LIVE TV LocalCrimeNationalInternationalPoliticsEducationTechnologyEntertainmentSportsFeature
State News

ಶಿಕ್ಷಕರನ್ನು ಕೇವಲ ಮಾತಿನಲ್ಲೇ ನಂಬಿಸುತ್ತಿರುವ ಶಿಕ್ಷಕರ ಸಂಘ ಪಾಠ ಕಲಿಸಲು ಮುಂದಾದ ಸಿಡಿದೆದ್ದ ಶಿಕ್ಷಕರು.....

ಬೆಂಗಳೂರು -

ಆತ್ಮೀಯ ರಾಜ್ಯದ ಎಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಆದ್ಯ ಗಮನಕ್ಕೆ - ಕೇವಲ ಮಾತಿನಲ್ಲೇ ನಂಬಿಸುತ್ತಿರುವ ಶಿಕ್ಷಕರ ಸಂಘ.

ಮತದಾರ ಪಟ್ಟಿ ತಯಾರಿಸುವ ಕೆಲಸದಿಂದ ಶಿಕ್ಷಕರನ್ನು ಮುಕ್ತಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಇದ್ದರೂ ಕೂಡ ಸಾಮಾನ್ಯ ಶಿಕ್ಷಕನಿಗೆ ಕಾರಣ ಕೇಳುವ ನೋಟಿಸ್ ಜಾರಿ ಮಾಡಲಾಗಿದೆ.ಪ್ರತಿಯೊಬ್ಬ ಶಿಕ್ಷಕರಿಗೆ ಆಗುವ ಅನ್ಯಾಯವನ್ನು ವಿರೋಧಿಸಬೇಕಾದ ಶಿಕ್ಷಕರ ಸಂಘ ಎಲ್ಲಿದೆ?.

ಅಧಿಕಾರ ಅನುಭವಿಸಲು ಶಿಕ್ಷಕರಿಂದ ವಂತಿಗೆ ಶುಲ್ಕದ ಹಣ,ಅಧಿಕಾರ ಬೇಕು.ಆದರೆ ಕಣ್ಣಿಗೆ ಕಾಣದೆ ಇಂಥ ಏಷ್ಟೋ ಶಿಕ್ಷಕರಿಗೆ ಅನ್ಯಾಯ ಆಗುತ್ತಿದ್ದರೂ ಮೌನವಹಿ ಸಿರುವದರ ಹಿಂದಿನ ಕಾರಣ ಏನು?.

2008 ರಿಂದಲೂ ನೀವೇ ಅಧಿಕಾರದಲ್ಲಿದ್ದು ನೀವೇ 2016 ರಂದು ಜಾರಿಗೆ ಬಂದ ಸಿ ಮತ್ತು ಆರ್ ನಿಯಮ ಕಡತಕ್ಕೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಒಪ್ಪಿಗೆ ಸಹಿ ಮಾಡಿದ್ದು ನೀವೇ ಇವಾಗ ಹೋರಾಟ ಕೈಗೊಳ್ಳುವ ತರ ಮೇಲ್ನೋಟಕ್ಕೆ ನಂಬಿಸುತ್ತಿದ್ದಿರಿ ಅಂತ ಸುಮಾರು 80000 ಪದವೀಧರ ಶಿಕ್ಷಕರಿಗೆ ಶಿಕ್ಷಕರಿಗೆ ತಿಳಿಯದೆ ಇರುತ್ತಾ?

ರಾಜ್ಯ ಸಂಘದ ನಿರ್ದೇಶನದ ಮೇರೆಗೆ ನಾವೆಲ್ಲ ನಿಷ್ಠಾ ತರಬೇತಿ ಬಹಿಷ್ಕಾರ ಮಾಡಿದೆವು,ಕಪ್ಪು ಬಟ್ಟೆ ಧರಿಸಿ ಕರ್ತವ್ಯ ನೆರವೇರಿಸಿದೆವು.ಇದರಿಂದ ಯಾವುದೇ ಪರಿಣಾಮ ಬೀರಲಿಲ್ಲ.ತರಗತಿ ಬಹಿಷ್ಕಾರ ಮಾಡಿದರೆ ಈಗಾಗಲೇ ಕೋವಿಡ್ ಎರಡು ವರ್ಷ ಮಕ್ಕಳ ಶಿಕ್ಷಣ ಹಾಳಾಗಿದೆ.ಇವಾಗ ತರಗತಿ ಬಹಿಷ್ಕಾರ ಮಾಡಿದರೆ ನಾವು ಪಾಲಕರ ಅವಕೃಪೆಗೆ ಒಳಗಾಗುತ್ತೇವೆ ಅಂತ ಹೇಳುತ್ತಾ ಇರುವ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಹಾನ್ ನಾಯಕರು 2 ವರ್ಷಗಳ ಹಿಂದೆ ಕೋರೋಣ ಇರಲಿಲ್ಲ ಅಲ್ವಾ?. ಆವಾಗ ನೀವು ತರಗತಿ ಬಹಿಷ್ಕಾರ ಯಾಕೆ ಮಾಡಲಿಲ್ಲ?.

NPS ಜಾರಿಗೆ ಬಂದು 16 ವರ್ಷಗಳೂ ಮುಗೀತಾ ಬಂದವು.ಕೇವಲ ಚುನಾವಣೆ ಸಮಯದಲ್ಲಿ ಬಂದು ಇದನ್ನು ರದ್ದು ಮಾಡ್ತೀವಿ ಅಂತ ಹೇಳಿ ಅಧಿಕಾರ ಸಿಕ್ಕ ಮೇಲೆ ಅದರ ಕುರಿತು ಒಂದು ಮಾತು ಮಾತಾಡಲ್ಲ ಅಂತ ಪದಾಧಿಕಾರಿಗಳು ನಮಗೆ ಬೇಕಾ?.2006 ರಿಂದ ಹಿಡಿದು NPS ರದ್ದತಿಗೆ ದೊಡ್ಡ ಮಟ್ಟದ ಹೋರಾಟ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಕೈಗೊಂಡಿರುವ ಉದಾಹರಣೆ ಇಲ್ಲ ಅಲ್ಲವೇ? ಇದನ್ನೆಲ್ಲ ಅರ್ಥ ಮಾಡಿಕೊಂಡು ಮುಂದಿನ ಬರುವ ದಿನಗಳಲ್ಲಿ ಒಳ್ಳೆಯ ಹೋರಾಟ ಮಾಡುವ ಪ್ರತಿನಿ ಧಿಗಳನ್ನು ಆಯ್ಕೇಮಾಡುವ ನಮ್ಮೆಲ್ಲ ಶಿಕ್ಷಕರ ಜವಾಬ್ದಾರಿ ನಿಮ್ಮದು ಅಲ್ಲವೇ?

ಈ ಒಂದು ಲೇಖನವನ್ನು ಯಥಾವತ್ತಾಗಿ ಪ್ರಕಟಿಸಲಾಗಿದೆ

ಜೈಶಿಕ್ಷಕ,ಜೈ KSPSTA INDI

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರ - 40 ಸಾವಿರ ಲಂಚ ಸ್ವೀಕರಿಸುವಾಗ ಟ್ರ್ಯಾಪ್.....