LIVE TV LocalCrimeNationalInternationalPoliticsEducationTechnologyEntertainmentSportsFeature
Local News

ನಿಂತ ಕಾರ್ಯಾಚರಣೆ ಬೆಳಿಗ್ಗೆ ಮತ್ತೆ ಆರಂಭವಾಗಲಿರುವ ಶೋಧ ಕಾರ್ಯ

ಧಾರವಾಡ -

ಪೊಟೊ ಶೂಟ್ ಮಾಡಲು ಹೋಗಿ ನವಲಗುಂದದ ಕಿರೇಸೂರ ಕಾಲುವೆಯಲ್ಲಿ ನಾಪತ್ತೆಯಾಗಿರುವ ಮೂವರ ಯುವಕರು ಇನ್ನೂ ಪತ್ತೆಯಾಗಿಲ್ಲ. ಒಂಬತ್ತು ಘಂಟೆಗಳ ನಿರಂತರ ಕಾರ್ಯಾಚರಣೆ ನಂತರವೂ ಕಾಲುವೆಯಲ್ಲಿ ಹೋಗಿರುವ ಮೂವರು ಯುವಕರನ್ನು ಹುಡುಕಾಡಿ ಹುಡುಕಾಡಿ ಹುಡುಕಾಡಿ ಕಾರ್ಯಾಚರಣೆ ನಿಲ್ಲಿಸಲಾಯಿತು.

ಕಾಲುವೆಗೆ ಇಂದೇ 200 ಕ್ಯೂ ಸೆಕ್ಸ್‌ ನೀರನ್ನು ಬಿಡಲಾಗಿದೆ.ಹೀಗಾಗಿ ಸಧ್ಯ ಕಾಲುವೆ ತುಂಬಿ ಹರಿಯುತ್ತಿದೆ‌. ಇನ್ನೂ ಕಾಲುವೆಯ ಮೇಲೆ ಪೊಟೊ ಶೂಟ್ ಮಾಡುವಾಗ ಏಕಾಏಕಿಯಾಗಿ ಜೇನುನೊಣಗಳು ದಾಳಿ ಮಾಡಿವೆ ಇದರಿಂದ ಭಯಗೊಂಡ ಐವರು ಪಾರಾಗಲು ನೀರಿನಲ್ಲಿ ಜಿಗಿದಿದ್ದಾರೆ.

ಕೊನೆಗೆ ನೀರಿನಲ್ಲಿ ಬಿದ್ದ ಐವರನ್ನು ನೋಡಿದ ಕುರಿಗಾಹಿ ಒರ್ವ ಯುವತಿ ಹಾಗೂ ಒರ್ವ ಯುವಕನನ್ನು ರಕ್ಷಣೆ ಮಾಡಿದ್ದಾರೆ.

ಇನ್ನೂ ನೀರಿನಲ್ಲಿ ಹೋಗಿರುವ ಇನ್ನೂ ಮೂವರು ಪತ್ತೆಯಾಗಿಲ್ಲ. ಹೀಗಾಗಿ ಸಂಜೆಯಿಂದಲೂ ನಿರಂತರವಾಗಿ ಕಾರ್ಯಾಚರಣೆಯನ್ನು ಮಾಡಲಾಗುತ್ತಿತ್ತು.ಯಾವುದೇ ಫಲಿತಾಂಶ ಸಿಗದ ಹಿನ್ನೆಲೆಯಲ್ಲಿ ಸಧ್ಯ ಕಾರ್ಯಾಚರಣೆ ನಿಲ್ಲಿಸಲಾಗಿದೆ.

ಸಧ್ಯ ಮೂರು ಹಂತದಲ್ಲಿ ಶೋಧವನ್ನು ಮಾಡಿ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಮತ್ತು ರಾತ್ರಿತಾದ ಕಾರಣಕ್ಕಾಗಿ ನಿಲ್ಲಿಸಲಾಯಿತು.

ಅಗ್ನಿಶಾಮಕ ದಳದ ಟೀಮ್ ಮತ್ತೆ ಬೆಳಿಗ್ಗೆ ಆಪರೇಶನ್ ಬೆಳಿಗ್ಗೆ ಆರಂಭ ಮಾಡಲಿದೆ.‌ ನಿರಂತರವಾಗಿ ಒಂಬತ್ತು ಘಂಟೆಗಳ ಕಾಲ ಹುಡುಕಾಡಿದರು ಮೂವರ ಯುವಕರ ಸುಳಿವು ಸಿಗಲಿಲ್ಲ ಹೀಗಾಗಿ ಸಧ್ಯ ಕಾರ್ಯಾಚರಣೆ ನಿಲ್ಲಿಸಿ ಬೆಳಿಗ್ಗೆ ಆರಂಭಿಸೊದಾಗಿ ಹುಬ್ಬಳ್ಳಿಯ ಗ್ರಾಮೀಣ ಇನ್ಸ್ಪೆಕ್ಟರ್ ರಮೇಶ್ ಗೋಕಾಕ ಹೇಳಿದರು. ನಾಪತ್ತೆಯಾಗಿದ್ದವರು ಹುಬ್ಬಳ್ಳಿಯ ರಾಮನಗರ ನಿವಾಸಿಗಳಾಗಿದ್ದು ಮಾಜಿ ಮಹಾನಗರ ಪಾಲಿಕೆಯ ಸದಸ್ಯೆ ಸುವರ್ಣಾ ಕಲ್ಲಗುಂಟ್ಲಾ ಮತ್ತು ಭಂಡಾರಿ ಕುಟುಂಬದವರಾಗಿದ್ದಾರೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರ - 40 ಸಾವಿರ ಲಂಚ ಸ್ವೀಕರಿಸುವಾಗ ಟ್ರ್ಯಾಪ್.....