PDO ಆತ್ಮಹತ್ಯೆ ಅಮಾನತು ಗೊಂಡ ಬೆನ್ನಲ್ಲೇ ಆತ್ಮಹತ್ಯೆಗೆ ಶರಣಾಧ ಪಿಡಿಒ ರವಿ ಸಾವಿಗೆ ಶರಣು…..

Suddi Sante Desk


ರಾಮನಗರ –

ಅಮಾನತುಗೊಂಡ ಪಿಡಿಒ ರೊಬ್ಬರು ಆತ್ಮಹತ್ಯೆ ಮಾಡಿ ಕೊಂಡ ಘಟನೆ ರಾಮನಗರ ದಲ್ಲಿ ನಡೆದಿದೆ.ಹೌದು ಕರ್ತವ್ಯ ಲೋಪ ಹಿನ್ನಲೆಯಲ್ಲಿ ಮೇಲಾಧಿಕಾರಿಗಳು ಇವರನ್ನು ಇತ್ತೀಚಿಗಷ್ಟೇ ಕೆಲಸದಿಂದ ಅಮಾನತು ಮಾಡಿ ದ್ದರು.ಹೀಗಾಗಿ ಬೇಸತ್ತು ಬೈರಮಂಗಲ ಗ್ರಾಮ ಪಂಚಾ ಯಿತಿ ಪಿಡಿಒ ರವಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಅಕ್ರಮವಾಗಿ ಇ-ಖಾತೆ ಮಾಡಿದ ಆರೋಪ ಪಿಡಿಒ ರವಿ ವಿರುದ್ಧ ಕೇಳಿಬಂದಿತ್ತು. ಯಲಹಂಕ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಕೂಡಾ ಪ್ರಕರಣ ದಾಖಲಾಗಿತ್ತು ಈ ಹಿನ್ನೆಲೆ ರವಿ ಅವರನ್ನು ಜಿಲ್ಲಾ ಪಂಚಾಯಿತಿ ಸಿಇಒ ಇಕ್ರಂ ಅವರು ಕೆಲಸದಿಂದ ಅಮಾನತು ಮಾಡಿದ್ದರು.

ಇದರಿಂದ ಮನನೊಂದ ರವಿ ಹಾರೋಹಳ್ಳಿಯ ಕೊಳ್ಳಗಂ ಡನಹಳ್ಳಿ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.