This is the title of the web page
This is the title of the web page

Live Stream

[ytplayer id=’1198′]

October 2025
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಹೆಚ್ಚುವರಿ ಭತ್ಯೆ ಮರುಪಾವತಿಗೆ ಶಿಕ್ಷಕರಿಗೆ ನೋಟಿಸ್ – 2019 ರಿಂದ 2023ರ ರಜಾ ಅವಧಿಯ ಭತ್ಯೆ ಪಾವತಿ ಮರಳಿ ನೀಡುವಂತೆ ಆದೇಶ…..

ಹೆಚ್ಚುವರಿ ಭತ್ಯೆ ಮರುಪಾವತಿಗೆ ಶಿಕ್ಷಕರಿಗೆ ನೋಟಿಸ್ – 2019 ರಿಂದ 2023ರ ರಜಾ ಅವಧಿಯ ಭತ್ಯೆ ಪಾವತಿ ಮರಳಿ ನೀಡುವಂತೆ ಆದೇಶ…..
WhatsApp Group Join Now
Telegram Group Join Now

ಬೆಂಗಳೂರು

ರಜಾ ಅವಧಿಯಲ್ಲಿ ಪಾವತಿಯಾಗಿರುವ ಅಂಗವಿಕಲರ ಸಂಚಾರಿ ಭತ್ಯೆಯನ್ನು ಸರ್ಕಾರಕ್ಕೆ ವಾಪಸ್ ಜಮಾ ಮಾಡುವಂತೆ ಶಾಲಾ ಶಿಕ್ಷಣ ಇಲಾಖೆಯು ಕ್ಷೇತ್ರ ಶಿಕ್ಷಣಾ ಧಿಕಾರಿ ಮೂಲಕ ಎಲ್ಲ ಅಂಗವಿಕಲ ಶಿಕ್ಷಕರಿಗೆ ನೋಟಿಸ್ ಜಾರಿಗೊಳಿಸಿದೆ. ಒಮ್ಮೆಲೇ ದೊಡ್ಡ ಮೊತ್ತ ಪಾವತಿಸಬೇ ಕಾಗಿರುವ ಕಾರಣ ಶಿಕ್ಷಕರು ಚಿಂತಿತರಾಗಿದ್ದಾರೆ. ಅಂಗ ವಿಕಲರ ಸಂಚಾರಿ ಭತ್ಯೆ ಪಡೆಯುತ್ತಿರುವ ಶಿಕ್ಷಕರಿಗೆ 2019ರಿಂದ 2023ರ ನಡುವಿನ ರಜಾ ಅವಧಿಯಲ್ಲಿ ಭತ್ಯೆ ಪಾವತಿಸಲಾಗಿದೆ.

ಅದನ್ನು ಮರುಪಾವತಿಸುವಂತೆ ಸರ್ಕಾರದ ಆರ್ಥಿಕ ಇಲಾಖೆಯ ಅಧೀನ ಕಾರ್ಯದರ್ಶಿ ಪತ್ರ ಬರೆದಿದ್ದಾರೆ. ಅದರಂತೆ ಹೆಚ್ಚುವರಿಯಾಗಿ ನೀಡಿರುವ ಭತ್ಯೆಯನ್ನು ಮರು ಪಾವತಿ ಮಾಡಬೇಕು ಎಂದು ಅಂಗವಿಕಲ ಶಿಕ್ಷಕ ರಿಗೆ ಜಾರಿಯಾಗಿರುವ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಇದೇ ನವೆಂಬರ್ ತಿಂಗಳ ಕೊನೆಯ ವಾರದಲ್ಲಿ ಬೇರೆ ಬೇರೆ ಜಿಲ್ಲೆಗಳಲ್ಲಿ ಬೇರೆ ಬೇರೆ ದಿನಾಂಕದಂದು ಈ ನೋಟಿಸ್ ಜಾರಿಯಾಗಿದೆ.

‘ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ 2016ರ ಸೆಕ್ಷನ್ 21ರಲ್ಲಿ ಅಂಗವಿಕಲ ನೌಕರರಿಗೆ ಸಮಾನ ಅವಕಾಶ ಕಲ್ಪಿಸಬೇಕು ಎಂದು ಹೇಳಲಾಗಿದೆ. ನಿವೃತ್ತಿ ಅಂಚಿನಲ್ಲಿರುವ ಅಥವಾ ನಿವೃತ್ತಿಯಾಗಿರುವ ನೌಕರರಿಗೆ ಕೊಟ್ಟಿರುವ ಭತ್ಯೆ ವಾಪಸ್ ಪಡೆಯುವುದು ಅಪರಾಧ ಎಂಬ ಕೋರ್ಟ್‌ ಆದೇಶ ಇದೆ.ಹೀಗಾಗಿ, ಹೆಚ್ಚುವರಿ ಯಾಗಿ ನೀಡಿರುವ ಭತ್ಯೆಯನ್ನು ಮರು ಪಾವತಿ ಮಾಡಿಸಿ ಕೊಳ್ಳುವ ಬದಲಾಗಿ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮನ್ನಾ ಮಾಡಬೇಕುವಎಂದು ಪುತ್ತೂರಿನ ಶಿಕ್ಷಕ ಶಿವಪ್ಪ ರಾಥೋಡ್ ಒತ್ತಾಯಿಸಿದರು.

