ಸಿರಿಗೆರಿ –
OTS ಗಾಗಿ ಸಿರಿಗೇರಿಯತ್ತ ಮುಖ ಮಾಡಿದ ನಾಡಿನ ಶಿಕ್ಷಕರು – ರಾಜ್ಯದ ಮೂಲೆ ಮೂಲೆಗಳಿಂದ ನ್ಯಾಯ ಪೀಠದ ಮುಂದೆ ವರ್ಗಾವಣೆಗಾಗಿ ನ್ಯಾಯ ಕೇಳಲು ನ್ಯಾಯ ಪೀಠದ ಮುಂದೆ ಶಿಕ್ಷಕ ಬಂಧುಗಳು
ಹೌದು ಯಾರಿಗೂ ಯಾವ ಇಲಾಖೆಗೂ ಇಲ್ಲದ ಅವೈಜ್ಞಾನಿ ಕವಾದ ವರ್ಗಾವಣೆಯ ನೀತಿ ನಿಯಮಗಳಿಂದಾಗಿ ತಂದೆ ತಾಯಿ ಬಂಧು ಬಳಗ ಹೆಂಡತಿ ಮಕ್ಕಳು ಹೀಗೆ ಎಲ್ಲರನ್ನೂ ಮರೆತು ದಿಕ್ಕಾಪಾಲಾಗಿ ನೆಮ್ಮದಿ ಇಲ್ಲದೇ ಶಿಕ್ಷಕರು ತಮ್ಮ ಸ್ವಂತ ಜಿಲ್ಲೆಯಿಂದ ನೂರಾರು ಕಿಲೋ ಮೀಟರ್ ದೂರ ದಲ್ಲಿದ್ದುಕೊಂಡು ಶಿಕ್ಷಕರಾಗಿ ಕರ್ತವ್ಯವನ್ನು ಮಾಡುತ್ತಿ ದ್ದಾರೆ ಶಿಕ್ಷಕರು
ಎಲ್ಲರ ಹಾಗೇ ಒಮ್ಮೆಯಾದರೂ ನಮ್ಮ ಸ್ವಂತ ಜಿಲ್ಲೆಗೆ ಹೋಗಲು ಅವಕಾಶ ಕೊಡಿ ಎಂದು ಕೇಳಿ ಕೇಳಿ ಬೇಸತ್ತಿ ರುವ ಶಿಕ್ಷಕರು ಈಗ ತಮ್ಮ ನೋವಿಗೆ ಯಾರು ಸ್ಪಂದಿಸು ತ್ತಿಲ್ಲ ನೋಡುತ್ತಿಲ್ಲ ಒಂದೆರೆಡು ಬಾರಿ ಬೆಂಗಳೂರು ಚಲೋ ಮಾಡಿ ಮಾಡಿ ಬೇಸತ್ತಿರುವ ಶಿಕ್ಷಕರು ಈ ಪೈನಲ್ ಆಗಿ ನಾಡಿನ ಹೆಸರಾಂತ ಮಠಗಳಲ್ಲಿ ಒಂದಾಗಿರುವ ಸಿರಿಗೆರಿ ಯ ತರಳಬಾಳು ಮಠಕ್ಕೆ ಆಗಮಿಸಿದ್ದಾರೆ
ಹೌದು ಈ ಒಂದು ಮಠದಲ್ಲಿ ನ್ಯಾಯಪೀಠ ವೊಂದು ಇದೆ ಹೀಗಾಗಿ ಎಲ್ಲೂ ಸಿಗಲಾರದ ಗೆಲುವು ಈ ಒಂದು ಪೀಠದಲ್ಲಿ ಸಿಗುತ್ತದೆ ಎಂಬ ಬಲವಾದ ನಂಬಿಕೆ ಈಗಲೂ ಇದೆ ಈ ಒಂದು ಹಿನ್ನಲೆಯಲ್ಲಿ ಕಳೆದೊಂದು ತಿಂಗಳ ಹಿಂದೆ ನ್ಯಾಯ ಪೀಠಕ್ಕೆ ಒಟಿಎಸ್ ವಿಚಾರ ಕುರಿತಂತೆ ಅರ್ಜಿಯನ್ನು ಹಾಕಲಾಗಿತ್ತು ಈ ಒಂದು ಅರ್ಜಿಯ ವಿಚಾರಣೆ ಇಂದು ನ್ಯಾಯಪೀಠದ ಮುಂದೆ ಬರಲಿದ್ದು ಹೀಗಾಗಿ ಸ್ವಂತ ಜಿಲ್ಲೆಯ ವರ್ಗಾವಣೆ ನಿರೀಕ್ಷೆಯಲ್ಲಿರುವ ಸಾವಿರಾರು ಶಿಕ್ಷಕರು ರಾಜ್ಯದ ಮೂಲೆ ಮೂಲೆಗಳಿಂದ ಮಠಕ್ಕೆ ಆಗಮಿ ಸಿದ್ದಾರೆ
