ರಾಯಚೂರು -
ರಾಜ್ಯದಲ್ಲಿ ಇಂದು ಮತ್ತೊಂದು ಹಂತದಲ್ಲಿ ಶಾಲೆಗಳು ಆರಂಭವಾಗಿದ್ದು ರಾಜ್ಯದ ತುಂಬೆಲ್ಲಾ ಸಡಗರ ಸಂಭ್ರಮ ದಿಂದ ವಿದ್ಯಾರ್ಥಿಗಳನ್ನು ವಿಶೇಷವಾಗಿ ಬರಮಾಡಿಕೊಂಡು ಶಾಲೆಗಳಲ್ಲಿ ಮಕ್ಕಳ ಕಲರವ ಕಂಡು ಬರುತ್ತಿದ್ದರೆ ಇನ್ನೂ ಇತ್ತ ಶಾಲಾ ಆರಂಭ ದಿನವೇ ಶಿಕ್ಷಕರಿಗಾಗಿ ವಿದ್ಯಾರ್ಥಿಗಳ ಪ್ರತಿಭಟನೆ ಮಾಡುತ್ತಿದ್ದಾರೆ.
ಹೌದು ರಾಯಚೂರಿನಲ್ಲಿ ಈ ಒಂದು ಚಿತ್ರಣ ಕಂಡು ಬಂದಿತು.ಶಾಲೆಗೆ ಶಿಕ್ಷಕರನ್ನು ನೀಡುವಂತೆ ವಿದ್ಯಾರ್ಥಿಗಳು ಶಾಲೆಯ ಮುಂದೆ ಹಾಗೂ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ.
ರಾಯಚೂರಿನ ಪೊತಗಲ್ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇಡೀ ಶಾಲೆಗೆ ಒಬ್ಬರೇ ಶಿಕ್ಷಕರಿದ್ದಾರಂತೆ ಹೀಗಾಗಿ ಈ ಕುರಿತಂತೆ ಗ್ರಾಮ ಸ್ಥರು ಇಲಾಖೆಗೆ ಅಧಿಕಾರಿ ಗಳಿಗೆ ಗಮನಕ್ಕೆ ತಗೆದುಕೊಂಡು ಬಂದರೂ ಕೂಡಾ ಈವರೆಗೆ ಮಾತ್ರ ಸಮಸ್ಯೆಯನ್ನು ಪರಿಹಾರ ಮಾಡಿಲ್ಲ ಹೀಗಾಗಿ ಆಕ್ರೋಶಗೊಂಡ ಪೋಷಕರು ಮಕ್ಕಳೊಂದಿಗೆ ಪ್ರತಿಭಟನೆ ಮಾಡುತ್ತಿದ್ದಾರೆ.
https://youtu.be/kKjs9SV2_bk
ಒಬ್ಬ ಶಿಕ್ಷಕಿಯಿದ್ದು ಅವರನ್ನ ಕೂಡ ಬೇರೆಡೆಗೆ ಎರವಲು ಸೇವೆಗೆ ಕಳುಹಿಸಲಾಗಿದೆ ಶಿಕ್ಷಕರಿಗಾಗಿ 49 ವಿದ್ಯಾರ್ಥಿಗಳು ಧರಣಿಯನ್ನು ಮಾಡುತ್ತಿದ್ದಾರೆ.ಕೂಡಲೇ ಎರವಲು ಹೋಗಿ ರುವ ಶಿಕ್ಷಕಿಯನ್ನ ಮರಳಿ ಪೊತಗಲ್ ಶಾಲೆಗೆ ನಿಯೋಜನೆ ಮಾಡುವಂತೆ ಪಟ್ಟು ಹಿಡಿದ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದಾರೆ.
ಮಕ್ಕಳೊಂದಿಗೆ ಅವರ ಪೋಷಕರು ಗ್ರಾಮಸ್ಥರು ಕೂಡಾ ಸಾಥ್ ನೀಡಿದ್ದಾರೆ.ಹೀಗಾಗಿ ಶಾಲಾ ಆರಂಭದ ದಿನವೇ ಶಾಲೆಯಲ್ಲಿ ಪುಸ್ತಕವನ್ನು ಹಿಡಿದು ಕಲಿಯಬೇಕಾದ ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ಬೀದಿಗಿಳಿದಿದ್ದು ದುರಂತದ ವಿಚಾರವಾಗಿದೆ.


