ಮೈಸೂರು –
ಸಹ ಶಿಕ್ಷಕರಿಂದ ಮುಖ್ಯ ಶಿಕ್ಷಕರ ಬಡ್ತಿಯ ವಿಚಾರವಾಗಿ ಮಾನ್ಯ ಆಯುಕ್ತರಿಗೆ ಸ್ಥಳನಿಯುಕ್ತಿ ಆದೇಶಗಳನ್ನು ಕೊಡುವ ಸಂಬಂಧ ನಿರ್ದೇಶನ ನೀಡಬೇಕೆಂದು ಮೈಸೂರಿಗೆ ಭೇಟಿ ನೀಡಿದ್ದ ಶಿಕ್ಷಣ ಸಚಿವರನ್ನು ಶಿಕ್ಷಕರ ನಿಯೋಗ ಭೇಟಿ ಮಾಡಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ K B ಸೋಮೇಗೌ ಡರವರು,ಸರ್ಕಾರಿ ನೌಕರರ ಸಂಘದ ಹಿರಿಯ ಉಪಾ ಧ್ಯಕ್ಷರಾದ ಮಾಲಂಗಿ ಸುರೇಶ್,ಜಿಲ್ಲಾ ಸಂಘದ ಪದಾಧಿ ಕಾರಿಗಳು,ತಾಲೂಕು ಸಂಘದ ಪದಾಧಿಕಾರಿಗಳು ,ಮತ್ತು ಮಂಜಣ್ಣನವರು ಹಾಜರಿದ್ದರು.ಈ ಸಂದರ್ಭದಲ್ಲಿ ಜಿಲ್ಲಾ ಸಂಘದಿಂದ ಶಿಕ್ಷಣ ಸಚಿವರಿಗೆ ಮನವಿ ನೀಡಲಾಯಿತು
ಸದಾ ಶಿಕ್ಷಕರ ಸೇವೆಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಶಾಖೆ ಮೈಸೂರು.