ದಾರು ಕುಡ್ಯಾಕ ಗ್ಲಾಸ್ ಕೊಡಲಿಲ್ಲವೆಂದು ಪ್ರಕಾಶ್ ಗೆ ಚಾಕು ಹಾಕಿದ ಜಾವೇದ್ – ಹಾಡು ಹಗಲೇ ಹುಬ್ಬಳ್ಳಿಯಲ್ಲಿ ಸರಾಯಿ ನಿಶೆಯಲ್ಲಿ ಸರಾಯಿ ಬಾಟಲ್ ನಿಂದ ಹಲ್ಲೆ ಮಾಡಿ ಚಾಕು ಹಾಕಿದ ಜಾವೇದ್…..

Suddi Sante Desk
ದಾರು ಕುಡ್ಯಾಕ ಗ್ಲಾಸ್ ಕೊಡಲಿಲ್ಲವೆಂದು ಪ್ರಕಾಶ್ ಗೆ ಚಾಕು ಹಾಕಿದ ಜಾವೇದ್ – ಹಾಡು ಹಗಲೇ ಹುಬ್ಬಳ್ಳಿಯಲ್ಲಿ ಸರಾಯಿ ನಿಶೆಯಲ್ಲಿ ಸರಾಯಿ ಬಾಟಲ್ ನಿಂದ ಹಲ್ಲೆ ಮಾಡಿ ಚಾಕು ಹಾಕಿದ ಜಾವೇದ್…..

ಹುಬ್ಬಳ್ಳಿ

ದಾರು ಕುಡ್ಯಾಕ ಗ್ಲಾಸ್ ಕೊಡಲಿಲ್ಲವೆಂದು ಪ್ರಕಾಶ್ ಗೆ ಚಾಕು ಹಾಕಿದ ಜಾವೇದ್ – ಹಾಡು ಹಗಲೇ ಹುಬ್ಬಳ್ಳಿಯಲ್ಲಿ ಸರಾಯಿ ನಿಶೆಯಲ್ಲಿ ಸರಾಯಿ ಬಾಟಲ್ ನಿಂದ ಹಲ್ಲೆ ಮಾಡಿ ಚಾಕು ಹಾಕಿದ ಜಾವೇದ್

ಸರಾಯಿ ಕುಡಿಯಲು ಅಂಗಡಿಯೊಂದರಲ್ಲಿ ಗ್ಲಾಸ್ ಇಟ್ಟಿಲ್ಲವೆಂದು ಅಂಗಡಿ ಮಾಲೀಕನ ಮೇಲೆ ಚಾಕು ಇರಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.ನಗರದ ಹಳೆ ಹುಬ್ಬಳ್ಳಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಹಾಡು ಹಗಲೇ ಚಾಕು ಇರಿತ ಪ್ರಕರಣ ನಡೆದಿದ್ದು ನಗರದ ಆನಂದ ನಗರದ ಅಂಬೇಡ್ಕರ್ ಕಾಲೋನಿಯಲ್ಲಿ ಘಟನೆ ನಡೆದಿದೆ.ಪ್ರಕಾಶ್ ಕಿತ್ತಳೆ ಚಾಕು ಇರಿತಕ್ಕೊ ಳಗಾದ ಯುವಕನಾಗಿದ್ದು ಇವನೇ ಆನಂದ ನಗರ ದಲ್ಲಿ ಕಿರಾಣಿ ಅಂಗಡಿಯೊಂದನ್ನು ಇಟ್ಟುಕೊಂಡಿ ದ್ದಾನೆ

ಜಾವೇದ್ ಬೆಂಡಿಗೇರಿ ಎಂಬುವನು ಪ್ರಕಾಶನ ಕಿರಾಣಿ ಅಂಗಡಿಗೆ ಬಂದಿದ್ದು ಕುಡಿಯಲು ಗ್ಲಾಸ್ ಕೇಳಿದ್ದಾನೆ.ಗ್ಲಾಸ್ ಇಲ್ಲ ಎಂದಿದ್ದಾನೆ.ಇದರಿಂದ ಕೋಪಗೊಂಡ ಜಾವೇದ್ ಪ್ರಕಾಶ್ ನಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ.ಮಾತಿಗೆ ಮಾತು ಬೆಳೆದು ನಂತರ ಕೈಯಲ್ಲಿದ್ದ ಸರಾಯಿ ಬಾಟಲ್ ನಿಂದ ಪ್ರಕಾಶ್ ನ ಮೇಲೆ ಜಾವೇದ್ ಹಲ್ಲೆಯನ್ನು ಮಾಡಿದ್ದು

ನಂತರ ಚಾಕುವಿನಿಂದ ಹಲ್ಲೆಯನ್ನು ಮಾಡಿದ್ದಾನೆ. ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದ ಪ್ರಕಾಶ್ ಆನಂದ ನಗರದ ನಿವಾಸಿಯಾಗಿದ್ದಾನೆ.ಸಧ್ಯ ತೀವ್ರವಾಗಿ ಗಾಯಗೊಂಡಿರುವ ಪ್ರಕಾಶ್ ನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಇನ್ನೂ ಇತ್ತ ಜಾವೇದ್ ಪರಾರಿಯಾಗಿದ್ದಾನೆ.ಸಧ್ಯ ಈ ಕುರಿತಂತೆ ಸುದ್ದಿಯನ್ನು ತಿಳಿದ ಹಳೆ ಹುಬ್ಬಳ್ಳಿಯ ಪೊಲೀಸರು ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ಮಾಡಿದ್ದು ಆರೋಪಿ ಬಂಧನಕ್ಕೆ ಜಾಲವನ್ನು ಬೀಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

ವರದಿ ಅನಿಲಕುಮಾರ ಉಳವನ್ನವರ ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.