ತಂದೆ ತಾಯಿ ಬಂಧು ಬಳಗ ಹೆಂಡತಿ ಮಕ್ಕಳೊಂದಿಗೆ ನಾವು ಕೂಡಾ ಇರಬೇಕು ನೆಮ್ಮದಿಯಿಂದ ನೌಕರಿ ಮಾಡ ಬೇಕು ಎಂದುಕೊಂಡಿರುವ ನಾಡಿನ ಅದೇಷ್ಟೋ ಶಿಕ್ಷಕರು ಸಾವಿರಾರು ಕಿಲೋ ಮೀಟರ ದೂರ ದೂರದಿಂದ ಹೊರ ಟಿದ್ದಾರೆ.ಜಗದ್ಗುರು ತರಳಬಾಳು ಸಿರಿಗೇರಿ ಮಠದ ನ್ಯಾಯ ಪೀಠದ ಮುಂದೆ ಈ ಒಂದು ಅರ್ಜಿಯ ವಿಚಾರಣೆ ಬರಲಿದ್ದು ರಾಜ್ಯದ ಮೂಲೆ ಮೂಲೆಗಳಿಂದ ಸಾಕಷ್ಟು ಪ್ರಮಾಣದಲ್ಲಿ ಶಿಕ್ಷಕರು ಮುಖ ಮಾಡಿದ್ದು ನ್ಯಾಯ ಕೇಳಲು ಕುಳಿತಿದ್ದು ಶಿಕ್ಷಕ ಬಂಧುಗಳು ಈವರೆಗೆ ರಾಜ್ಯ ಸರ್ಕಾರ ಶಿಕ್ಷಣ ಸಚಿವರು ಸಂಘಟನೆಯ ನಾಯಕರನ್ನು ನಂಬಿ ಕೊಂಡು ಕುಳಿತಿರುವ ಶಿಕ್ಷಕರು ಈಗ ಸಿರಿಗೇರಿ ಮಠದ ನ್ಯಾಯಪೀಠಕ್ಕೆ ಮೊರೆ ಹೋಗಿದ್ದಾರೆ ನಾಡಿನ ಒಟಿಎಸ್ ಶಿಕ್ಷಕರು ಮಠದ ನ್ಯಾಯಪೀಠ ದಲ್ಲಿ ನ್ಯಾಯ ಸಿಗಲಿದೆ ಎಂಬ ನಿರೀಕ್ಷೆಯನ್ನು ಇಟ್ಟುಕೊಂಡು ತರಳಬಾಳು ಸಿರಿಗೆರಿ ಮಠಕ್ಕೆ ಬಂದಿದ್ದು.ಒಟಿಎಸ್ ಸಂಘಟನೆಯ ಮಹೇಶ್ ಮಡ್ಡಿ ಮತ್ತು ಗ್ರಾಮೀಣ ಪ್ರೌಢ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾಗಿರುವ ಪವಾಡೆಪ್ಪ ಅವರ ನೇತ್ರತ್ವದಲ್ಲಿ ಶಿಕ್ಷಕರ ಬಳಗ ಹೊರಟಿದ್ದು ಅರ್ಜಿ ವಿಚಾರಣೆ ನಡೆಯ ಲಿದ್ದು ದೇವರು ನೊಂದುಕೊಂಡಿರುವ ಶಿಕ್ಷಕರ ಆಸೆಯನ್ನು ಈಡೇರಿಸಲಿ ಒಳ್ಳೇಯದಾಗಲಿ ಎಲ್ಲರ ಹಾಗೆ ಇವರಿಗೂ ಕೂಡಾ ಸ್ವಂತ ಜಿಲ್ಲೆಗೆ ಹೋಗುವ ಅವಕಾಶ ಸಿಗಲಿ ನಾಳೆಯ ನ್ಯಾಯಪೀಠದಲ್ಲಿ ಗೆಲುವು ಸಿಗಲಿ ಎಂಬ ಪ್ರಾರ್ಥನೆ ನಮ್ಮದು ಸಮಸ್ತ ನಾಡಿನ ಶಿಕ್ಷಕ ಬಂಧುಗಳಾ ಗಿದೆ.