ನಮ್ಮ ಸರ್ಕಾರಿ ಶಾಲೆಗಳು ಕೇವಲ ಶಿಕ್ಷಣಕ್ಕೆ ಮಾತ್ರ ಅಲ್ಲದೇ ಸೌಹಾರ್ದತೆ ಸಾಕ್ಷಿ – ಜಾತಿ ಜಾತಿ ಅಂತಾ ಬಡಿದಾಡುತ್ತಿರುವ ನಡುವೆ ಶಾಲೆಯಲ್ಲಿ ಮಕ್ಕಳು ಹೇಗಿದ್ದಾರೆ ಶಿಕ್ಷಕರು ಎಂತಹ ಶಿಕ್ಷಣ ಕೊಟ್ಟಿದ್ದಾರೆ ನೋಡಿ…..

Suddi Sante Desk

ವಾಡಿ –

ಒಂದೆಡೆ ರಾಜ್ಯದಲ್ಲಿ ಮೊಟ್ಟೆ ವಿರೋಧಿಸಿ ಹೋರಾಟ ನಡೆಯುತ್ತಿದ್ದರೆ ಇನ್ನೊಂದೆಡೆ ಮಕ್ಕಳು ಶಾಲೆಯಲ್ಲಿ ಮೊಟ್ಟೆ ಮತ್ತು ಹಣ್ಣು ಹಂಚಿಕೊಂಡು ಜೊತೆಯಲ್ಲಿ ಕುಳಿತು ಕೊಂಡು ತಿನ್ನುತ್ತಿದ್ದಾರೆ.ಹೌದು ಇಂತಹ ಅಪರೂಪದ ದೃಶ್ಯ ರಾಜ್ಯದ ಸರ್ಕಾರಿ ಶಾಲೆಯಲ್ಲಿ ಕಂಡು ಬಂದಿತು.ಒಬ್ಬ ವಿದ್ಯಾರ್ಥಿನಿ ಕೈಯಲ್ಲಿ ಮೊಟ್ಟೆ ಹಿಡಿದು ಕುಳಿತರೆಇನ್ನೋರ್ವ ವಿದ್ಯಾರ್ಥಿನಿ ಬಾಳೆಹಣ್ಣು ಹಿಡಿದುಕೊಂಡು ಬಿಸಿಯೂಟ ವನ್ನು ಒಂದೇ ತಟ್ಟೆಯಲ್ಲಿ ತಿನ್ನುವ ಮೂಲಕ ಸೌಹಾರ್ದತೆ ಮೆರೆದಿದ್ದಾರೆ.

ಚಿತ್ತಾಪುರ ತಾಲೂಕಿನ ಕೊಂಚೂರು ಗ್ರಾಮದ ಸರಕಾರಿ ಹಿರಿಯರ ಪ್ರಾಥಮಿಕ ಶಾಲೆಯಲ್ಲಿ ಕಂಡು ಬಂದಿತು. ಶಾಲೆ ಯಲ್ಲಿ ಸಸ್ಯಹಾರಿ ಮತ್ತು ಮಾಂಸಹಾರಿ ವಿದ್ಯಾರ್ಥಿ ಗಳಿಬ್ಬರು ಪರಸ್ಪರ ಮುಖಾಮುಖಿಯಾಗಿ ಕುಳಿತುಕೊಂಡು ಬಿಸಿಯೂಟ ಸವಿಯುತ್ತಿದ್ದ ಅಪರೂಪದ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು ಸಧ್ಯ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿ ಎಲ್ಲರ ಕಣ್ಣಿಗೆ ಬಿದ್ದಿದೆ.

ಶಾಲೆಯ 8 ನೇ ತರಗತಿಯ ಮಹೆರಾಬೇಗಂ ಮತ್ತು ಭಾಗ್ಯ ಈ ಸೌಹಾರ್ದತೆ ಮೆರೆದ ಮಕ್ಕಳು.ನಮ್ಮಿಬ್ಬರ ಆಹಾರದ ರುಚಿ ಭಿನ್ನವಾಗಿರಬಹುದು ಆದರೆ ನಮ್ಮ ಸ್ನೇಹ ಸೌಹಾರ್ದ ತೆ ರಕ್ತ ಸಂಬಂಧಕ್ಕಿಂತಲೂ ಮಿಗಿಲಾಗಿದೆ.ನಾವು ಜತೆಗೂಡಿ ಮೊಟ್ಟೆ ಹಣ್ಣು ಸೇವಿಸುತ್ತೇವೆ ಇದರಿಂದ ನಮಗೇನೂ ಮುಜುಗರವಿಲ್ಲ.ಮೊಟ್ಟೆ ಕೈಬಿಡಬೇಡಿ ಹಣ್ಣು ಕೂಡ ನಿಲ್ಲಿಸ ಬೇಡಿ ಆಯ್ಕೆ ನಮಗೆ ಬಿಡಿ ಎನ್ನುತ್ತಾರೆ ಮುಗ್ದ ಮಕ್ಕಳು. ಮೊಟ್ಟೆ ಮತ್ತು ಹಣ್ಣು ವಿತರಣೆ ಯೋಜನೆ ಆರಂಭವಾದ ಗಳಿಗೆಯಿಂದ ಶಾಲೆಯಲ್ಲಿ ಶೇ.10 ದಾಖಲಾತಿ ಹೆಚ್ಚಿದ್ದು ಇದನ್ನು ನೋಡತಾ ಇದ್ದರೆ ಜಾತಿ ಜಾತಿ ಎಂದು ಬಡಿದಾ ಡುತ್ತಿರುವ ಇಂದಿನ ಸಮಾಜದ ನಡುವೆ ಈ ಮಕ್ಕಳು ಮಾದರಿಯಾಗಿದ್ದು ಇನ್ನೂ ಇಂತಹ ಆದರ್ಶ ಶಿಕ್ಷಣ ನೀಡಿದ ಶಿಕ್ಷಕರಿಗೆ ನಮ್ಮದೊಂದು ಅಭಿನಂದನೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.