LIVE TV LocalCrimeNationalInternationalPoliticsEducationTechnologyEntertainmentSportsFeature
Local News

DNA ವರದಿ ಬಂತು - ಪರಿಹಾರ ಯಾವಾಗ - ಕಣ್ಣಿರಲ್ಲಿ ಕೈತೊಳೆಯುತ್ತಿರುವ ಕುಟುಂಬದ ಕಥೆ ಸ್ವಲ್ಪ ನೋಡ್ರಿ ಜನಪ್ರತಿನಿಧಿಗಳೇ , ಡಿಸಿ ಸಾಹೇಬ್ರೆ

ಚಿಕ್ಕೋಡಿ -

ಕೃಷ್ಣಾ ಪ್ರವಾಹಕ್ಕೆ ಸಿಲುಕಿ ಮಗನನ್ನು ಕಳೆದುಕೊಂಡಿದ್ದ ತಾಯಿಗೆ ಒಂದುವರೆ ವರ್ಷದ ಬಳಿಕ ಮಗನ ಸಾವಿನ ಪರಿಹಾರ ಸಿಗುವ ಮುನ್ಸೂಚನೆ ಸಿಕ್ಕಿದೆ.ಪರಿಹಾರ ಸಿಗೋಕೆ ಅಡ್ಡಿಯಾಗಿದ್ದ ಡಿ ಎನ್ ಎ ವರದಿ ಈಗ ಬಂದಿದ್ದು ಮಗನ ಕಳೆದುಕೊಂಡ ತಾಯಿಗೆ ಈಗ ಪರಿಹಾರದ ಆಶಾಭಾವ ಮೂಡಿದೆ.

ಹೌದು ಕರುಳ ಬಳ್ಳಿ ನೀರಲ್ಲಿ ಕೊಚ್ಚಿ ಹೋಗಿ ವರ್ಷವಾದ್ರೂ ಸಹ ಸಿಕ್ಕಿರಲಿಲ್ಲ ತಾಯಿಗೆ ಪರಿಹಾರ ಧನ ಇಲ್ಲದೇ ,ಮಗನೂ ಇಲ್ಲದೆ ಪರಿಹಾರವೂ ಇಲ್ಲದೆ ಒಂದುವರೆ ವರ್ಷ ನೋವಿನಲ್ಲೆ ಕೈ ತೊಳೆಯುತ್ತಿರುವ ತಾಯಿ !! 2019 ರ ಮಹಾ ಪ್ರವಾಹಕ್ಕೆ ಸಿಲುಕಿ ಕೃಷ್ಣಾ ನದಿ ತೀರದ ಗ್ರಾಮಗಳು ಅಕ್ಷರಶಃ ನಲುಗಿ ಹೋಗಿದ್ವು. ಅದರಲ್ಲೂ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೀರ್ಥ ಗ್ರಾಮ ಸಂಪೂರ್ಣ ಸ್ಮಶಾನದಂತಾಗಿ ಹೋಗಿತ್ತು.

ನದಿಯ ನೀರು ಗ್ರಾಮಕ್ಕೆ ನುಗ್ಗಿದಾಗ ಜೀವ ಕೈಯ್ಯಲ್ಲಿ ಹಿಡಿದು ನದಿ ದಾಟುವ ಸ್ಥಿತಿ ಏರ್ಪಟ್ಟಿದ್ದು ಬಹಳಷ್ಟು ಜನರು ಮನೆಗಳನ್ನು ಕಳೆದುಕೊಂಡು ಬೀದಿಪಾಲಾಗಿದ್ದರು. ಇನ್ನೂ ಇದಕ್ಕೆ ನಲುಗಿದವರಲ್ಲಿ
ಹೀಗೆ ಕೈಲಿ ಮಗನ ಫೋಟೊ ಹಿಡ್ಕೊಂಡು ಅಳ್ತಾ ಗೋಳಾಡ್ತಿರೋ ಈ ತಾಯಿಯೇ ಸಾಕ್ಷಿ.

ಹೆಸರು ಲಲಿತಾ ಅಂತ. ೨೦೧೯ರ ಕೃಷ್ಣಾ ನದಿಯ ಪ್ರವಾಹದಲ್ಲಿ ಈಕೆಯ ಮಗ ಬಸವರಾಜ್ ಕಾಂಬಳೆ ನೋಡ ನೋಡ್ತಿದ್ದಂತೆ ಹರಿಯೋ ನದಿಯಲ್ಲಿ ಕೊಚ್ಚಿ ಹೋಗಿದ್ದ ಬಳಿಕ ಒಂದು ತಿಂಗಳ ಬಳಿಕ ಕಬ್ಬಿನ ಗದ್ದೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಗ ಬಸವರಾಜನ ಶವ ಪತ್ತೆಯಾಗಿತ್ತು.

