ಬೆಂಗಳೂರಿನಲ್ಲಿ NPS ನೌಕರರ ಶಕ್ತಿ ಪ್ರದರ್ಶನ ಎರಡನೇ ದಿನ ನಗರದಲ್ಲಿ ಬೃಹತ್ ಪ್ರಮಾಣದಲ್ಲಿ ನೌಕರರ ಪ್ರತಿಭಟನೆ…..

Suddi Sante Desk
ಬೆಂಗಳೂರಿನಲ್ಲಿ NPS ನೌಕರರ ಶಕ್ತಿ ಪ್ರದರ್ಶನ ಎರಡನೇ ದಿನ ನಗರದಲ್ಲಿ ಬೃಹತ್ ಪ್ರಮಾಣದಲ್ಲಿ ನೌಕರರ ಪ್ರತಿಭಟನೆ…..

ಬೆಂಗಳೂರು

ರಾಜ್ಯದ ಸರ್ಕಾರಿ ನೌಕರರಿಗೆ ಮರಣ ಶಾಸನ ವಾಗಿರುವ ಹೊಸ ಪಿಂಚಣಿ ವ್ಯವಸ್ಥೆ ವಿರುದ್ಧ ಮಾಡು ಇಲ್ಲವೆ ಮಡಿ ಹೋರಾಟವನ್ನು ಬೆಂಗಳೂರಿನಲ್ಲಿ NPS ನೌಕರರು ಮಾಡುತ್ತಿದ್ದು ಎರಡನೇ ದಿನವೂ ಮುಂದುವರೆದಿದೆ.ಈ ಒಂದು ಹೊಸ ಪಿಂಚಣಿ ಯೋಜನೆ ವಿರುದ್ಧ ಸಮರ ಸಾರಿರುವ ರಾಜ್ಯದ ಎನ್ ಪಿ ಎಸ್ ನೌಕರರು ಹೋರಾಟ ಮಾಡುತ್ತಿದ್ದಾರೆ.

ನಿನ್ನೆಯಿಂದ ನಗರದ ಫ್ರೀಡಂ ಪಾರ್ಕ್ ನಲ್ಲಿ ಈ ಒಂದು ಹೋರಾಟವನ್ನು ಮಾಡಲಾಗುತ್ತಿದ್ದು ಎರಡನೇ ದಿನವಾದ ಇಂದು ನಗರದಲ್ಲಿ ಎನ್ ಪಿ ಎಸ್ ನೌಕರರು ಬೃಹತ್ ಪ್ರಮಾಣದಲ್ಲಿ ಪ್ರತಿಭ ಟನೆ ಮಾಡಿದರು.ರಾಜ್ಯದ ಮೂಲೆ ಮೂಲೆ ಗಳಿಂದ ಆಗಮಿಸಿದ ನೌಕರರು ಶಕ್ತಿ ಪ್ರದರ್ಶನ ಮಾಡಿ ಘರ್ಜನೆ ಮಾಡಿದರು.

 

 

ಎನ್ ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಾಂತಾರಾಮ್ ನೇತೃತ್ವದಲ್ಲಿ ಈ ಒಂದು ಪ್ರತಿಭಟನೆ ಹೋರಾಟ ನಡೆಯುತ್ತಿದ್ದು ಹೊಸ ಪಿಂಚಣಿ ಯೋಜನೆ ರದ್ದು ಮಾಡಿ ಈ ಕೂಡಲೇ ಹಳೆಯ ಪಿಂಚಣಿ ಯೋಜನೆ  ಜಾರಿಗೆ ತರುವ ಕುರಿತು ಪಟ್ಟು ಹಿಡಿದಿದ್ದಾರೆ ನೌಕರರು.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.