTA ತಿಕೋಟಾ ತಾಲ್ಲೂಕು ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....