ಹುಬ್ಬಳ್ಳಿ –
ಯಾರದೋ ಹೆಸರಿನ ಮೇಲೆ ಇನ್ನೊಬ್ಬರ ಕೆಲಸ ಮಾಡುವವರಿಗೆ ಎಚ್ಚರಿಕೆ ನೀಡಿದ ನಿತೀನ ಇಂಡಿ ಮಹಾನಗರ ಪಾಲಿಕೆಯಲ್ಲಿ ಯಾವುದೇ ಅವ್ಯವ ಹಾರ ಮಾಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರು
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸಾರ್ವಜನಿಕ ಆರೋಗ್ಯ ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ನಿತೀನ ಇಂಡಿ ಪಾಲಿಕೆಯ ಆರೋಗ್ಯ ನೀರಿಕ್ಷಕ ಅಧಿಕಾರಿಗಳೊಂದಿಗೆ ಮಹತ್ವದ ಸಭೆಯನ್ನು ಮಾಡಿದರು.ಹೌದು ಹುಬ್ಬಳ್ಳಿಯ ಮಹಾನಗರ ಪಾಲಿಕೆಯ ಕಚೇರಿಯಲ್ಲಿ ಪಾಲಿಕೆಯ ಅಧಿಕಾರಿ ಗಳೊಂದಿಗೆ ಸಭೆ ಮಾಡಿದ ಅವರು ಕೆಲವೊಂ ದಿಷ್ಟು ವಿಚಾರಗಳ ಕುರಿತಂತೆ ಚರ್ಚೆಯನ್ನು ಮಾಡಿದರು
ಇದೇ ವೇಳೆ ಸಭೆಯಲ್ಲಿ ಮಾತನಾಡಿದ ಕೆಲವು ಸಲಹೆ ಸೂಚನೆಗಳನ್ನು ನೀಡಿದರು.ಆರೋಗ್ಯ ನಿರೀಕ್ಷಕರ ಈ ಒಂದು ಸಭೆಯಲ್ಲಿ ಮಹಾನಗರ ಪಾಲಿಕೆಯ ಎಲ್ಲಾ ವಾರ್ಡಗಳಲ್ಲಿ ಪೌರಕಾರ್ಮಿಕ ಹಾಜರಾತಿ ನಿಗದಿತ ಸಮಯದಲ್ಲಿ ತೆಗೆದುಕೊಂ ಡು ಯಾರದೋ ಹೆಸರಿನ ಮೇಲೆ ಇನ್ನೊಬ್ಬರು ಕೆಲಸ ಮಾಡುವ ಹಾಗೂ ಕೆಲಸ ಮಾಡದೇ ಬೇರೆ ಕಡೆ ಇದ್ದು ಇಲ್ಲಿ ಪೌರ ಕಾರ್ಮಿಕ ಅಂತ ಹಾಜರಿ ಇರುವುದನ್ನು ಪರಿಶೀಲನೆ ಕೈಗೊಂಡುಯಾವುದೇ ಅವ್ಯವಹಾರ ಆಗದಂತೆ
ಸರಿಯಾದ ರೀತಿಯಲ್ಲಿ ಮಹಾನಗರದಲ್ಲಿ ಕಾರ್ಯ ಮಾಡಬೇಕು ಹಾಗೂ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬಾಕಿ ಇರುವ ಟ್ರೇಡ್ ಲೈಸೆನ್ಸ್ ಗಳ ಕುರಿತು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು.ಇನ್ನೂ ಪಾಲಿಕೆಯ ಆಯ ವ್ಯಯದಲ್ಲಿ ನೀಡಲಾದ ಗುರಿಯನ್ನು ನಿಗದಿತ ವೇಳೆಯಲ್ಲಿ ಸಾಧಿಸಲು ಸ್ಥಾಯಿ ಸಮಿತಿಯ ಅಧ್ಯಕ್ಷರಾದ ನಿತೀನ ಇಂಡಿಯವರು ಸೂಚಿಸಿ ದರು
ಈ ಸಂದರ್ಭದಲ್ಲಿ ಸಾರ್ವಜನಿಕ ಆರೋಗ್ಯ ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಸದಸ್ಯರು ಹಾಗೂ ಮುಖ್ಯವೈದ್ಯಾ ಧಿಕಾರಿಗಳಾದ ಶ್ರೀಧರ ದಂಡಪ್ಪನವರ ಸೇರಿ ದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..