ಸುದ್ದಿ ಸಂತೆಗೆ ವರ್ಷದ ಸಂಭ್ರಮ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪರವಾಗಿ ಡಿಜಿಟಲ್ ಮೀಡಿಯಾ ಗೆ ಶುಭ ಹಾರೈಕೆ ಅಭಿನಂದನೆ ಸಲ್ಲಿಕೆ…..

Suddi Sante Desk

ಧಾರವಾಡ –

ಹೊಸ ಕನಸು ಹೊಸ ಭರವಸೆಯೊಂದಿಗೆ ಸ್ಥಳೀಯ ಮತ್ತು ರಾಜ್ಯದ ದೇಶ ವಿದೇಶಗಳ ಸುದ್ದಿಗಳನ್ನು ಅದರಲ್ಲೂ ಮುಖ್ಯವಾಗಿ ನೊಂದ ಜನರ ಧ್ವನಿಯಾಗಿ ಕೆಲಸವನ್ನು ಮಾಡುತ್ತಿರುವ ಸುದ್ದಿ ಸಂತೆ ಡಿಜಿಟಲ್ ಮೀಡಿಯಾಗೆ ಈಗ ಒಂದು ವರ್ಷದ ಸಂಭ್ರಮ.

ಒಂದು ವರ್ಷದ ಅವಧಿ ಯಲ್ಲಿಯೇ ಸಾಕಷ್ಟು ಪ್ರಮಾಣ ದಲ್ಲಿ ಅದರಲ್ಲೂ ರಾಜ್ಯದ ಶಿಕ್ಷಕರ ಸಮಸ್ಯೆಗಳ ಕುರಿತಂತೆ ಸರ್ಕಾರವನ್ನು ಸಚಿವರನ್ನು ಇಲಾಖೆಯನ್ನು ಗಮನ ಸೆಳೆಯುತ್ತಾ ಹೆಸರನ್ನು ಮಾಡಿರುವ ನಿಮ್ಮ ಸುದ್ದಿ ಸಂತೆ ವೇಬ್ ನ್ಯೂಸ್ ನ ಪ್ರಥಮ ವಾರ್ಷಿಕೊತ್ಸವಕ್ಕೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಕೂಡಾ ಶುಭ ಹಾರೈಸಿದೆ.

ನಾಡಿನ ಶಿಕ್ಷಕರ ಪರವಾಗಿ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.ವೇಗವಾಗಿ ತೀವ್ರ ಗತಿಯಲ್ಲಿ ಸ್ಥಳೀಯ ಮತ್ತು ರಾಜ್ಯದ ಎಲ್ಲಾ ವರ್ಗದ ಜನರ ಧ್ವನಿಯಾಗಿ ಕೆಲಸ ಮಾಡುತ್ತಿರುವ ಅದರಲ್ಲೂ ಶಿಕ್ಷಕರ ಸಮಸ್ಯೆ ಗಳ ಕುರಿತು ವರದಿ ಮಾಡುತ್ತಿರುವ ನ್ಯೂಸ್ ಇನ್ನಷ್ಟು ಎತ್ತರ ಮಟ್ಟಕ್ಕೆ ಬೆಳೆಯಲ್ಲಿ ಎಂದು ಹಾರೈಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.