ಶಾಲಾ ಬ್ಯಾಗ,ಪಠ್ಯಪುಸ್ತಕ, ಬಸ್ ಪಾಸ್ ಎಲ್ಲ ಸಿಕ್ಕರೂ ಕೂಡ ಶವ ಮಾತ್ರ ಗುರುತು ಹಿಡಿಯುವ ಸ್ಥಿತಿಯಲ್ಲಿ ಇರಲಿಲ್ಲ.
ಈ ಶವ ನನ್ನ ಮಗಂದೆ ಅಂತ ತಾಯಿ ಲಲಿತಾ ಎಷ್ಟು ಹೇಳಿದ್ರು ಕೇಳದೆ ಅಧಿಕಾರಿಗಳು ಡಿ ಎನ್ ಎ ಪರೀಕ್ಷೆಗೆ ಮುಂದಾಗಿದ್ರು.ಡಿ ಎನ್ ಎ ವರದಿಗೆ ಕಳುಹಿಸಿ ಅಧಿಕಾರಿಗಳೂ ಸಹ ಸುಮ್ಮನಾಗಿದ್ರು.

ಆದರೆ ಮಗನನ್ನು ಕಳೆದುಕೊಂಡ ತಾಯಿಯ ಪರಿಸ್ಥಿತಿ ಮಾತ್ರ ಶೋಚನೀಯವಾಗಿತ್ತು.ಇತ್ತ ಪರಿಹಾರವೂ ಸಿಗದೆ ಮಗನೂ ಇಲ್ಲದೆ ತಾಯಿ ಕಂಗಾಲಾಗಿದ್ದಳು.ಇನ್ನು ಕಳೆದ ಒಂದು ವರ್ಷದಿಂದಲೂ ಸಹ ಇದೆ ಡಿ ಎನ್ ಎ ವರದಿಗೋಸ್ಕರವೇ ಪರಿಹಾರ ನೀಡೋದು ತಡವಾಗಿದೆ ಅಂತ ಅಧಿಕಾರಿಗಳು ಹೇಳ್ತಾ ಬರ್ತಿದ್ದರು‌. ಈಗ ಮೊನ್ನೆಯಷ್ಟೆ ವರದಿ ಬಂದಿದ್ದು ಮೃತ ಬಸವರಾಜ್ ಡಿ ಎನ್ ಎ ಅವರ ತಾಯಿಯ ಡಿ ಎನ್ ಎ ಜತೆ ಹೋಲಿಕೆಯಾಗಿದೆ.

ಶ್ರೀಘ್ರವೇ ಪೊಲೀಸ್ ಇಲಾಖೆ ಕಂದಾಯ ಇಲಾಖೆಗೆ ಈ ಬಗ್ಗೆ ಸಮಗ್ರ ವರದಿ ಸಲ್ಲಿಸಲಿದೆ.ವರದಿ ಸಲ್ಲಿಕೆಯಾದ ಬೆನ್ನಲ್ಲೆ ಮುಂದಿನ ಪ್ರಕ್ರಿಯೆಗಳ ಬಗ್ಗೆ ಕಂದಾಯ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದು ಅಥಣಿ ಪೊಲೀಸರು ತಿಳಿಸಿದ್ದಾರೆ.

ಒಟ್ಟಿನಲ್ಲಿ ಇಲ್ಲಿಯವರೆಗೂ ಪರಿಹಾರ ನೀಡೋಕೆ ಡಿ ಎನ್ ಎ ಅಡ್ಡಿಯಾಗಿದೆ ಎಂದು ಹೇಳುತ್ತಿದ್ದ ಅಧಿಕಾರಿಗಳ ಕೈಗೆ ಈಗ ಡಿ ಎನ್ ಎ ವರದಿ ತಲುಪಿದ್ದು ಕೃಷ್ಣಾ ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿರೋದು ಲಲಿತಾರ ಮಗ ಬಸವರಾಜ್ ಅನ್ನೋದು ಕನ್ಪರ್ಮ ಆಗಿದೆ.

ಹೀಗಾಗಿ ಇನ್ನಾದರೂ ಅಧಿಕಾರಿಗಳು ಮೃತ ಬಸವರಾಜ್ ಕುಟುಂಬಕ್ಕೆ ಸರ್ಕಾರದಿಂದ ಬರಬೇಕಿದ್ದ ಪರಿಹಾರ ಒದಗಿಸಲಿ ಎನ್ನುವುದು ಸಂತ್ರಸ್ಥರ ಆಗ್ರಹವಾಗಿದೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರ - 40 ಸಾವಿರ ಲಂಚ ಸ್ವೀಕರಿಸುವಾಗ ಟ್ರ್ಯಾಪ್.....