ಬೆಂಗಳೂರು –
ಸಧ್ಯದ ಕೋವಿಡ್ -19 ಕಾರಣದಿಂದಾಗಿ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಹೊರಡಿಸಿ ಪ್ರವಾಸ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಆಯೋಜನೆ ಮಾಡದಂತೆ ಶಾಲೆಗಳಿಗೆ ಆದೇಶ ನೀಡಿದ್ದರೂ ಕೂಡಾ ಪ್ರವಾಸಕ್ಕೆ ತೆರಳಿದ್ದಾರೆ ಬೆಂಗಳೂರು ನಗರದ ಶಾಲೆಯೊಂದರ ಟೀಮ್.ಹೀಗಾಗಿ ಈ ಒಂದು ಶಾಲೆಗೆ ಈಗ ತುರ್ತು ನೋಟೀಸ್ ನೀಡಲಾಗಿದೆ ಹೌದು 122 ವಿದ್ಯಾರ್ಥಿಗಳನ್ನು 4 ದಿನಗಳ ಕಾಲ ಹೈದರಾ ಬಾದ್ ಪ್ರವಾಸಕ್ಕೆ ಯಕರೆದುಕೊಂಡು ಹೋಗಿದ್ದಾರೆ ಇದನ್ನು ಗಂಭೀರವಾಗಿ ಪರಿಗಣಿಸಿದ BEO ಅವರು ಈಗ ಆ ಶಾಲೆಗೆ ಕಾರಣ ಕೇಳಿ ನೋಟೀಸ್ ನೀಡಿದ್ದಾರೆ.
ಇನ್ನೂ ಪ್ರಮುಖವಾಗಿ ಮಕ್ಕಳ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಬಿಇಓ ಅವರು ಹೇಳಿದ್ದು ಬೆಂಗಳೂರು ಉತ್ತರ ಬ್ಲಾಕ್ ವಲಯದ ಈ ಒಂದು ಖಾಸಗಿ ಶಾಲೆಯ ಮೇಲೆ ಕಾನೂನು ಕ್ರಮ ಕೈಗೊಳ್ಳಲು ನಿರ್ಧಾರವನ್ನು ಮಾಡಿದ್ದು ಶಿಕ್ಷಣಾಧಿಕಾರಿ ಟಿ ಎನ್ ಕಮಲಾಕರ ಅವರು ಪ್ರತಿಕ್ರಿಯೆ ನೀಡಿ ಪ್ರವಾಸಕ್ಕೆ ಯಾವುದೇ ಪೂರ್ವಾನುಮತಿ ಪಡೆದಿಲ್ಲದ ಕಾರಣ ನಾವು ವಿಷಯವನ್ನು ಗಂಭೀರವಾಗಿ ಪರಿಗಣಿಸು ತ್ತೇವೆ.ಈಗಾಗಲೇ ಶಾಲಾ ಆಡಳಿತ ಮಂಡಳಿಯ ಅಧಿಕಾರಿ ಗಳನ್ನು ಸಂಪರ್ಕಿಸಲಾಗಿದ್ದು ಮಕ್ಕಳು ಎಲ್ಲಿದ್ದರೂ ಶೀಘ್ರಗ ತಿಯಲ್ಲಿ ಹಿಂತಿರುಗಲು ಆದೇಶಿಸುವಂತೆ ಪ್ರಿನ್ಸಿಪಾಲ್ ಮತ್ತು ಮ್ಯಾನೇಜ್ಮೆಂಟ್ ಇಬ್ಬರಿಗೂ ನಿರ್ದೇಶನ ನೀಡಿದ್ದೇವೆಂದು ಹೇಳಿದ್ದಾರೆ.