ಸಾಪ್ಟ್‌ವೇರ್ ಎಂಜಿನಿಯರ್ ಆತ್ಮಹತ್ಯೆ – ಸ್ಥಳಕ್ಕೇ ಪೊಲೀಸರು ಭೇಟಿ ಪರಿಶೀಲನೆ…..

Suddi Sante Desk
ಸಾಪ್ಟ್‌ವೇರ್ ಎಂಜಿನಿಯರ್ ಆತ್ಮಹತ್ಯೆ – ಸ್ಥಳಕ್ಕೇ ಪೊಲೀಸರು ಭೇಟಿ ಪರಿಶೀಲನೆ…..

ಕಾರವಾರ

ಬೆಂಗಳೂರು ಮೂಲದ ಸಾಪ್ಟ್‌ವೇರ್ ಎಂಜಿನಿಯರ್ ಗೋಕರ್ಣದಲ್ಲಿ ಆತ್ಮಹತ್ಯೆ  ಗೋಕರ್ಣದ ಓಂ ಬೀಚ್ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದ ಪ್ರವಾಸಿಗ ಹೌದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕು ನಲ್ಲಿ ಈ ಒಂದು ಘಟನೆ ನಡೆದದೆ.ರಿಷಿಕೇಶ ರೆಡ್ಡಿ(35) ಆತ್ಮಹತ್ಯೆಗೆ ಶರಣಾದ ಪ್ರವಾಸಿಗನಾಗಿದ್ದಾನೆ.

3 ದಿನ ರೂಂ ಬಾಡಿಗೆ ಪಡೆದಿದ್ದ ರಿಷಿಕೇಶ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಶಂಕೆ ಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.ಇನ್ನೂ ಈ ಒಂದು ಸುದ್ದಿ ಯನ್ನು ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಗೋಕರ್ಣ ಪೊಲೀಸರು.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ ಈ ಒಂದು ಕುರಿತು ಗೋಕರ್ಣ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಗೋಕರ್ಣ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.