ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರ ಆದೇಶ ವೈರಲ್….. ಇಲಾಖೆಯ ಹೊಸ ಆದೇಶದಿಂದ ಅಸಮಾಧಾನಗೊಂಡಿದ್ದಾರೆ ಗ್ರಾಮೀಣ ಶಿಕ್ಷಕ ಸಂಘದವರು…..

Suddi Sante Desk

ಬೆಂಗಳೂರು –

ಸರ್ಕಾರಿ ಮತ್ತು ಇಲಾಖೆಯ ಕಾರ್ಯಕ್ರಮಗಳಿಗೆ ನೊಂದಾಯಿಣಿ ಮಾನ್ಯತೆ ಪಡೆದ ಶಿಕ್ಷಕರ ಸಂಘ ವನ್ನು ಮಾತ್ರ ಆಹ್ವಾನಿಸುವ ಕುರಿತಂತೆ ಇಲಾಖೆ ಆದೇಶವೊಂದನ್ನು ಮಾಡಿದೆ.ರಾಜ್ಯದಲ್ಲಿ ಮಾನ್ಯತೆ ಹೊಂದಿದ ಸಂಘಟನೆಯನ್ನು ಮಾತ್ರ ಆಹ್ವಾನಿಸ ಬೇಕು ಎಂದು ಆದೇಶ ನೀಡಿದ್ದು ಈ ಒಂದು ಆದೇಶದ ವಿರುದ್ದ ರಾಜ್ಯ ಗ್ರಾಮೀಣ ಶಿಕ್ಷಕರ ಸಂಘದವರು ಅಸಮಾಧಾನಗೊಂಡಿದ್ದಾರೆ. ಎಲ್ಲರನ್ನೂ ಸರಿ ಸಮಾನವಾಗಿ ಕಾಣಬೇಕಾದ ಇಲಾಖೆ ಹೀಗೆ ಯಾಕೇ ಮಾಡಿದೆ ಎಂದು ಸಿಡಿದೆದ್ದಿ ದ್ದು ಹೀಗಾಗಿ ಆ ಒಂದು ಆದೇಶದ ವಿರುದ್ದ ಹಾಗೇ ಆದೇಶವನ್ನು ಮಾಡಿಸಿದವರ ಮೇಲೆ ಸೂಕ್ತವಾದ ಕ್ರಮವನ್ನು ಕೈಗೊಳ್ಳುವಂತೆ ಈಗಾಗಲೇ ಒತ್ತಾಯ ವನ್ನು ಮಾಡುತ್ತಿದ್ದು ಇದೆಲ್ಲದರ ನಡುವೆ ಸಧ್ಯ 2013 ರಲ್ಲಿನ ಆದೇಶವೊಂದು ವೈರಲ್ ಆಗಿದೆ.

ಸರ್ಕಾರಿ ಕಾರ್ಯಕ್ರಗಳಲ್ಲಿ ಎಲ್ಲಾ ಶಿಕ್ಷಕ ಸಂಘಟನೆ ಯವರನ್ನು ಆಹ್ವಾನ ಮಾಡುವ ಕುರಿತಂತೆ ಅಂದು ಈ ಒಂದು ಆದೇಶ ಇದ್ದು ಸಧ್ಯ ಹೀಗೆ ಯಾಕೇ ಎಂಬ ಪ್ರಶ್ನೆಯನ್ನು ನಾಡಿನ ಗ್ರಾಮೀಣ ಶಿಕ್ಷಕರ ಸಂಘದವರು ಪ್ರಶ್ನೆ ಮಾಡುತ್ತಿದ್ದು ನಮಗೂ ಕೂಡಾ ಮಾನ್ಯತೆ ನೀಡುವಂತೆ ಒತ್ತಾಯವನ್ನು ಮಾಡಿ ಈ ಒಂದು ಆದೇಶವನ್ನು ಕೂಡಲೇ ಹಿಂದೆ ತಗೆದು ಕೊಂಡು ಇಲಾಖೆ ಎಲ್ಲರನ್ನೂ ಸರಿ ಸಮಾನವಾಗಿ ಕಾಣುವಂತೆ ಆಗ್ರಹವನ್ನು ಮಾಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.