ಬೆಂಗಳೂರು ಮತ್ತು ಮೈಸೂರು ವಿಭಾಗಗಳಲ್ಲಿ ಈಗಾಗಲೇ ಶಿಕ್ಷಕರಿಗೆ ನೋಟಿಸ್ ಜಾರಿಗೊಳಿಸಿ, ಬಲ ವಂತದಿಂದ ಹಣ ಮರುಪಾವತಿ ಮಾಡಿಸಿಕೊಳ್ಳಲಾಗು ತ್ತಿದೆ. ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಈಗಾಗಲೇ ಕೆಲವು ಶಿಕ್ಷಕರು ಹಣ ಮರು ಪಾವತಿ ಮಾಡಿದ್ದಾರೆ. ಚಿತ್ರದುರ್ಗ ತಾಲ್ಲೂಕಿನಲ್ಲಿ ಶಿಕ್ಷಣ ಇಲಾಖೆಯು 66 ಜನರನ್ನು ಗುರುತಿಸಿದ್ದು ಅವರಿಂದ ಒಟ್ಟು ₹10.45 ಲಕ್ಷ ಮೊತ್ತ ಮರುಪಾವತಿಗೆ ನೋಟಿಸ್ ಜಾರಿಗೊಳಿಸಿದೆ.

ಶಿಕ್ಷಕರು ತಾವು ಪಡೆದಿರುವ ಭತ್ಯೆ ಆಧರಿಸಿ, ₹10 ಸಾವಿರದಿಂದ ₹25ಸಾವಿರದವರೆಗೆ ಹಣ ಮರುಪಾವತಿ ಸಬೇಕಾಗಿದೆ. ಒಮ್ಮೆಲೇ ದೊಡ್ಡ ಮೊತ್ತ ಪಾವತಿಸುವುದು ಹೊರೆಯಾಗುತ್ತಿದೆ. ಸಮಸ್ಯೆ ಸೃಷ್ಟಿ ಮಾಡಿದವರೇ ಪರಿಹಾರದ ಬಗ್ಗೆ ಯೋಚಿಸಬೇಕು ಎಂದು ಚಿತ್ರದುರ್ಗದ ಅಂಗವಿಕಲ ಶಿಕ್ಷಕರೊಬ್ಬರು ಆಗ್ರಹಿಸಿದರು.ಸಾಂದರ್ಭಿಕ ರಜೆ ಹೊರತುಪಡಿಸಿ ಉಳಿದ ರಜಾ ಅವಧಿಯಲ್ಲಿ ಅಂಗ ವಿಕಲ ಭತ್ಯೆ ನೀಡಲು ಆರ್ಥಿಕ ಇಲಾಖೆಯ 14 ಫೆಬ್ರುವರಿ 1979ರ ಆದೇಶದ ಅನ್ವಯ ಅವಕಾಶವಿಲ್ಲ. ಹೆಚ್ಚುವರಿ ಭತ್ಯೆ ಪಡೆದಿರುವ ಕೆಲ ಶಿಕ್ಷಕರಿಗೆ ನೋಟಿಸ್ ನೀಡಲಾಗಿದೆ.

ಆದರೆ ಯಾವುದೇ ಶಿಕ್ಷಕರಿಂದ ಇನ್ನೂ ಹಣ ಮರು ಪಾವತಿ ಮಾಡಿಸಿಕೊಂಡಿಲ್ಲ. ಶಿಕ್ಷಣ ಇಲಾಖೆಯ ಆಯುಕ್ತರ ನಿರ್ದೇಶನದಂತೆ’ಸಾಂದರ್ಭಿಕ ರಜೆ ಹೊರತುಪಡಿಸಿ ಉಳಿದ ರಜಾ ಅವಧಿಯಲ್ಲಿ ಅಂಗ ವಿಕಲ ಭತ್ಯೆ ನೀಡಲು ಆರ್ಥಿಕ ಇಲಾಖೆಯ 14 ಫೆಬ್ರುವರಿ 1979ರ ಆದೇಶದ ಅನ್ವಯ ಅವಕಾಶವಿಲ್ಲ. ಹೆಚ್ಚುವರಿ ಭತ್ಯೆ ಪಡೆದಿರುವ ಕೆಲ ಶಿಕ್ಷಕರಿಗೆ ನೋಟಿಸ್ ನೀಡಲಾಗಿದೆ. ಆದರೆ ಯಾವುದೇ ಶಿಕ್ಷಕರಿಂದ ಇನ್ನೂ ಹಣ ಮರುಪಾವತಿ ಮಾಡಿಸಿಕೊಂಡಿಲ್ಲ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..


Google News

 

 

WhatsApp Group Join Now
Telegram Group Join Now
Suddi Sante Desk