This is the title of the web page
This is the title of the web page

Live Stream

[ytplayer id=’1198′]

April 2025
T F S S M T W
 12
3456789
10111213141516
17181920212223
24252627282930

| Latest Version 8.0.1 |

State News

ಶಿಕ್ಷಕರ ನಿರ್ಲಕ್ಷ್ಯ ದಿಂದ ಕಣ್ಣು ಕಳೆದುಕೊಂಡ ಬಾಲಕ – ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಪ್ರಜ್ವಲ್…..

WhatsApp Group Join Now
Telegram Group Join Now

ವಿಜಯನಗರ –

ಶಾಲೆಯಲ್ಲಿ ಬಾಲಕನೊಬ್ಬನ ಕಣ್ಣಿಗೆ ಬೆತ್ತ ತಗುಲಿ ಒಂದು ಕಣ್ಣಿನ ದೃಷ್ಟಿ ಸಂಪೂರ್ಣವಾಗಿ ಹಾಳಾದ ಘಟನೆ ವಿಜಯ ನಗರ ಜಿಲ್ಲೆಯಲ್ಲಿ ನಡೆದಿದೆ.ಹೌದು ಜಿಲ್ಲೆಯ ಕಾನಹೊ ಸಹಳ್ಳಿ ಸಮೀಪದ ಚೌಡಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಂದನೇ ತರಗತಿಯ ಬಾಲಕನ ಕಣ್ಣಿಗೆ ಬೆತ್ತ ತಗುಲಿ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿದೆ ಎಂ.ಬಿ.ಪ್ರಜ್ವಲ್ ಕಣ್ಣು ಕಳೆದುಕೊಂಡ ಬಾಲಕನಾಗಿದ್ದು ಡಿಸೆಂಬರ್ 31 ರಂದು ಶಾಲೆಗೆ ಹೋದ ಈ ಬಾಲಕನ ಕಣ್ಣಲ್ಲಿ ರಕ್ತ ಸುರಿಯುತ್ತಿದೆ ಎಂಬ ವಿಷಯ ತಿಳಿದು ಶಾಲೆಗೆ ಹೋಗಿ ನೋಡಿದಾಗ ಅಲ್ಲಿದ್ದ ಶಿಕ್ಷಕರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಎಂದು ಬಾಲಕನ ತಂದೆ ಮಡಿವಾಳರ ಬಿರೇಂದ್ರ ಕುಮಾರ್ ಹೇಳಿದ್ದಾರೆ

ಇನ್ನೂ ಕೂಡಲೇ ಬಾಲಕನನ್ನು ಕೂಡ್ಲಿಗಿ ತಾಲ್ಲೂಕು ಆಸ್ಪತ್ರೆ ಗೆ ಕರೆದುಕೊಂಡು ಹೋದಾಗ ಬಾಲಕನ ಒಂದು ಕಣ್ಣಿನ ಗುಡ್ಡೆ ಹೋಗಿದೆ ಎಂದು ವೈದ್ಯರು ತಿಳಿಸಿದರು.ಬಳಿಕ ಬಳ್ಳಾರಿಯ ವಿಮ್ಸ್ ಗೆ ದಾಖಲಿಸಿದ್ದು ಅಲ್ಲಿನ ವೈದ್ಯರು ಬಾಲಕನ ಎಡಗಣ್ಣು ಸಂಪೂರ್ಣ ಹೋಗಿದೆ ದೃಷ್ಟಿ ಬರುವು ದಿಲ್ಲ ಬಲಗಣ್ಣಿಗೂ ತೊಂದರೆಯಾಗಬಹುದು ಎಂದು ಹೇಳಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಸಧ್ಯ ಇತ್ತ ಅಧಿಕಾರಿಗಳು ಮಾತ್ರ ಮೌನವಾಗಿದ್ದು ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು


Google News

 

 

WhatsApp Group Join Now
Telegram Group Join Now
Suddi Sante Desk